More

    ನನಗೆ ಅದ್ರ ಅವಶ್ಯಕತೆ ಇಲ್ಲ, ಎಲ್ಲವನ್ನು ಅನುಭವಿಸಿದ್ದೇನೆ..’ಓ ಮಲ್ಲಿಗೆ’ ಬ್ಯೂಟಿ ಚಾರುಲತಾ ಓಪನ್​ ಟಾಕ್​

    ಬೆಂಗಳೂರು: ಸ್ಯಾಂಡಲ್​ವುಡ್​​ನಲ್ಲಿ ಸಾಲುಸಾಲು ಸಿನಿಮಾಗಳಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಹಲವಾರು ನಟಿಯರಿದ್ದಾರೆ.  ಈ ನಟಿಯರ ಸಾಲಿನಲ್ಲಿ ಚಾರುಲತಾ ಕೂಡಾ ಬರುತ್ತಾರೆ. ಸಿನಿಮಾ ಕ್ಷೇತ್ರದಿಂದ ದೂರವಾದ ನಟಿ ಚಾರುಲತಾ ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಿಗೆ ಇರಬಹುದು. ಬನ್ನಿ ನಾವು ಇಂದು ಅವರು ಹೇಗೆ ಇದ್ದಾರೆ ಎಂದು ನೋಡೋಣ..

    ಮೂಲತಃ ಪಂಜಾಬಿಯಾಗಿದ್ದರೂ ಕನ್ನಡದಲ್ಲಿಯೇ ಅತಿಹೆಚ್ಚು ಸಿನಿಮಾ ಮಾಡಿದ್ದಾರೆ. ಚಾರುಲತಾ ಮೊದಲು ಕನ್ನಡದ ವಿ. ಮನೋಹರ್ ನಿರ್ದೇಶನದ ‘ಓ ಮಲ್ಲಿಗೆ’ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದರು. 1997ರಿಂದ 2017ರವರೆಗೆ ಮಾತ್ರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಬೆಡಿಕೆಯ ನಟಿಯಾಗಿದ್ದ ಚಾರುಲತಾ ಅವರು ಇತ್ತೀಚೆಗೆ ನಟನಾ ರಂಗದಿಂದಲೇ ದೂರವಾಗಿದ್ದಾರೆ.ಆದರೆ, 2017ರಲ್ಲಿ ನಟ ದರ್ಶನ್ ನಟನೆಯ ಚಕ್ರವರ್ತಿ ಸಿನಿಮಾದಲ್ಲಿ ಸಹನಟಿಯಾಗಿ ನಟಿಸಿದ ಚಾರುಲತಾ ಮತ್ತೆ ಯಾವುದೇ ತೆರೆಗಳಲ್ಲಿ ಕಾಣಿಸುತ್ತಿಲ್ಲ.

    ಸಂದರ್ಶನವೊಂದರಲ್ಲಿ ಮಾತನಾಡಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸಾಕಾಗಿದೆ. ಈಗ ನಾನು ಆರ್ಥಿಕವಾಗಿಯೂ ಸದೃಢವಾಗಿದ್ದೇನೆ.  ಸಿನಿಮಾರಂಗದ ಅವಶ್ಯಕತೆ ನನಗಿಲ್ಲ ವೈಯಕ್ತಿಕ ಬದುಕಿನತ್ತ ನಾನು ಗಮನ ಹರಿಸಬೇಕೆಂಬ ಹೇಳಿಕೆ ನೀಡಿ ಸಿನಿಮಾ ರಂಗದಿಂದ ಕಣ್ಮರೆಯಾದರು. ಚಾರುಲತಾ ಅವರ ಮದುವೆ ಕುರಿತಾದ ಯಾವುದೇ ಅಸಲಿ ಮಾಹಿತಿ ಲಭ್ಯವಿಲ್ಲ. ಈ ನಟಿ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಾರಾ ಕಾದು ನೋಡಬೇಕಾಗಿದೆ.

    ದೆಹಲಿಗೆ ಹೋಗಿ ಅಲ್ಲಿ ಸ್ವಂತ ಬಿಸಿನೆಸ್ ಶುರು ಮಾಡಿದ ಚಾರುಲತಾ ಅವರು ತಮ್ಮ ತಂದೆ ಅಮೆರಿಕದಲ್ಲಿ ನೆಲೆಸಿದ್ದ ಕಾರಣ ಅಲ್ಲಿಗೆ ತೆರಳಿ ವರ್ಷಗಳ ಕಾಲ ಅಮೆರಿಕದಲ್ಲಿ ಬಿಸಿನೆಸ್ ನೋಡಿಕೊಂಡಿದ್ದರು. ಕೆಲ ಕಾರಣಗಳಿಂದಾಗಿ ಮತ್ತೆ ಕರ್ನಾಟಕಕ್ಕೆ ಕಂಬ್ಯಾಕ್ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಕಾಣುತ್ತಿದ್ದಾರೆ.

    1997ರಿಂದ 2017ರವರೆಗೆ ಮಾತ್ರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಬೆಡಿಕೆಯ ನಟಿಯಾಗಿದ್ದ ಚಾರುಲತಾ ಅವರು ಇತ್ತೀಚೆಗೆ ನಟನಾ ರಂಗದಿಂದಲೇ ದೂರವಾಗಿದ್ದಾರೆ. ಇನ್ನು 2000 ಇಸವಿಯ ನಂತರ ಕನ್ನಡ ಚಿತ್ರರಂಗ ಹೊರತಾಗಿ ತಮಿಳು ಹಾಗೂ ಮಲೆಯಾಳಂನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್‌ ಆರಂಭಿಸಿದರು. ಸಣ್ಣ ಪುಟ್ಟ ರೀಲ್ಸ್‌ಗಳನ್ನು ಮಾಡುತ್ತಾ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. 2004ರಲ್ಲಿ ಕನ್ನಡಕ್ಕೆ ‘ನೀಲಾಂಬರಿ’ಯಾಗಿ ಆಗಮಿಸಿದ ಚಾರುಲತಾ 2017ರವರೆಗೆ ಕೇವಲ 5 ಚಿತ್ರಗಳಲ್ಲಿ ಮಾತ್ರ ನಟನೆ ಮಾಡಿದ್ದಾರೆ. ಹಾಗಂತ ಅನ್ಯ ಭಾಷೆಗಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ, 2017ರಲ್ಲಿ ನಟ ದರ್ಶನ್ ನಟನೆಯ ಚಕ್ರವರ್ತಿ ಸಿನಿಮಾದಲ್ಲಿ ಸಹನಟಿಯಾಗಿ ನಟಿಸಿದ ಚಾರುಲತಾ ಮತ್ತೆ ಯಾವುದೇ ತೆರೆಗಳಲ್ಲಿ ಕಾಣಿಸುತ್ತಿಲ್ಲ.

    ಬಾಲರಾಮನ ಪ್ರಾಣ ಪ್ರತಿಷ್ಠಾ ದಿನವೇ ಮಗಳಿಗೆ ರುದ್ರಾಕ್ಷಿ , ಮಗ ಹಯಗ್ರೀವ ಎಂದು ಹೆಸರಿಟ್ಟ ಧ್ರುವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts