ನವದೆಹಲಿ: ಕೆಲದಿನಗಳ ಹಿಂದಷ್ಟೇ ಹಂದ್ವಾರಾದಲ್ಲಿ ಉಗ್ರರು ಒತ್ತೆಸೆರೆ ಇರಿಸಿಕೊಂಡಿದ್ದ ನಾಗರಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾರತದ ಐವರು ಯೋಧರು ಹುತಾತ್ಮರಾದ ಘಟನೆ ಮರೆಯುವ ಮುನ್ನವೇ ಉಗ್ರರು ಅದೇ ಹಂದ್ವಾರಾ ಮತ್ತು ಬದ್ಗಾಂನಲ್ಲಿ ಸಿಆರ್ಪಿಎಫ್ ಮತ್ತು ಸಿಐಎಸ್ಎಫ್ ಯೋಧರ ಮೇಲೆ ಪ್ರತ್ಯೇಕ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಬದ್ಗಾಂನಲ್ಲಿ ವಿದ್ಯುತ್ ಸರಬರಾಜು ಕೇಂದ್ರದ ಕಾವಲು ಕಾಯುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ (ಸಿಐಎಸ್ಎಫ್) ಯೋಧರ ಮೇಲೆ ಉಗ್ರರು ದಾಳಿ ನಡೆಸಿದರು. ಈ ಘಟನೆಯಲ್ಲಿ ಒಬ್ಬ ಯೋಧ ಗಾಯಗೊಂಡಿದ್ದಾರೆ.
ಇದರ ಜತೆಗೆ ಹಂದ್ವಾರಾದಲ್ಲಿ ಮತ್ತೊಂದು ಉಗ್ರರ ಗುಂಪು ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆಸಿತು. ಈ ಘಟನೆಯಲ್ಲಿ ಒಬ್ಬ ಉಗ್ರ ಹತನಾದರೆ, ಮೂವರು ಯೋಧರು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ.
ಸಂಪೂರ್ಣ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.