ಒಂದು ಕಡೆ ಸ್ಯಾಂಡಲ್ವುಡ್ ಸ್ಟಾರ್ಗಳೆಲ್ಲಾ ಚಲನಚಿತ್ರ ದಿನಗೂಲಿ ಕಾರ್ಮಿಕರಿಗೆ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನಸಹಾಯ ಮಾಡುವುದಕ್ಕೆ ಮೀನಾ-ಮೇಷ ಎಣಿಸುತ್ತಿದ್ದರೆ, ಆ ಕಡೆ ಟಾಲಿವುಡ್ ಹೀರೋಗಳೆಲ್ಲಾ ಜಿದ್ದಿಗೆ ಬಿದ್ದಿರುವ ತರಹ ನಾ ಮುಂದು, ತಾ ಮುಂದು ಎಂದು ಧನಸಹಾಯ ಮಾಡುತ್ತಿದ್ದಾರೆ.
ಕರೊನಾ ವೈರಸ್ ತಡೆಗಟ್ಟುವುದಕ್ಕೆ ಇಡೀ ದೇಶ ಲಾಕೌಟ್ ಆಗಿದೆ. ಇನ್ನು ಚಿತ್ರೀಕರಣ ಚಟುವಟಿಕೆಗಳು ಬಂದ್ ಆಗಿ ಕೆಲವು ದಿನಗಳೇ ಆಗಿವೆ. ಇದರಿಂದಾಗಿ ಚಿತ್ರರಂಗವನ್ನೇ ನಂಬಿಕೊಂಡಿರುವ ದಿನಗೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಬರೀ ಚಿತ್ರರಂಗವಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಿಗೂ ಹಿನ್ನೆಡೆಯಾಗಿದೆ. ಇಂತಹ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ಸ್ಟಾರ್ಗಳೆಲ್ಲಾ ಒಬ್ಬರಿಗೊಬ್ಬರು ಸವಾಲೆಸೆಯುವಂತೆ ಧನ ಸಹಾಯ ಮಾಡುತ್ತಿದ್ದಾರೆ. ಜತೆಗೆ, ಇತರರನ್ನೂ ಧನಸಹಾಯ ಮಾಡುವುದಕ್ಕೆ ಪ್ರೇರೇಪಿಸುತ್ತಿದ್ದಾರೆ.
ಇದುವರೆಗೂ ಅತೀ ಹೆಚ್ಚು ಧನಸಹಾಯ ಮಾಡಿರುವ ನಟ ಎಂದರೆ ಅದು ಪ್ರಭಾಸ್. ‘ಬಾಹುಬಲಿ’ ಖ್ಯಾತಿಯ ಪ್ರಭಾಸ್, ಇದುವರೆಗೂ ಯಾವ ಸೆಲೆಬ್ರಿಟಿ ಸಹ ಕೊಡದ ಅಷ್ಟೊಂದು ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಪೈಕಿ ಮೂರು ಕೋಟಿ ರೂಗಳು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕೊಡಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ನಿಧಿಗೆ ತಲಾ 50 ಲಕ್ಷ ಹಣವನ್ನು ನೀಡಲಾಗಿದೆ.
ಪ್ರಭಾಸ್ ನಂತರ ಅತೀ ಹೆಚ್ಚು ದುಡ್ಡು ಕೊಟ್ಟ ನಟ ಎಂದರೆ ಅದು, ಪವನ್ ಕಲ್ಯಾಣ್. ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ಕೊಟ್ಟಿರುವ ಪವನ್ ಕಲ್ಯಾಣ್, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ನಿಧಿಗೆ ತಲಾ 50 ಲಕ್ಷವನ್ನು ಕೊಟ್ಟಿದ್ದಾರೆ. ಹಿರಿಯ ನಟ ಚಿರಂಜೀವಿ ಅವರು ತೆಲುಗು ಚಿತ್ರರಂಗದ ಕಾರ್ಮಿಕರ ಕಲ್ಯಾಣಕ್ಕಾಗಿ ಒಂದು ಕೋಟಿ ಕೊಟ್ಟಿದ್ದಾರೆ. ವಿಕ್ಟರಿ ವೆಂಕಟೇಶ್ ಮತ್ತು ಮಹೇಶ್ ಬಾಬು ಸಹ ತಲಾ ಒಂದೊಂದು ಕೋಟಿ ಧನ ಸಹಾಯ ಮಾಡಿದ್ದಾರೆ. ರಾಮ್ಚರಣ್ ತೇಜ 70 ಲಕ್ಷ ರೂಗಳನ್ನು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಕಲ್ಯಾಣ ನಿಧಿಗೆ ಕೊಟ್ಟಿದ್ದಾರೆ. ಜ್ಯೂನಿಯರ್ ಎನ್ಟಿಆರ್ ಅವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 25 ಲಕ್ಷ ಕೊಡುವುದರ ಜತೆಗೆ, ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 25 ಲಕ್ಷ ಕೊಟ್ಟಿದ್ದಾರೆ. ಇದಲ್ಲದೆ ನಿತಿನ್, ಸಾಯಿ ಧರ್ಮ ತೇಜ್ರಂತಹ ಅಷ್ಟೇನೂ ಸ್ಟಾರ್ಗಳಲ್ಲದ ನಟರು ಸಹ ತಲಾ 10 ಲಕ್ಷ ೋಷಿಸಿದ್ದಾರೆ.
ಈ ಎಲ್ಲಾ ಸ್ಟಾರ್ಗಳು ಇದುವರೆಗೂ ಪರಿಹಾರ ನಿಧಿಗೆ ಕೊಟ್ಟಿರುವ ಮೊತ್ತವೆ 10 ಕೋಟಿಗೂ ಹೆಚ್ಚಾಗಿದೆ. ಟಾಲಿವುಡ್ ಸ್ಟಾರ್ಗಳ ಈ ನಡೆ ಅನುಕರಣೀಯವಾಗಿದ್ದು, ಇನ್ನಾದರೂ ಬೇರೆಯವರು ಇದರಿಂದ ಸ್ಫೂರ್ತಿಗೊಂಡು ಧನಸಹಾಯ ಮಾಡುತ್ತಾರಾ ಎಂದು ನೋಡಬೇಕಿದೆ.
ಲಾಕ್ಡೌನ್ ನಡುವೆಯೂ ಎಣ್ಣೆ ಬೇಕಂತೆ ಈ ಹಿರಿಯ ನಟನಿಗೆ! ಜಾಲತಾಣದಲ್ಲಿ ನೆಟ್ಟಿಗರಿಂದ ತರಾಟೆ