ಅಯೋಧ್ಯೆ: ಲಕ್ಷಾಂತರ ಹಿಂದುಗಳು ಹಲವು ವರ್ಷಗಳಿಂದ ಕಾಯುತ್ತಿದ್ದ ಅಯೋಧ್ಯೆಯ ಭವ್ಯವಾದ ರಾಮಮಂದಿರದ ಕನಸು ಈ ವರ್ಷ ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ವೈಭವದಿಂದ ತೆರೆಯಲಾಯಿತು ಮತ್ತು ಬಾಲರಾಮನ ವಿಗ್ರಹವನ್ನು ಸ್ಥಾಪಿಸಲಾಯಿತು. ದೇಗುಲ ಉದ್ಘಾಟನೆಯಾದ ಬಳಿಕ ಇದೇ ಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆ ನಡೆಯುತ್ತಿದೆ. ಹೀಗಾಗಿ ಬಾಲರಾಮನಿಗೆ ಅನೇಕ ಭಕ್ತರು ಅಪಾರ ಕಾಣಿಕೆಗಳನ್ನು ಅರ್ಪಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಬಾಲರಾಮನಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
ಮಧ್ಯಪ್ರದೇಶದ ಭಕ್ತರೊಬ್ಬರು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಏಳು ಕೆಜಿ ಚಿನ್ನವನ್ನೂ ಒಳಗೊಂಡಿರುವ 151 ಕೆಜಿಯ ರಾಮಾಯಣ ಪುಸ್ತಕವನ್ನು ಬಾಲರಾಮನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮಧ್ಯಪ್ರದೇಶದ ಮಾಜಿ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ ಲಕ್ಷ್ಮೀನಾರಾಯಣ ಅವರು ಈ ರಾಮಾಯಣ ಪುಸ್ತಕವನ್ನು ಬಾಲರಾಮನಿಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಜೀವನದಲ್ಲಿ ಗಳಿಸಿದ ಮೊತ್ತವನ್ನು ಬಾಲರಾಮನಿಗೆ ಅರ್ಪಿಸುವುದಾಗಿ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಲಕ್ಷ್ಮೀನಾರಾಯಣ ಅವರು ಪ್ರತಿಜ್ಞೆ ಮಾಡಿದ್ದರು.
ಈ ಪುಸ್ತಕವನ್ನು ತಯಾರಿಸುವಲ್ಲಿ ಅವರ ಲಕ್ಷ್ಮೀನಾರಾಯಣ ಅವರ ಪತ್ನಿ ಸರಸ್ವತಿ ಕೂಡ ಪ್ರಮುಖ ಪಾತ್ರವಹಿಸಿದರು. ಈ ಪುಸ್ತಕವನ್ನು 24-ಕ್ಯಾರೆಟ್ ಚಿನ್ನ, ಬೆಳ್ಳಿ ಮತ್ತು ತಾಮ್ರದಿಂದ ಮಾಡಲಾಗಿದೆ. ಗೋಸ್ವಾಮಿ ತುಳಸಿದಾಸ್ ಎಂಬುವನ್ನು ತಯಾರಿಸಿದ್ದು, 151 ಕೆಜಿ ತೂಕದ ಪುಸ್ತಕವನ್ನು ವಿವಿಧ ಬಂಡಲ್ಗಳಲ್ಲಿ ಪಾರ್ಸೆಲ್ ಮಾಡಲಾಗಿತ್ತು. ಬಳಿಕ ಅದನ್ನು ಜೋಡಿಸಿ ದೇವಸ್ಥಾನಕ್ಕೆ ಕೊಂಡೊಯ್ದು ಹಸ್ತಾಂತರಿಸಲಾಗಿದೆ. ಈ ಪುಸ್ತಕವನ್ನು ಅಯೋಧ್ಯೆಯ ಮುಖ್ಯ ದೇವಾಲಯದಲ್ಲಿ ಇರಿಸಲಾಗಿದೆ.
ಚಿನ್ನದ ರಾಮಾಯಣ ಪುಸ್ತಕದ ಪ್ರತಿ ಪುಟವು 14 ರಿಂದ 12 ಇಂಚುಗಳಷ್ಟು ಗಾತ್ರದಲ್ಲಿದೆ. 10,902 ಪದ್ಯಗಳ ಈ ಮಹಾಕಾವ್ಯದ ಪ್ರತಿ ಪುಟವು 24 ಕ್ಯಾರೆಟ್ ಚಿನ್ನದಿಂದ ಲೇಪಿತವಾಗಿದೆ. 151 ಕೆಜಿ ತಾಮ್ರ ಮತ್ತು 7 ಕೆಜಿ ಚಿನ್ನದಿಂದ ರಾಮಾಯಣ ಪುಸ್ತಕವನ್ನು ಮಾಡಲಾಗಿದೆ. ಇದರೊಂದಿಗೆ ಮುಖ ಪುಟವು ಕೂಡ ಚಿನ್ನ ಲೇಪನದಿಂದಲೇ ಆಗಿದೆ.
ಮತ್ತೊಂದೆಡೆ ಈ ವರ್ಷ ಆರಂಭವಾದ ಅಯೋಧ್ಯೆ ರಾಮಮಂದಿರಲ್ಲಿ ಮಂಗಳವಾರದಿಂದಲೇ ಶ್ರೀರಾಮ ನವಮಿ ಆಚರಣೆ ಆರಂಭವಾಗಿದೆ. ಅಂದರೆ ಯುಗಾದಿ ದಿನದಂದು ಕಲಶ ಪ್ರತಿಷ್ಠಾಪನೆಯೊಂದಿಗೆ 9 ದಿನಗಳ ಶ್ರೀರಾಮನವಮಿ ಆಚರಣೆ ಆರಂಭ ಮಾಡಲಾಗಿದೆ. ಬಾಲರಾಮನನ್ನು ಪೀತಾಂಬರ ಮತ್ತು ರೇಷ್ಮೆಗಳಿಂದ ಅಲಂಕರಿಸಲಾಗಿತ್ತು. (ಏಜೆನ್ಸೀಸ್)
13 ವರ್ಷದ ಹಿಂದೆ ಮೃತಪಟ್ಟ ಪುತ್ರನ ಹೆಸರಲ್ಲಿ ಬಂತು ಫೋನ್ ಕರೆ! ವಂಚಕರ ಹೊಸ ರೀತಿಯ ವಂಚನೆ ಬಯಲು
ನಿಮಗೆಲ್ಲ ಮಸಾಲಾ ಮುಗಿಯಿತು ಫ್ರೆಂಡ್ಸ್! ಗಂಭೀರ್ ಅಪ್ಪುಗೆ ಕುರಿತು ಕೊನೆಗೂ ಮೌನ ಮುರಿದ ಕೊಹ್ಲಿ