ಭುವನೇಶ್ವರ್: ಮಹಾಮಾರಿ ಕರೊನಾಗೆ ಕಡಿವಾಣ ಹಾಕಲು ಕಳೆದ ವರ್ಷ ಮಾರ್ಚ್ನಲ್ಲಿ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಿಸಲಾಗಿತ್ತು. ಈ ವೇಳೆ ರಾಮಾಯಣ ಸೇರಿದಂತೆ ಅನೇಕ ಹಳೇ ಧಾರಾವಾಹಿಗಳನ್ನು ಪ್ರದರ್ಶಿಸಲಾಗಿತ್ತು. ಇದೀಗ ಒಡಿಶಾದ ಹತ್ತು ವರ್ಷದ ಬಾಲಕನೊಬ್ಬ ಲಾಕ್ಡೌನ್ನಲ್ಲಿ ರಾಮಾಯಣ ಸೀರಿಯಲ್ ನೋಡಿ ಮಕ್ಕಳಿಗಾಗಿ ರಾಮಯಾಣ ಪುಸ್ತಕವನ್ನೇ ಬರೆದಿದ್ದಾನೆ.
ಆಯುಷ್ ಕುಮಾರ್ ಕುಂತಿಯಾ ರಾಮಾಯಣ ಪುಸ್ತಕ ಬರೆದ ಬಾಲಕ. ತಮ್ಮದೇ ಒರಿಯಾ ಭಾಷೆಯಲ್ಲಿ ರಾಮಾಯಣವನ್ನು ಬರೆದಿದ್ದು, ಅದಕ್ಕೆ ಪಿಲಕಾ ರಾಮಾಯಣ (ಮಕ್ಕಳ ರಾಮಾಯಣ) ಎಂದು ಹೆಸರಿಡಲಾಗಿದೆ. ಪುಸ್ತಕವು 104 ಪುಟಗಳನ್ನು ಹೊಂದಿದೆ.
ಇದನ್ನೂ ಓದಿರಿ: ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!
ಈ ಬಗ್ಗೆ ಮಾತನಾಡಿರುವ ಆಯುಷ್, ಲಾಕ್ಡೌನ್ ಸಮಯದಲ್ಲಿ ಟಿವಿಯಲ್ಲಿ ಮರು ಪ್ರಸಾರ ಆಗುವ ರಾಮಾಯಣ ವೀಕ್ಷಿಸುವಂತೆ ನನ್ನ ಅಂಕಲ್ ಹೇಳಿದರು. ವೀಕ್ಷಿಸುವುದು ಮಾತ್ರವಲ್ಲದೆ ಏನಾದರೂ ಬರೆಯಲು ಸೂಚಿಸಿದರು.
ದೂರದರ್ಶನದಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದ ರಾಮಾಯಣದ ಎಲ್ಲ ಎಪಿಸೋಡ್ಗಳನ್ನು ನೋಡಿದೆ. ಪ್ರತಿ ಎಪಿಸೋಡ್ ಮುಗಿದ ಬಳಿಕ ಅದರ ಬಗ್ಗೆ ನೋಟ್ಬುಕ್ನಲ್ಲಿ ಬರೆದುಕೊಳ್ಳುತ್ತಿದ್ದೆ. ಪುಸ್ತಕವನ್ನು ಮುಗಿಸಲು ಸುಮಾರು 2 ತಿಂಗಳು ತೆಗೆದುಕೊಂಡಿತು ಎಂದು ಆಯುಷ್ ಹೇಳಿದ್ದಾನೆ.
ರಾಮನ 14 ವರ್ಷಗಳ ವನವಾಸ ಮತ್ತು ರಾವಣ, ಸೀತೆಯನ್ನು ಅಪಹರಿಸಿದ್ದು ಸೇರಿದಂತೆ ಅನೇಕ ಪ್ರಮುಖ ಘಟನೆಗಳನ್ನು ರಾಮಾಯಣ ಪುಸ್ತಕದಲ್ಲಿ ಪ್ರಸ್ತುತಪಡಿಸಿದ್ದೇನೆ. ಅಲ್ಲದೆ, ರಾಮ ಅಯೋಧ್ಯೆಗೆ ಹಿಂದಿರುಗಿದಾಗ ಆತನಿಗೆ ಸಿಕ್ಕ ಭವ್ಯ ಸ್ವಾಗತವನ್ನು ಸಹ ವಿವರಿಸಿದ್ದೇನೆಂದು ಆಯುಷ್ ಮಾಹಿತಿ ನೀಡಿದನು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
“ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”