More

    ಸಹೋದರಿಯರ ಮೇಲೆ ಆ್ಯಸಿಡ್​ ಎರಚಿದ್ದವನ ಗುಂಡು​ ಹಾರಿಸಿ ಬಂಧಿಸಿದ ಪೊಲೀಸರು…

    ಉತ್ತರಪ್ರದೇಶ: ದಲಿತ ಸಮುದಾಯದ ಮೂವರು ಅಕ್ಕ-ತಂಗಿಯರ ಮನೆಗೆ ಮಧ್ಯರಾತ್ರಿ ತೆರಳಿ ಆ್ಯಸಿಡ್​ ಎರಚಿದ್ದ ದುಷ್ಕರ್ಮಿಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡಿರುವ ಆತನನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಕಲೊನೆಲ್​ಗಂಜ್ ಪ್ರದೇಶದಲ್ಲಿ ಬೈಕ್​ನಲ್ಲಿ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡು ಬಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಪೊಲೀಸರು ಇನ್ನಷ್ಟೇ ಬಹಿರಂಗಗೊಳಿಸಬೇಕಾಗಿದೆ.

    ಇದನ್ನೂ ಓದಿ: ಆಕೆಯ ಮದ್ವೆಗೆ 10 ದಿನಗಳಿದ್ದವು; ಆದರೆ ಮಧ್ಯರಾತ್ರಿ ನಡೆದ ಆ ಘಟನೆ, ಆ ಮೂವರನ್ನೂ ಬೆಚ್ಚಿ ಬೀಳಿಸಿತ್ತು!

    ಗೊಂಡಾ ಜಿಲ್ಲೆಯ ಪರಸ್ಪುರ್​ ಪ್ರದೇಶದಲ್ಲಿನ ಮನೆಯ ಮಹಡಿಯಲ್ಲಿ ಸೋಮವಾರ ಮೂವರೂ ಸೋದರಿಯರು ಮಲಗಿದ್ದಾಗ, ಮಧ್ಯರಾತ್ರಿ ತೆರಳಿದ್ದ ಆರೋಪಿ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಈ ಕೃತ್ಯದಿಂದ ಇನ್ನು ಹತ್ತು ದಿನಗಳಲ್ಲಿ ಮದುವೆ ಆಗಬೇಕಿದ್ದ 17 ವರ್ಷದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದೇ ವೇಳೆ ಈಕೆಯ ತಂಗಿಯರಾದ 12 ಹಾಗೂ 8 ವರ್ಷದ ಇಬ್ಬರು ಬಾಲಕಿಯರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts