More

    ಉದ್ಯಮಿ ಜತೆ ಅಫೇರ್​; ಪತಿಗೆ ಡಿವೋರ್ಸ್​ ಕೊಡಲು ಮುಂದಾದ ನಮಿತಾ!? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ಚೆನ್ನೈ: ಕಾಲಿವುಡ್​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್​ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್​ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ. ಅದರಲ್ಲೂ ನಟಿಯರೇ ಹೆಚ್ಚು. ಇದೀಗ ರಂಗನಾಥನ್ ಅವರು ಕಣ್ಣು ನಟಿ ನಮಿತಾ ಅವರ ಮೇಲೆ ಬಿದ್ದಿದೆ.

    ಬೈಲ್ವಾನ್​​ ರಂಗನಾಥನ್​​, ನಮಿತಾ ಕುರಿತು ಏನು ಹೇಳಿದರು ಎಂಬುದನ್ನು ತಿಳಿಯುವುದಕ್ಕೂ ಮುನ್ನ ನಮಿತಾ ಅವರ ಹಿನ್ನೆಲೆ ತಿಳಿದುಕೊಳ್ಳೋಣ. ಅಂದಹಾಗೆ ನಮಿತಾ ಅವರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ನೀಲಕಂಠ ಸಿನಿಮಾ ಮೂಲಕ ನಮಿತಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಕನ್ನಡ ಸಿನಿಮಾದಲ್ಲೇ ತಮ್ಮ ಬೋಲ್ಡ್​ ಅವತಾರ ಮೂಲಕ ಸದ್ದು ಮಾಡಿದರು. “ಅಮ್ಮಮ್ಮಮ್ಮೋ ವಯ್ಯಾರಮ್ಮಮ್ಮಮ್ಮೋ” ಹಾಡು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಮನೆ ಮಾಡಿದೆ. ನೀಲಕಂಠ ಬಳಿಕ ನಮಿತಾ, ಸ್ಟಾರ್​ ನಟ ದರ್ಶನ್​ ಜತೆಗೆ ಇಂದ್ರ ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಗುಮ್​ ಗುಮ್​ ಗುಮ್ತಾನೆ ಮತ್ತು ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ ಹಾಡು ಸಿಕ್ಕಾಪಟ್ಟೆ ಹಿಟ್​ ಆಯಿತು.

    ಇದಿಷ್ಟೇ ಅಲ್ಲದೆ, ‘ಹೂ’ ಸಿನಿಮಾದಲ್ಲಿ ಮತ್ತೆ ರವಿಚಂದ್ರನ್​ ಜತೆಯಾದರು. ಬೆಂಕಿ ಬಿರುಗಾಳಿ ನಮಿತಾ ನಟನೆಯ ಕೊನೆಯ ಕನ್ನಡ ಸಿನಿಮಾ ಆಗಿದೆ. ನಟಿಸಿದ್ದು ನಾಲ್ಕೇ ಸಿನಿಮಾವಾದರೂ ಕನ್ನಡಿಗರ ಮನದಲ್ಲೂ ನಮಿತಾ ಮನೆ ಮಾಡಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೇ ಹೆಚ್ಚು ಸುದ್ದಿ ಮಾಡಿದ ನಮಿತಾ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಫೇವರಿಟ್​ ಆಗಿದ್ದರು.

    ಗುಜರಾತ್​ ಮೂಲದ ನಮಿತಾ ಆರಂಭದಲ್ಲಿ ಮಾಡೆಲ್​ ಆಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಮಿತಾ ಸೊಂಟಂ ಹೆಸರಿನ ತೆಲುಗು ಸಿನಿಮಾಕ್ಕೆ ಮೊದಲು ಬಣ್ಣ ಹಚ್ಚಿದರು. ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಮಿತಾ, ಮಲಯಾಳಂ, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಆದರೆ, ಸಿನಿಮಾ ಅವಕಾಶಗಳು ಕಡಿಮೆಯಾದಾಗ ದಿಢೀರನೇ ತೂಕ ಹೆಚ್ಚಿಸಿಕೊಂಡ ನಮಿತಾ ಕೆಲವು ಐಟಂ ಸಾಂಗ್​ಗಳಿಯೂ ಕಾಣಿಸಿಕೊಂಡರು.

    ಸಿನಿಮಾ ಅವಕಾಶ ಸಂಪೂರ್ಣ ನಿಂತಾಗ ಕಿರುತೆರೆ ಕಡೆ ಮುಖ ಮಾಡಿದ ನಮಿತಾ, ಕಾವಂದೆ ಮಯಿಲಾಡ ಕಾರ್ಯಕ್ರಮದ ಜಡ್ಜ್​ ಆಗಿ ಅನೇಕ ವರ್ಷಗಳವರೆಗೆ ಶೋ ನಡೆಸಿಕೊಟ್ಟರು. ತಮಿಳು ಬಿಗ್​ಬಾಸ್​ ಸೀಸನ್​ 1ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ನಮಿತಾ 28 ದಿನಕ್ಕೆ ಮನೆಯಿಂದ ಹೊರಬಂದರು. ಹೀಗೆ ಬಣ್ಣದ ಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡಿದ್ದ ನಮಿತಾ, ನಿರ್ಮಾಪಕ ವೀರೇಂದ್ರ ಚೌಧರಿ ಎಂಬುವರನ್ನು ಪ್ರೀತಿಸಿ 2017ರಲ್ಲಿ ಮದುವೆ ಮಾಡಿಕೊಂಡರು. ದಂಪತಿಗೆ ಅವಳಿ ಮಕ್ಕಳಿದ್ದಾರೆ.

    ವಿವಾದದ ಕಿಡಿ ಹೊತ್ತಿಸಿದ ಬೈಲ್ವಾನ್​ ರಂಗನಾಥನ್​
    ಇದೀಗ ಬೈಲ್ವಾನ್​ ರಂಗನಾಥನ್​ ನಮಿತಾ ಅವರ ಬಗ್ಗೆ ಆಡಿರುವ ಮಾತು ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ನಮಿತಾ ಅವರು ಉದ್ಯಮಿಯೊಬ್ಬರ ಜತೆ ಅಫೇರ್​ ಇಟ್ಟುಕೊಂಡಿದ್ದಾರೆ. ಉದ್ಯಮಿಯ ಜೀವನಶೈಲಿಗೆ ಮನಸೋತಿರುವ ನಮಿತಾ, ತನ್ನ ಪತಿಗೆ ಡಿವೋರ್ಸ್​ ನೀಡಲು ಮುಂದಾಗಿದ್ದಾರೆ ಎಂದು ರಂಗನಾಥನ್​ ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಅಸಲಿ ವಿವರಣೆ ನೀಡುವಂತೆ ನಮಿತಾ ಅವರನ್ನು ಸಹ ರಂಗನಾಥನ್​ ಒತ್ತಾಯಿಸಿದ್ದಾರೆ.

    ರಂಗನಾಥನ್​ ಮಾತು ಕೇಳಿ ನಮಿತಾ ಅಭಿಮಾನಿಗಳು ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ರೀತಿಯ ಎಚ್ಚರಿಕೆಗಳು ರಂಗನಾಥನ್​ಗೆ ಹೊಸತೇನಲ್ಲ. ಈ ಹಿಂದೆಯೂ ಇಂತಹ ಬೆದರಿಕೆ ಬಂದಿವೆ. ಆದರೂ ರಂಗನಾಥನ್​ ಈ ರೀತಿ ಮಾತನಾಡುವುದನ್ನು ನಿಲ್ಲಿಸಿಲ್ಲ. ಇದೀಗ ರಂಗನಾಥನ್​ ಹೇಳಿಕೆ ಕಾಲಿವುಡ್​ ಗಲ್ಲಿಯಲ್ಲಿ ಹಾಟ್​ ಟಾಪಿಕ್​ ಆಗಿದೆ. (ಏಜೆನ್ಸೀಸ್​)

    ಸಿಲ್ಕ್​ ಸ್ಮಿತಾ ಶವದೊಂದಿಗೆ ಲೈಂಗಿಕ ಕ್ರಿಯೆ! ಕಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ಧನುಷ್​ ಜತೆ ಮೀನಾ ಮದುವೆಯಂತೆ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ತಮಿಳು ನಟ…

    ನಾನು ಲೈಂಗಿಕ ವ್ಯಸನಿಯಂತೆ! ಧನುಷ್​, ಬೈಲ್ವಾನ್​ ರಂಗನಾಥನ್​ ವಿರುದ್ಧ ದೂರು ದಾಖಲಿಸಿದ ಗಾಯಕಿ ಸುಚಿತ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts