ಗದಗ: ಈರುಳ್ಳಿ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ನರಗುಂದ ತಾಲೂಕಿನ ರಡ್ಡೆರ ನಾಗನೂರು ಗ್ರಾಮದ ಬಳಿ ನಡೆದಿದೆ.
ಲಕ್ಷ್ಮವ್ವ ಚಲವಾದಿ (46), ಯಮನಮ್ಮ (51) ಮೃತ ದುರ್ದೈವಿಗಳು. ಗಾಯಗೊಂಡ ನಾಲ್ವರನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮದ ಮುದ್ದಿಗೌಡ ಗದ್ದಿಗೌಡ್ರ ಎಂಬುವರ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ ಕೂಲಿ ಕಾರ್ಮಿಕರು, ಕಟಾವು ಮಾಡಿದ್ದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ನಲ್ಲಿ ವಾಪಸ್ಸಾಗುತ್ತಿದ್ದರು.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಹಳ್ಳದಲ್ಲಿ ಪಲ್ಟಿ ಹೊಡೆದಿದೆ. ಟ್ರಾಕ್ಟರ್ ಅವಶೇಷದಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದು, ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ಬಾಡಿಗೆ ಕಟ್ಟಲಾಗದ ಕಷ್ಟ, ಆಗ ಅವರೊಬ್ಬರೆ ನನ್ನನ್ನು ಬೆಂಬಲಿಸಿದರು: ನಿರ್ದೇಶಕ ರಾಜಮೌಳಿ ಬರೆದ ಪತ್ರ ವೈರಲ್