ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯಿಂದ ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಶನಿವಾರ ರಿಟೇಲ್ ಎಕ್ಸ್ಪೋ ಆಯೋಜಿಸಲಾಗಿತ್ತು.
30ಕ್ಕೂ ಹೆಚ್ಚು ಮಳಿಗೆಗಳು ಇದ್ದವು. ಎಲ್ಲ ಮಾದರಿಯ ವಾಹನಗಳು, ವಿಮಾ ಕಂಪನಿಗಳು, ಎಜ್ಯುಕೇಶನಲ್ ಕನ್ಸಲ್ಟಂಟ್ಗಳು, ಬಿಲ್ಡರ್ಸ್, ಡೆವಲಪರ್ಸ್ ಭಾಗವಹಿಸಿದ್ದರು.
ಯೂನಿಯನ್ ಬ್ಯಾಂಕ್ನ ಎಲ್ಲ ರಿಟೇಲ್ ಲೋನ್ಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕೆ. ಭೈರೇಗೌಡ, ಉಪ ಮುಖ್ಯಸ್ಥರಾದ ಕೆ. ದೀಪಕಕುಮಾರ, ರಿತೇಶಕುಮಾರ, ಬಿಶ್ವಜೀತ್ ಸಿಂಗ್, ಇತರರು ಇದ್ದರು.