More

    ರಾಜಕೀಯದಿಂದ ಹಿಂದೆ ಸರಿದ​ ರಜಿನಿ ನಿರ್ಧಾರದಿಂದ ಮನನೊಂದು ಅಭಿಮಾನಿ ಸಾವು!

    ಚೆನ್ನೈ: ರಾಜಕೀಯದಿಂದ ಹಿಂದೆ ಸರಿದ ಸೂಪರ್​ಸ್ಟಾರ್​ ರಜಿನಿಕಾಂತ್​ ನಿರ್ಧಾರದಿಂದ ಮನನೊಂದು ಅಭಿಮಾನಿಯೊಬ್ಬ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ವಿಲ್ಲುಪುರಂನ ಪನಂಪಟ್ಟುದಲ್ಲಿ ನಡೆದಿದೆ.

    ರಾಜ್‌ಕುಮಾರ್ ಮೃತ ರಜಿನಿಕಾಂತ್​ ಅಭಿಮಾನಿ. ರಾಜಕೀಯದಿಂದ ಹಿಂದೆ ಸರಿಯುವುದಾಗಿ ರಜಿನಿ ಘೋಷಣೆ ಮಾಡಿದಾಗಿನಿಂದ​ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರಾಜ್​ಕುಮಾರ್​, ಸ್ನೇಹಿತರ ಜತೆ ಮದ್ಯ ಸೇವಿಸಿದ ನಂತರ ಮಲಗಲು ಹೋದವ ಮತ್ತೇ ಮೇಲೇಳಲೇ ಇಲ್ಲ. ಅಲ್ಲದೆ, ಫೇಸ್​ಬುಕ್​ನಲ್ಲೂ ನನ್ನ ಜೀವನ ಕೊನೆಯ ದಿನವೆಂದು ಬರದುಕೊಂಡಿರುವುದು ತಿಳಿದುಬಂದಿದೆ.

    ಇದನ್ನೂ ಓದಿ: ಗ್ರಾಪಂ ಚುನಾವಣೆಯಲ್ಲಿ ಗೆದ್ದವರಿಗೆ ಶೀಘ್ರವೇ ತರಬೇತಿ: ಇಲ್ಲಿದೆ ಉಪಯುಕ್ತ ಮಾಹಿತಿ

    ಇನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜಿನಿ, ರಾಜಕಾರಣದ ಹೊರತಾಗಿ ಜನಸೇವೆ ಮಾಡುವೆ. ಆರೋಗ್ಯ ಸ್ಥಿತಿ ಸರಿಯಾಗಿಲ್ಲದ ಕಾರಣ ಮತ್ತು ಕೋವಿಡ್ ಪರಿಸ್ಥಿತಿಯ ಕಾರಣ ಸದ್ಯ ಚುನಾವಣಾ ಕಣಕ್ಕೆ ಇಳಿದು ಕೆಲಸಮಾಡಲಾರೆ. ಹೀಗಾಗಿ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

    ಮೂರ್ನಾಲ್ಕು ದಿನಗಳ ಹಿಂದಷ್ಟೇ ಅವರು ಅಣ್ಣಾತ್ತೆ ಚಿತ್ರೀಕರಣದ ಸಂದರ್ಭದಲ್ಲಿ ರಕ್ತದೊತ್ತಡದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಇದ್ದು ಚಿಕಿತ್ಸೆ ಪಡೆದಿದ್ದರು. ಬಿಡುಗಡೆಯಾಗುವ ವೇಳೆ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಡಾಕ್ಟರ್ ಸಲಹೆ ನೀಡಿದ್ದರು ಎಂಬುದನ್ನು ಅವರು ಹೇಳಿದ್ದರು.

    ಇದನ್ನೂ ಓದಿ: ಲಿಫ್ಟ್ ಅಂದುಕೊಂಡು ಒಳಗಡೆ ಹೆಜ್ಜೆಯಿಟ್ಟ ಮಹಿಳಾ ಉದ್ಯೋಗಿಗೆ ಕಾದಿತ್ತು ಭೀಕರ ಸಾವು..!

    ರಜಿನಿಕಾಂತ್​ ಅಭಿಮಾನಿಯ ಸಾವಿನ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅಂತಿಮ ದರ್ಶನಕ್ಕೆ ಇರಿಸಲಾಗಿದ್ದ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಸಂಬಂಧ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಬಿಗ್ ಬ್ರೇಕಿಂಗ್ – ರಾಜಕೀಯದಿಂದ ಹಿಂದೆ ಸರಿದ್ರು ರಜಿನಿಕಾಂತ್​ !

    ಹೊಸ ವರ್ಷ ಹೊಸ ಪಕ್ಷ, ಡಿಸೆಂಬರ್ 31ಕ್ಕೆ ಮಹತ್ವದ ಘೋಷಣೆ ಎಂದ ಸೂಪರ್​ ಸ್ಟಾರ್ ರಜಿನಿ !

    ಶಾಲೆಯಲ್ಲಿ ಕೂರುವ ಸೀಟಿಗಾಗಿ ಜಗಳ; ಕ್ಲಾಸ್​ ರೂಂನಲ್ಲೇ ನಡೆಯಿತು ಮಾರಣ ಹೋಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts