ನವದೆಹಲಿ: ಟಿ20 ವಿಶ್ವಕಪ್ (T20 Worl Cup 2022) ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಟೀಮ್ ಇಂಡಿಯಾ (India)ದ ಸ್ಟಾರ್ ಕ್ರಿಕೆಟಿಗರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಭಾರತ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಲು ಯಾದವ್ ಕೊಡುಗೆ ಸಹ ಇದೆ. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಪಾತ್ರ ಹಚ್ಚಿದೆ. ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ಸ್ಕೋರ್ ಮಾಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಯಾದವ್ 3ನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಗ್ರೌಂಡ್ನಲ್ಲಿ ಅಬ್ಬರಿಸಿ ಬೊಬ್ಬಿರುವ ಯಾದವ್, ಟೀಮ್ ಇಂಡಿಯಾ ಮಿಸ್ಟರ್ 360 ಡಿಗ್ರಿ ಎನಿಸಿಕೊಂಡಿದ್ದಾರೆ. ಮೈದಾನದಲ್ಲಿ ಎಲ್ಲಾ ಮೂಲೆಗೂ ಯಾದವ್ ಸರಾಗವಾಗಿ ಚೆಂಡನ್ನು ಬಾರಿಸುತ್ತಾರೆ. ವೈಡ್ ಬಾಲ್ಗಳನ್ನು ಬಿಡದೇ ಬೌಂಡರಿಗಟ್ಟುತ್ತಾರೆ. ಎದುರಾಳಿಗಳಿಗೆ ಸಿಂಹಸ್ವಪ್ನದಂತೆ ಕಾಡುವ ಯಾದವ್ ಅವರನ್ನು ಯಾವ ರೀತಿ ಔಟ್ ಮಾಡಬೇಕೆಂಬುದನ್ನು ಪಾಕಿಸ್ತಾನದ ಮಾಜಿ ಬೌಲರ್ ವಾಕರ್ ಯೂನಿಸ್ (Waqar Younis) ಹೇಳಿದ್ದಾರೆ.
ರನ್ ಚೇಸ್ ಮಾಡುವ ಆಟಗಾರರಿಗೆ ಶಾರ್ಟ್ ಬಾಲ್ಸ್ಗಳನ್ನು ಎಸೆಯಿರಿ ಎಂದು ಯೂನಿಸ್ ಸಲಹೆ ನೀಡಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಯಾದವ್ರ ಚೇಸಿಂಗ್ ಅನ್ನು ಪಾಕಿಸ್ತಾನ ಯಶಸ್ವಿಯಾಗಿ ನಿಯಂತ್ರಣ ಮಾಡಿದೆ. ಸೂಪರ್ 12 ಹಂತದ ಪಂದ್ಯದಲ್ಲೂ ನೋಡಿದ್ದೇವೆ. ಸೂರ್ಯ ಅವರನ್ನು ಪಾಕಿಸ್ತಾನವು ತಂತ್ರಗಾರಿಕೆಯಿಂದ ಔಟ್ ಮಾಡಿತು. ಶಾರ್ಟ್ ಬಾಲ್ಸ್ ಎಸೆಯುವುದರಿಂದ ಯಾದವ್ರನ್ನು ಬಹುಬೇಗ ಔಟ್ ಮಾಡಬಹುದು, ಯಾದವ್ರನ್ನು ಔಟ್ ಮಾಡಲು ಇರುವುದು ಇದೊಂದೆ ದಾರಿ ಎಂದು ಯೂನಿಸ್ ಹೇಳಿದ್ದಾರೆ.
ವಿಶ್ವಕಪ್ನಲ್ಲಿ ಭಾರತವು ತನ್ನ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದ ಹೇಳಿದ ಯೂನಿಸ್ ಖಾನ್, ಪಾಕಿಸ್ತಾನವು ವಿಶ್ವಕಪ್ ಎತ್ತಿ ಹಿಡಿಯಲು ವಿಫಲವಾದರೆ, ಭಾರತಕ್ಕೆ ಅವಕಾಶವಿದೆ ಎಂದರು. ಭಾರತ ಉತ್ತಮ ತಂಡವಾಗಿದ್ದು, ಟೂರ್ನಿಯ ಕೊನೆಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ವಿಭಿನ್ನ ತಂಡದಂತೆ ಕಾಣುತ್ತಿದೆ ಎಂದು ಹೇಳಿದರು.
ಸದ್ಯ ಪಾಕಿಸ್ತಾನ ನಿನ್ನೆ (ನ.09) ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫೈನಲ್ಗೇರಿದೆ. ಇಂದು ಭಾರತ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ಸೆಮಿಫೈನಲ್ ಪಂದ್ಯವನ್ನು ಆಡಲಿದ್ದು, ಪಂದ್ಯವನ್ನು ಗೆದ್ದರೆ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಸೂರ್ಯಕುಮಾರ್ ಯಾದವ್ ಅವರನ್ನು ವಜಾಗೊಳಿಸಲು ಯೂನಿಸ್ ನೀಡಿರುವ ಸಲಹೆ ವರ್ಕೌಟ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)
ಕಾಂಡೋಮ್ ಬಳಸುವಂತೆ ಮನವಿ ಮಾಡಿದ್ರೂ ಕೇಳಲಿಲ್ಲ: ಲಂಕಾ ಕ್ರಿಕೆಟಿಗನ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ
ವರನ ಮನೆಯವರು ಕೊಡಿಸಿದ ಲೆಹೆಂಗಾ ಚೆನ್ನಾಗಿಲ್ಲ ಅಂತಾ ಮದುವೆಯನ್ನೇ ರದ್ದು ಮಾಡಿದ ವಧು!