More

    ನಿಧಿ ಇದೆ ಎಂದು ಕನಸಲ್ಲಿ ಬಂದು ಹೇಳಿದ ದೇವರು!; ಹಾಗೆಂದು ಕಾಡಲ್ಲಿ ಬಾವಿ ತೋಡಲು ಹೋದರು.. ಆಮೇಲಾಗಿದ್ದೇನು?

    ಉತ್ತರಕನ್ನಡ: ನಿಧಿಯ ಆಸೆಯೇ ಒಂಥರ ವಿಚಿತ್ರ. ನಿಧಿಯನ್ನು ಪಡೆಯುವ ಸಲುವಾಗಿ ಮಾಟ-ಮಂತ್ರ, ತಂತ್ರಗಳಂಥ ಕೆಲಸಗಳಾಗುತ್ತವೆ. ಕೊಲೆಯಂಥ ಪ್ರಕರಣಗಳು ಕೂಡ ನಡೆದಿದ್ದೆ. ಆದರೆ ಇಲ್ಲೊಂದು ಕಡೆ ನಿಧಿ ಇದೆ ಎಂದು ಕನಸಲ್ಲಿ ದೇವರೇ ಹೇಳಿತು ಅಂತ ಒಬ್ಬ ಕಾಡಿನಲ್ಲಿ ಬಾವಿ ತೋಡಲು ಹೋದ ಘಟನೆಯೊಂದು ನಡೆದಿದೆ.

    ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಗ್ರಾಮದ ಮೀಸಲು ಅರಣ್ಯಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕಾಡಿನಲ್ಲಿ ಬಾವಿ ತೋಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲಾರಂಭಿಸಿದ್ದಾರೆ. ನಿಧಿಯ ಆಸೆಗೆ ಬಿದ್ದಿದ್ದ ಹಾಗೂ ಬಾವಿ ತೋಡಲು ಆತನಿಗೆ ಸಹಾಯ ಮಾಡುತ್ತಿದ್ದ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

    ಸಿಕ್ಕಿಬಿದ್ದವರಲ್ಲಿ ಒಬ್ಬ ವ್ಯಕ್ತಿಗೆ ದೇವರು ಕನಸಿನಲ್ಲಿ ಬಂದು ಇಂಥ ಜಾಗದಲ್ಲಿ ನಿಧಿ ಇದೆ ಎಂದು ಹೇಳಿತ್ತಂತೆ. ಹೀಗಾಗಿ ಆತ ಇನ್ನೊಬ್ಬನ ಸಹಾಯದಿಂದ ಕಾಡಿಗೆ ಹೋಗಿದ್ದು, ಅಲ್ಲಿ ನಾಲ್ಕೈದು ದಿನಗಳಿಂದ ಪೂಜೆ ಮಾಡಿ ಬಾವಿ ತೋಡಲಾರಂಭಿಸಿದ್ದರು. ಅರಣ್ಯಾಧಿಕಾರಿಗಳು ಈ ವಿಷಯ ತಿಳಿದು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಸಿಕ್ಕಿಬಿದ್ದವರ ಹೆಸರು-ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.

    ಸುಮಲತಾ ‘ಸ್ವಾಭಿಮಾನ’ವನ್ನು ಕೆಣಕಿದ ನಿಖಿಲ್ ಕುಮಾರಸ್ವಾಮಿ; 2019ರ ಸೋಲಿಗೆ ನೀವೇ ಉತ್ತರ ಕೊಡಿ ಎಂದು ಜನರಲ್ಲಿ ಮನವಿ

    ‘ಅಮ್ಮನಿಂದ ಸಿಕ್ಕಿದ್ದು, ಅದನ್ನೇ ದೇಶಕ್ಕೆ ಹಂಚುತ್ತಿದ್ದೇನೆ’ ಎಂದ ರಾಹುಲ್ ಗಾಂಧಿ!

    ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts