More

    ಮರೆವು ಜಾಸ್ತಿಯಾಗುತ್ತಿದೆಯೇ? ಮೆಮೊರಿ ಪವರ್​ ಹೆಚ್ಚಿಕೊಳ್ಳಬೇಕಾ? ಈ ಸರಳ ಸಲಹೆಗಳನ್ನು ಪಾಲಿಸಿ…

    ನಮಗೆ ವಯಸ್ಸಾದಂತೆ ನಮ್ಮ ಮೆದುಳಿನಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಅವು ಮೆದುಳಿನ ಕಾರ್ಯದ ಮೇಲೂ ಪರಿಣಾಮ ಬೀರುತ್ತವೆ. ವಯಸ್ಸಾದವರ ಅತ್ಯಂತ ಗಂಭೀರ ಸಮಸ್ಯೆಯೆಂದರೆ, ಜ್ಞಾಪಕ ಶಕ್ತಿ ನಷ್ಟ. ಆದರೆ, ಇಂದು ಯುವಕರಲ್ಲಿಯೂ ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು, ಮರೆತು ಹೋಗುವುದು ಸಾಮಾನ್ಯವಾಗಿದೆ. ಈ ಸರಳವಾದ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಬುದ್ಧಿವಂತಿಕೆ ಮತ್ತು ಸ್ಮರಣೆಯನ್ನು ಹೆಚ್ಚಿಸಬಹುದು.

    ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುವ ಸಲಹೆಗಳು
    1. ವ್ಯಾಯಾಮ: ಏರೋಬಿಕ್ ವ್ಯಾಯಾಮ ಅಥವಾ ಮಧ್ಯಮ ವ್ಯಾಯಾಮವು ಹೃದಯದ ಆರೋಗ್ಯ ಮಾತ್ರವಲ್ಲದೆ, ಅದಕ್ಕಿಂತ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ವ್ಯಾಯಾಮವು ನಿಮ್ಮ ಮೆದುಳಿನ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತವೆ.

    2. ಆರೋಗ್ಯಕರ ತಿನ್ನುವ ಅಭ್ಯಾಸ: ನಟ್ಸ್​, ಸಾಲ್ಮನ್, ಧಾನ್ಯಗಳು, ಆಲಿವ್ ಎಣ್ಣೆ ಮತ್ತು ತಾಜಾ ಉತ್ಪನ್ನಗಳಂತಹ ಆರೋಗ್ಯಕರ ಆಹಾರಗಳನ್ನು ತಿನ್ನುವುದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ, ಈ ರೀತಿಯ ಆಹಾರವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹ ನೆರವಾಗುತ್ತದೆ.

    3. ಮೆದುಳನ್ನು ಉತ್ತೇಜಿಸುವ ವ್ಯಾಯಾಮಗಳು: ಮೆದುಳನ್ನು ಉತ್ತೇಜಿಸುವ ವ್ಯಾಯಾಮಗಳು ನರ ಕೋಶಗಳ ನಡುವೆ ಹೊಸ ಸಂಪರ್ಕಗಳನ್ನು ಸೃಷ್ಟಿಸುತ್ತವೆ. ಮಾನವರ ಮೇಲೆ ಮಾಡಿದ ಸಂಶೋಧನೆಯ ಪ್ರಕಾರ ಮೆದುಳಿಗೆ ಹೊಸ ನ್ಯೂರಾನ್‌ಗಳನ್ನು ಉತ್ಪಾದಿಸಲು, ನರ ಸಂಪರ್ಕಗಳನ್ನು ಬಲಪಡಿಸಲು ಮತ್ತು ಮೆದುಳಿನ ಜೀವಕೋಶದ ನಷ್ಟವನ್ನು ತಡೆಯಲು ಮೆದುಳನ್ನು ಉತ್ತೇಜಿಸುವ ವ್ಯಾಯಾಮಗಳು ಸಹಾಯ ಮಾಡುತ್ತದೆ.

    4. ಹೃದಯದ ಆರೋಗ್ಯ: ಅಧಿಕ ರಕ್ತದೊತ್ತಡ ಹೊಂದಿರುವ ಮಧ್ಯವಯಸ್ಕ ಜನರಲ್ಲಿ ವಯಸ್ಸಾದಂತೆ ಜ್ಞಾಪಕ ಶಕ್ತಿ ನಷ್ಟವು ಹೆಚ್ಚು ಸಾಮಾನ್ಯವಾಗುತ್ತದೆ. ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿ. ದೇಹವನ್ನು ಸದೃಢವಾಗಿರಿಸಿಕೊಳ್ಳಿ ಮತ್ತು ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ದಿನಕ್ಕೆ ಎರಡು ಪೆಗ್‌ಗಿಂತ ಹೆಚ್ಚು ಆಲ್ಕೋಹಾಲ್ ಕುಡಿಯಬೇಡಿ. ನಿಮ್ಮ ಒತ್ತಡವನ್ನು ನಿರ್ವಹಿಸಿ ಮತ್ತು ಆರೋಗ್ಯಕರ ತಿನಿಸುಗಳನ್ನು ಸೇವಿಸಿ.

    5. ಚೆನ್ನಾಗಿ ನಿದ್ರಿಸು: ಜ್ಞಾಪಕ ಶಕ್ತಿ ಮತ್ತು ಗಮನದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ಅದು ಸಾಕಷ್ಟು ನಿದ್ರೆ. ಆಳವಾದ ನಿದ್ರೆಯು ಸ್ಮರಣೆಯನ್ನು ಸುಧಾರಿಸುವ ಮೂಲಕ ಮತ್ತು ಮೆದುಳಿನಿಂದ ಅಸಹಜ ಪ್ರೋಟೀನ್‌ಗಳನ್ನು ತೆಗೆದುಹಾಕುವ ಮೂಲಕ ಮೆಮೊರಿ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

    6. ಧೂಮಪಾನ ಬಿಡಿ: ತಂಬಾಕಿನಿಂದ ಬರುವ ನಿಕೋಟಿನ್, ಹೃದಯ ಮತ್ತು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಧೂಮಪಾನ ತೊರೆಯಲು ನಿಮಗೆ ಕಷ್ಟವಾಗಿದ್ದರೆ, ಯಾವುದೇ ವೈದ್ಯಕೀಯ ವೃತ್ತಿಪರರು ಅಥವಾ ಚಿಕಿತ್ಸಕರಿಂದ ಸಹಾಯ ಪಡೆಯಿರಿ. (ಏಜೆನ್ಸೀಸ್​)

    ಸೆಮಿಫೈನಲ್​ ಪಂದ್ಯಗಳಿಗೆ ಮಳೆ ಅಡ್ಡಿಯಾದ್ರೆ ಫಲಿತಾಂಶ ನಿರ್ಧರಿಸುವುದು ಹೇಗೆ? ICC ನಿಯಮಗಳು ಹೀಗಿವೆ…

    ಗಾಜಾ ಮೇಲಿನ ಹಿಡಿತ ಕಳೆದುಕೊಂಡ ಹಮಾಸ್​ ದಕ್ಷಿಣಕ್ಕೆ ಪರಾರಿ: ಇಸ್ರೇಲ್​ ರಕ್ಷಣಾ ಸಚಿವರ ಹೇಳಿಕೆ

    ಯಾವ ರಾಶಿಗೆ ಏನು ಫಲ?: ದ್ವಾದಶ ರಾಶಿ ಭವಿಷ್ಯ; ಈ ದೀಪಾವಳಿಯಿಂದ ಕ್ರೋಧಿನಾಮ ಸಂವತ್ಸರದ ದೀಪಾವಳಿವರೆಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts