More

    ಪುರಾಣ ಪ್ರಸಿದ್ಧ ಕದ್ರಿ ದೇವಸ್ಥಾನಕ್ಕೆ ನುಗ್ಗಲು ಪ್ರಯತ್ನಿಸಿದ ಅನ್ಯ ಕೋಮಿನವರು! ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು…

    ಮಂಗಳೂರು: ಮಂಗಳೂರಿನ‌ ಪುರಾಣ ಪ್ರಸಿದ್ದ ಕದ್ರಿ ದೇವಾಲಯಕ್ಕೆ‌ ನುಗ್ಗಲು ಯತ್ನಿಸಿದ ಮೂವರು ಅನ್ಯಕೋಮಿನವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬೈಕ್​ನೊಂದಿಗೆ ದೇವಾಲಯದ ಆವರಣ ಪ್ರವೇಶಿಸಿ‌ದ ಅಪರಿಚಿತರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಇದನ್ನು ಕಂಡು ಜಾಗರೂಕರಾದ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವವರನ್ನು ಅಸೈಗೋಳಿ ನಿವಾಸಿ ಹಸನ್ ಶಾಹಿನ್‌, ಜಾಫರ್ ಹಾಗೂ ಫಾರೂಕ್ ಎಂದು ಗುರುತಿಸಲಾಗಿದೆ.

    ಚಪ್ಪಲಿ ಹಾಕಿ ಒಳ ಬಂದಿದ್ದರು!:

    ಈ ಹಿಂದೆ ಕದ್ರಿ ದೇವಾಲಯವನ್ನು ಶಂಕಿತ ಉಗ್ರ ಶಾರೀಕ್ ಟಾರ್ಗೆಟ್ ಮಾಡಿ ದೇವಸ್ಥಾನದ ಆವರಣದಲ್ಲಿ ಬಾಂಬ್ ಸ್ಪೋಟಕ್ಕೆ‌ ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಮೂವರನ್ನು ಕದ್ರಿ‌ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts