More

    ಜನಪ್ರತಿನಿಧಿಯಾಗಿರಲು ಪಾಟೀಲ ಲಾಯಕ್ಕಲ್ಲ

    ಹಿರೇಬಾಗೇವಾಡಿ: ಸಚಿವ ಶಿವಾನಂದ ಪಾಟೀಲ ರೈತರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಪತಹಸೀಲ್ದಾರ್ ಕಚೇರಿ ಎದುರು ರೈತರು ಮಂಗಳವಾರ ಪ್ರತಿಭಟಿಸಿದರು.

    ಪ್ರಗತಿಪರ ರೈತ ಬಸವಣ್ಣೆಪ್ಪ ಗಾಣಗಿ ಮಾತನಾಡಿ, ರೈತ ದೇಶದ ಬೆನ್ನೆಲುಬು ಎಂದೆಲ್ಲ ಹೇಳಿ ನಮ್ಮಿಂದ ಮತ ಪಡೆದು ಚುನಾಯಿತರಾದ ಸಚಿವ ಪಾಟೀಲ ಹಗುರವಾಗಿ ಮಾತನಾಡಿ ಸಣ್ಣತನ ಮೆರೆದಿದ್ದಾರೆ. ಅಂಥವರನ್ನು
    ಅಧಿಕಾರದಿಂದ ಕೆಳಗಿಳಿಸಬೇಕು. ಅವರು ಜನಪ್ರತಿನಿಧಿಯಾಗಿರಲು ಲಾಯಕ್ಕಲ್ಲ ಎಂದರು. ರೈತರು ಸಚಿವರ ವಿರುದ್ಧ ಘೋಷಣೆ ಕೂಗಿದರು. ಸಮಾಜ ಸೇವಕ ಬಾಪು ನಾವಲಗಟ್ಟಿ ಮಾತನಾಡಿದರು.

    ಅಖಂಡ ಕರ್ನಾಟಕ ರೈತ ಸಂಘದ ಬೆಳಗಾವಿ ತಾಲೂಕಾಧ್ಯಕ್ಷ ಬಸವರಾಜ ಡೊಂಗರಗಾವಿ, ಬಸವರಾಜ ಇಟಗಿ, ಬಸನಗೌಡ ದೊಡಗೌಡರ, ಯಲ್ಲಪ್ಪ ಧರೆಣ್ಣವರ, ವಿರೂಪಾಕ್ಷಿ ರೊಟ್ಟಿ, ಬಸನಗೌಡ ಪಾಟೀಲ, ಪರಮೇಶ ಸಾಲಿಮನಿ, ಬಾಬು ಅರಳಿಕಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts