ಬೆಂಗಳೂರು: ಜನತಾ ಕರ್ಫ್ಯೂ ಬೆಂಬಲಿ ರಾಜ್ಯ ವ್ಯಾಪಿ ನಾಗರಿಕರು ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟಿ ಕರೊನಾ ವಿರುದ್ಧ ಸೆಣೆಸಾಡುತ್ತಿರುವವರಿಗೆ ಧನ್ಯವಾದ ಸಲ್ಲಿಸಿದರು.
ಕರೊನಾ ತಡೆಗಾಗಿ ಶ್ರಮಿಸುತ್ತಿರುವ ವೈದ್ಯರು, ಸಿಬ್ಬಂದಿ, ಸೈನಿಕರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಗೌರವಿಸಿ ಐದು ನಿಮಿಷ ಚಪ್ಪಾಳೆ ತಟ್ಟಿದರು .
ಸಿಎಂ ಯಡಿಯೂರಪ್ಪ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ ಕುಟುಂಬ ಸದಸ್ಯರೊಂದಿಗೆ ಹೊರ ಬಂದು ಚಪ್ಪಾಳೆ ತಟ್ಟಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ ಚಪ್ಪಾಳೆ ತಟ್ಟಿದರು. ದೇವೇಗೌಡರು ವಾಸ ಇರುವ ಅಕ್ಕ-ಪಕ್ಕದ ಮನೆಯವರು ಹೊರಗೆ ಬಂದು ಚಪ್ಪಾಳೆ ತಟ್ಟಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಸೇರಿದಂತೆ ಹಲವು ಗಣ್ಯರು ಚಪ್ಪಾಳೆ ತಟ್ಟಿ ಧನ್ಯವಾದ ಅರ್ಪಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಭದ್ರತೆ ಒದಗಿಸಿರುವ ಪೊಲೀಸರು ಕೂಡ ಈ ಕಾರ್ಯಕ್ಕೆ ಕೈಜೋಡಿಸಿದರು.
ಜಾಗಟೆಯನ್ನು ಬಾರಿಸಿದರು: ಸಾರ್ವಜನಿಕರು ಜಾಗಟೆ ಬಾರಿಸಿ ವೈದ್ಯರಿಗೆ ಗೌರವ ಅರ್ಪಿಸಿದರು. ಸಂಜೆ 5 ಗಂಟೆ ಆಗುತ್ತಲೇ ಮನೆಯಿಂದ ಹೊರಗೆ ಬಂದ ನಾಗರಿಕರು ಜಾಗಟೆ ಬಾರಿಸಿದರು. ಮಕ್ಕಳು ಕೂಡ ಕೈಜೋಡಿಸಿದರು.
ರಾಯಚೂರು ನಗರದಲ್ಲಿ ವಸತಿ ಗೃಹಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೊರಗೆ ಬಂದು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು.
ಸ್ಯಾನಿಟೈಜರ್ ಬೆಲೆ ಕಡಿಮೆ ಮಾಡಿ ಕರೊನಾ ವೈರಸ್ ನಿಯಂತ್ರಣಕ್ಕೆ ಕೈಜೋಡಿಸಿದ ಐಟಿಸಿ ಕಂಪನಿ