More

    ದಿಢೀರ್ ಪೊಲೀಸ್ ದಾಳಿಯಿಂದ ಕಂಗೆಟ್ಟು ಕದ್ದ ಮೊಬೈಲ್​ಗಳನ್ನು ಬಿಟ್ಟು ಪರಾರಿಯಾದ್ರು ಕಳ್ಳರು

    ಹಾನಗಲ್ಲ: ಪೊಲೀಸ್ ದಾಳಿಯಿಂದ ಕಂಗೆಟ್ಟ ಮೊಬೈಲ್ ಕಳ್ಳರು ಕದ್ದ ಮಾಲು ಕೈಬಿಟ್ಟು ಪರಾರಿಯಾದ ಘಟನೆ ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಇಬ್ಬರು ಯುವಕರು ಕದ್ದ ಮೊಬೈಲ್​ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಬೇರೆಡೆ ಸಾಗಿಸಲು ತಾಲೂಕಿನ ಹುಲಗಿನಕೊಪ್ಪ ಗ್ರಾಮದ ಬಸ್ ನಿಲ್ದಾಣದ ಪಕ್ಕ ನಿಂತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

    ಆಗ ಕಳ್ಳರು ಅಂದಾಜು 48,000 ರೂ. ಮೌಲ್ಯದ 15 ಸ್ಯಾಮ್ಂಗ್ ಕಂಪನಿಯ ಮೊಬೈಲ್ ಫೋನ್​ಗಳಿದ್ದ ಚೀಲವನ್ನು ಬಿಟ್ಟು ಕಾಲ್ಕಿತ್ತಿದ್ದಾರೆ. ಆನಂದ ದೊಡ್ಡಮನಿ ಹಾಗೂ ಅಕ್ಷಯ ಮುದಗಲ್ಲ ಆರೋಪಿಗಳೆಂದು ಗುರುತಿಸಲಾಗಿದ್ದು, ಅವರ ವಿರುದ್ಧ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ.

    ಇದನ್ನೂ ಓದಿ: ಕಾಲೇಜು ಯುವತಿ ಮೇಲೆ ಗುಂಡಿನ ದಾಳಿ- ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ

    ಸಿಪಿಐ ಶಿವಶಂಕರ ಗಣಾಚಾರಿ ಮಾರ್ಗದರ್ಶನದಲ್ಲಿ ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ಕುಮಾರ ಹಿರೇಮಠ, ಹನುಮಂತ ಜಾನಗೇರಿ, ಕಿರಣಕುಮಾರ ಸಣ್ಣಗೌಡ್ರ, ಗುಡ್ಡಪ್ಪ ಗಂಟಿಸಿದ್ದಪ್ಪನವರ, ವೀರಣ್ಣ ಲಂಗೋಟಿ, ಚನ್ನವೀರಸ್ವಾಮಿ ಹಿರೇಮಠ ಇದ್ದರು.

    Web Exclusive: ಹಲವಾರು ಶಾಸಕ-ಸಚಿವರೇ ಮತದಾರರಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts