ಲಖನೌ: ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ ಭೀಕರ ದುರಂತ ಸಂಭವಿಸಿದ್ದು, ಗಂಗಾ ಸ್ನಾನಕ್ಕೆ ಹೊರಟ್ಟಿದ್ದವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಕೆರೆ ನೀರಿಗೆ ಬಿದ್ದು 7 ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬಾಹುಬಲಿ ನಾಯಕಿಯನ್ನು ಗರ್ಭಿಣಿಯಾಗಿಸಿ..ಪತ್ನಿಗೆ ವಿಚ್ಛೇದನ ನೀಡಿದನೇ ನಿರ್ಮಾಪಕ..!
ಹುಣ್ಣಿಮೆ ನಿಮಿತ್ತ ಭಕ್ತರನ್ನು ಕೂರಿಸಿಕೊಂಡು ಗಂಗಾ ಸ್ನಾನಕ್ಕೆ ತೆರಳಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ. ಚಾಲಕನ ಅಜಾಗರೂಕತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಅತಿವೇಗವಾಗಿ ಟ್ರ್ಯಾಕ್ಟರ್ಅನ್ನು ಚಾಲನೆ ಮಾಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಟ್ರ್ಯಾಕ್ಟರ್ನಲ್ಲಿ 7 ಮಕ್ಕಳ, 8 ಮಹಿಳೆಯರು ಸೇರಿದಂತೆ 20 ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾಸ್ಗಂಜ್ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮರೆತ ಆರೋಗ್ಯ ಇಲಾಖೆ..ಕೆಮ್ಮು, ಗಂಟಲು ನೋವು, ಜ್ವರಕ್ಕೆ ಜನ ಹೈರಾಣ..!