ತುಮಕೂರು: ‘ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತೀಯಾ ಗೊತ್ತಾ? ಕತ್ತೆ ಕಾಯೋಕ್ ಬಂದಿದ್ದೀಯಾ ಇಲ್ಲಿಗೆ… ಸರ್ಕಾರದ ಕೆಲಸ ಮಾಡೋದು ಬಿಟ್ಟು ನಿನ್ನ ಹೆಂಡತಿಗೆ ಸೀರೆ ತರಲು ಹೋಗಿದ್ದಾ? ರಾಸ್ಕಲ್…’
ಇದು ಅನುದಾನ ಖರ್ಚು ಮಾಡಲು ಉದಾಸೀನತೆ ಮಾಡಿರುವ ಜಿಪಂ ಇಂಜಿನಿಯರ್ಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹರಿಹಾಯ್ದ ಪರಿ. ನಾಲಗೆ ಹರಿಬಿಡುವ ಮೂಲಕ ಸಚಿವರು ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸಿಟ್ಟಾದ ಸಚಿವರು, ತಾಳ್ಮೆ ಕಳೆದುಕೊಂಡು “ಜಾಡಿಸಿ ಒದ್ದರೆ ಎಲ್ಲಿಗೋಗಿ ಬೀಳ್ತಿಯಾ ಗೊತ್ತಾ? ಈ ಜಿಲ್ಲೆ ಬಿಟ್ಟು ತೊಲಗಿ’ ಎಂದರು.
‘ಜಿಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ. ಕಳೆದ 4ರಂದು ನಾನೇ ಸೂಚನೆ ನೀಡಿದ್ದೆ. ಆದ್ರೂ ಯಾಕೆ ನೀವು ಕಂಟ್ರ್ಯಾಕ್ಟರ್ನನ್ನು ಕರೆಸಿ ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗ್ತೀಯಾ ಗೊತ್ತಾ? ನೀನು… ರಾಸ್ಕಲ್… ಕತ್ತೆ ಕಾಯೋಕ್ ಬಂದಿದ್ದೀಯಾ ಇಲ್ಲಿಗೆ, ಸರ್ಕಾರದ ಕೆಲಸ ಮಾಡೋದು ಬಿಟ್ಟು ನಿನ್ನ ಹೆಂಡತಿಗೆ ಸೀರೆ ತರಲು ಹೋಗಿದ್ದಾ? ರಾಸ್ಕಲ್…’ ಎನ್ನುತ್ತಾ ನಾಲಿಗೆ ಹರಿಯಬಿಟ್ಟರು.
ಒಂದು ಹಂತದಲ್ಲಿ ಅಧಿಕಾರಿಗಳ ಉತ್ತರಕ್ಕೆ ಆಕ್ರೋಶಗೊಂಡು ತಾಳ್ಮೆ ಕಳೆದುಕೊಂಡ ಸಚಿವರು, ‘ಈ ನನ್ಮಕ್ಕಳು ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ…’ ಎನ್ನುತ್ತ ಸಭೆಯಲ್ಲೇ ಜಿಪಂ ಸಿಇಒಗೆ ಸಚಿವ ಮಾಧುಸ್ವಾಮಿ ಸೂಚನೆ ನೀಡಿದರು. ಎಲ್ಲರೂ ಮೂಕಪ್ರೇಕ್ಷಕರಂತೆ ನೋಡುತ್ತ ಕುಳಿತಿದ್ದರು.
ಸಿಎಂ ನೇತೃತ್ವದ ಸಭೆಯಲ್ಲೇ ಕಣ್ಣೀರಿಟ್ಟ ಶಾಸಕಿ! ದಯವಿಟ್ಟು ಕಣ್ಣೀರು ಹಾಕ್ಬೇಡಿ.. ಸರ್ಕಾರದ ಮಾನ ಹರಾಜಾಗುತ್ತೆ…
ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ಬೆಂಕಿ ಹಚ್ಚಿಕೊಂಡು ಸಾವಿನ ಮನೆಯ ಕದ ತಟ್ಟಿದ 22ರ ಯುವತಿ! ಆ ರಾತ್ರಿ ಏನಾಯ್ತು?
ನದಿ ದಡದಲ್ಲಿ ಸಿಕ್ಕ ಬೈಕ್, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್!