More

    ಮಂಡ್ಯ ಜಿಲ್ಲೆಯ ಮೂವರು ತಹಸೀಲ್ದಾರ್​ಗೂ ಕರೊನಾ; ಮೂರು ತಾಲೂಕು ಕಚೇರಿಗೆ ಹೋಗಿದ್ದವರಿಗೆ ಈಗ ಆತಂಕ

    ಮಂಡ್ಯ: ಮಂಡ್ಯ ಜಿಲ್ಲೆಯೊಂದರಲ್ಲೇ ಮೂವರು ತಹಸೀಲ್ದಾರ್ ಕೋವಿಡ್​ ಸೋಂಕಿಗೆ ಒಳಗಾಗಿದ್ದು, ಜಿಲ್ಲೆಯ ಮೂರು ತಾಲೂಕು ಕಚೇರಿಗಳಿಗೆ ಭೇಟಿ ನೀಡಿದ್ದವರಿಗೆ ಈಗ ಸೋಂಕಿನ ಭಯ ಆವರಿಸಿದೆ.

    ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ತಾಲೂಕಿನ ತಹಸೀಲ್ದಾರ್ ಅವರಲ್ಲಿ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ. ಮಂಡ್ಯ ತಹಸೀಲ್ದಾರ್​ ಚಂದ್ರಶೇಖರ್, ಮದ್ದೂರು ತಹಸೀಲ್ದಾರ್​ ನರಸಿಂಹಮೂರ್ತಿ ಮತ್ತು ಶ್ರೀರಂಗಪಟ್ಟಣದ ತಹಸೀಲ್ದಾರ್​ ಶ್ವೇತಾ ರವೀಂದ್ರ ಸೋಂಕಿಗೆ ಒಳಗಾದವರು.

    ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಮೂವರೂ ತಹಸೀಲ್ದಾರರು ವೈದ್ಯರ ಸಲಹೆ ಮೇರೆಗೆ ಐಸೋಲೇಷನ್​ಗೆ ಒಳಗಾಗಿದ್ದಾರೆ. ಮತ್ತೊಂದೆಡೆ ಈ ಮೂರು ತಾಲೂಕು ಕಚೇರಿಗಳಿಗೆ ಕಳೆದ ಕೆಲವು ದಿನಗಳಲ್ಲಿ ಭೇಟಿ ನೀಡಿದ್ದವರಿಗೆ ಮತ್ತು ಕಚೇರಿ ಸಿಬ್ಬಂದಿಗೆ ಆತಂಕ ಉಂಟಾಗಿದೆ.

    ಇದು ಹಾಟೆಸ್ಟ್ ಸೀರೆ!; ಇದನ್ನು ಬೆಂಕಿಪೊಟ್ಟಣದೊಳಗಿಟ್ಟು ಒಯ್ಯಬಹುದು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts