ದಾವಣಗೆರೆ: ಆಹಾರ ಕಿಟ್ ಪಡೆಯಲು ಬಂದಿದ್ದ ಜನತೆ ನಾ ಮುಂದು, ತಾ ಮುಂದು ಎಂಬಂತೆ ಒಮ್ಮೆಲೆ ನುಗ್ಗಿದ್ದರಿಂದ ವೃದ್ಧರು, ಮಹಿಳೆಯರು ತುಳಿತಕ್ಕೊಳಗಾದರು.
ಜಗಳೂರು ಪಟ್ಟಣದ ತರಳಬಾಳು ಕೇಂದ್ರದ ಮುಖ್ಯದ್ವಾರದಲ್ಲಿ ಮಂಗಳವಾರ ಅರಸಿಕೆರೆ ಹೋಬಳಿ ಕಲ್ಲುಗಣಿ ಕ್ರಷರ್ ಮಾಲೀಕರು ಆಹಾರ ಕಿಟ್ಗಳನ್ನು ನೀಡಿದ್ದರು. ಇದನ್ನು ಪಡೆಯಲು ಬಂದಿದ್ದ ಸುತ್ತಮುತ್ತಲ ಸಾರ್ವಜನಿಕರ ನಡುವೆ ನೂಕುನುಗ್ಗಲು ಏರ್ಪಟ್ಟಿತು.
ಇದನ್ನೂ ಓದಿರಿ ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!
ಆಹಾರ್ ಕಿಟ್ ವಿತರಿಸಲು ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಎಸ್.ವಿ. ರಾಮಚಂದ್ರ ಅವರ ಬರುವಿಕೆ ತಡವಾಗಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲರಾದರು. ಒಮ್ಮೆಲೆ ಗೇಟ್ ತೆರೆದಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತು. ಗೇಟ್ ಮುಂದೆ ಆರಂಭದಲ್ಲಿ ನಿಂತಿದ್ದ ವೃದ್ಧರು ಕಾಲ್ತುಳಿತಕ್ಕೆ ಸಿಕ್ಕರು. ಸ್ಥಳದಲ್ಲೇ ಇದ್ದ ಕೆಲವರು ಮಧ್ಯ ಪ್ರವೇಶಿಸಿ ಅವರನ್ನು ರಕ್ಷಿಸಿದರು.
ಇದನ್ನೂ ಓದಿರಿ ಬಾಲಿವುಡ್ನ ‘ಗಾಸಿಪ್ ಕ್ವೀನ್’ ಯಾರು ಗೊತ್ತಾ? ಅನನ್ಯ ಪಾಂಡೆ ಹೇಳುತ್ತಾರೆ ಕೇಳಿ …
ಟ್ರ್ಯಾಕ್ಟರ್ ಸ್ಟೇರಿಂಗ್ ಹಿಡಿದ ಎಚ್ಡಿಕೆ..!ಟ್ರ್ಯಾಕ್ಟರ್ ಸ್ಟೇರಿಂಗ್ ಹಿಡಿದ ಎಚ್ಡಿಕೆ..!ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಮಂಗಳವಾರ (ಇಂದು) ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಕೃಷಿ ಯಂತ್ರೋಪಕರಣ ಬಾಡಿಗೆ ನೀಡುವ ಸೇವಾ ಕೇಂದ್ರ ಉದ್ಘಾಟಿಸಿದರು. 'ನಾನೂ ರೈತ ಬ್ರದರ್, ಈ ಹಿಂದೆ ಹೊಲ ಉಳುಮೆ ಮಾಡುತ್ತಿದೆ. ಇತ್ತೀಚೆಗೆ ಮರೆತಿದ್ದೇನೆ ಅಷ್ಟೆ' ಎನ್ನುತ್ತಲೇ ಅವರು ಟ್ರ್ಯಾಕ್ಟರ್ ಮೂವ್ ಮಾಡಿದ್ರು.#Tractor #HDKumaraswamy #Channapatna #Agricultural #Machinery #Rental #Service
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 2, 2020