More

    ಬೆಳಗಾಗುವಷ್ಟರಲ್ಲಿ ಲಕ್ಷಾಧಿಪತಿಯಾದ ದಿನಗೂಲಿ ಕಾರ್ಮಿಕನಿಗೆ ಮರುಕ್ಷಣವೇ ಕಾದಿತ್ತು ಶಾಕ್​!

    ಚೆನ್ನೈ: ಕೂಲಿ ಕಾರ್ಮಿಕನೊಬ್ಬ ಒಂದೇ ದಿನಕ್ಕೆ ದಿಢೀರ್​ ಲಕ್ಷಾಧಿಪತಿಯಾದ ಘಟನೆ ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಅರಕ್ಕೋಣಂ ಬಳಿಯ ಕೈನೂರಿನಲ್ಲಿ ನಡೆದಿದೆ. ಒಂದು ಚಿನ್ನದ ಗಟ್ಟಿಯ ಜತೆಗೆ 1,10,000 ಸಾವಿರ ರೂ. ನಗದು ಕಾರ್ಮಿಕನಿಗೆ ಸಿಕ್ಕಿತ್ತು. ಆದರೆ, ಮರು ಕ್ಷಣವೇ ಕಾರ್ಮಿಕ ಆಘಾತವೂ ಕಾದಿತ್ತು.

    ಮುರುಗನ-ಗೌರಿ ದಂಪತಿ ಅರಕ್ಕೋಣಂನಲ್ಲಿ ವಾಸವಿದ್ದಾರೆ. ಮುರುಗನ್​ ದಿನಗೂಲಿ ನೌಕರನಾಗಿದ್ದು, ಸಾವಿರಾರು ರೂಪಾಯಿಗೂ ಪರದಾಡುತ್ತಿದ್ದ ಈತ ಇದ್ದಕ್ಕಿದ್ದಂತೆ ಸಾವಿರಾರು ರೂಪಾಯಿಯನ್ನು ಧಾರಾಳವಾಗಿ ಖರ್ಚು ಮಾಡುವುದನ್ನು ಕಂಡು ಅಕ್ಕಪಕ್ಕದ ಜನರು ಅಚ್ಚರಿಗೊಂಡಿದ್ದರು. ಅಲ್ಲದೆ, ಅನುಮಾನವು ಹುಟ್ಟಿಕೊಂಡಿತ್ತು.

    ಕೆಲ ಯುವಕರು ಚಾಕುವಿನಿಂದ ಮುರುಗನ್​ಗೆ ಬೆದರಿಕೆ ಹಾಕಿದಾಗ ಹೆದರಿದ ಆತ ಊರಿನ ಪಂಚಾಯಿತಿ ಕೌನ್ಸಿಲ್​ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾನೆ. ಬಳಿಕ ಪಂಚಾಯಿತಿ ಅಧ್ಯಕ್ಷ ಪೊಲೀಸರಿಗೆ ಮಾಹಿತಿ ಮುಟ್ಟಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮುರುಗನ್​ ಬಳಿ ಚಿನ್ನದ ಬಿಸ್ಕೆಟ್​ ಮತ್ತು 1 ಲಕ್ಷಕ್ಕೂ ಅಧಿಕ ಹಣವಿದ್ದಿದ್ದು ತಿಳಿಯುತ್ತದೆ. ನೆಲ ಅಗೆಯುವಾಗ ಸಿಕ್ಕ ಹಣ ಮತ್ತು ಚಿನ್ನವನ್ನು ಪೊಲೀಸರಿಗೆ ಮುರುಗನ್​ ನೀಡುತ್ತಾನೆ.

    ಅಂದಹಾಗೆ ಮುರುಗನ್​ ಮತ್ತು ಆತನ ಪತ್ನಿ ಒಳಚರಂಡಿ ಕಾಲುವೆ ಮಣ್ಣು ತೆಗೆಯುವ ಕೆಲಸ ಮಾಡುತ್ತಾರೆ. ಅವರು ಕೆಲಸ ಮಾಡುತ್ತಿದ್ದ ಅರಕ್ಕೋಣಂನ ಏರಿಯಾದಲ್ಲೇ ಜ್ಯುವೆಲ್ಲರಿ ಶಾಪ್​ ಕೂಡ ಇದೆ. ಒಮ್ಮೆ ಚಿನ್ನದ ಬಿಸ್ಕೆಟ್ ಪ್ಯಾಕೆಟ್ ಸಿಕ್ಕಿದ್ದು, ಅದರಲ್ಲಿದ್ದ ಒಂದು ಭಾಗವನ್ನು ಮಾರಾಟ ಮಾಡಿ ಹಣ ಗಳಿಸಿದ್ದಾಗಿ ಅವರು ಹೇಳಿದ್ದಾರೆ.

    ಈ ವೇಳೆ ಚಿನ್ನದ ಗಟ್ಟಿಗಳು ನಾಪತ್ತೆಯಾಗಿರುವ ಬಗ್ಗೆ ಯಾರೂ ದೂರು ನೀಡದ ಕಾರಣ ಪೊಲೀಸರು ಮುರುಗನ್ ಹಾಗೂ ಆತನ ಪತ್ನಿಯನ್ನು ಬಿಟ್ಟು ಕಳುಹಿಸಿದ್ದಾರೆ. ವಶಕ್ಕೆ ಪಡೆದ ಚಿನ್ನಾಭರಣ ಹಾಗೂ ನಗದನ್ನು ಪೊಲೀಸರು ಸರ್ಕಾರಿ ಖಜಾನೆಗೆ ಹಸ್ತಾಂತರ ಮಾಡಿದ್ದಾರೆ. (ಏಜೆನ್ಸೀಸ್​)

    ನನಗೆ ಅದ್ರ ಅವಶ್ಯಕತೆ ಇಲ್ಲ, ಎಲ್ಲವನ್ನು ಅನುಭವಿಸಿದ್ದೇನೆ..’ಓ ಮಲ್ಲಿಗೆ’ ಬ್ಯೂಟಿ ಚಾರುಲತಾ ಓಪನ್​ ಟಾಕ್​

    ಉದ್ಯಮಿ ಜತೆ ಅಫೇರ್​; ಪತಿಗೆ ಡಿವೋರ್ಸ್​ ಕೊಡಲು ಮುಂದಾದ ನಮಿತಾ!? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts