ಭೋಪಾಲ್: ಈಜುವಾಗ ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ನೀರಿನೊಳಗೆ ಎಳೆದೊಯ್ದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮೊಸಳೆ ದವಡೆಗೆ ಸಿಲುಕಿದ ವ್ಯಕ್ತಿಯ ಪಕ್ಕದಲ್ಲೇ ಇದ್ದ ಆತನ ಸ್ನೇಹಿತನ ಸಾಹಸಿ ಕಾರ್ಯವನ್ನು ಈ ಕ್ಷಣದಲ್ಲಿ ಮೆಚ್ಚಲೇಬೇಕಾಗಿದೆ.
ಆತಂಕಕಾರಿ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿರುವ ಕಲಿಯಾಸೋಟ್ ಅಣೆಕಟ್ಟಿನಲ್ಲಿ ನಡೆದಿದೆ. 30 ವರ್ಷದ ಅಮಿತ್ ಜಾತವ್ ಎಂಬವರು ಸ್ನೇಹಿತನ ಜತೆ ಈಜುವಾಗ ಮೊಸಳೆ ಎಳೆದಾಡಿ ಬಲ ತೊಡೆಯ ಭಾಗವನ್ನು ಗಾಯಗೊಳಿಸಿದೆ. ಮೊಸಳೆ ದಾಳಿಯನ್ನು ಮನಗಂಡ ಸ್ನೇಹಿತ ಗಜೇಂದ್ರ ಯಾದವ್, ಸೆಲ್ಫಿ ಸ್ಟಿಕ್ನಿಂದ ಮೊಸಳೆಯನ್ನು ದೂರಷ್ಟು ತಳ್ಳಿ ಅಮಿತ್ ಜಾತವ್ ಪ್ರಾಣವನ್ನು ಉಳಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ದೇಗುಲ ಪ್ರವೇಶ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; 19ರ ಉತ್ಸವ ರದ್ದುಗೊಳಿಸಿದ ಸರ್ಕಾರ
ತಕ್ಷಣ ಜಾತವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಬಲ ತೊಡೆಗೆ 30 ಹೊಲಿಗೆಯನ್ನು ಹಾಕಲಾಗಿದೆ. ಅಂದಹಾಗೆ ಜಾತವ್ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದಾರೆ. ಲಾಕ್ಡೌನ್ ಬೇಸರ ಹಿನ್ನೆಲೆಯಲ್ಲಿ ಸ್ನೇಹಿತ ಯಾದವ್ರೊಟ್ಟಿಗೆ ಈಜಲು ಡ್ಯಾಂಗೆ ತೆರಳಿದ್ದರು. ವಿಡಿಯೋ ಮಾಡುತ್ತಾ, ಈಜುತ್ತಾ ನೀರಿನಲ್ಲಿ ಆಟ ಆಡುವಾಗ ಮೊಸಳೆ ಏಕಾಏಕಿ ಜಾತವ್ ಮೇಲೆ ದಾಳಿ ನಡೆಸಿದೆ. ನೀರಿನಾಳಕ್ಕೆ ದಿಢೀರನೇ ಎಳೆದೊಯ್ದಿದೆ.
ಈ ಬಗ್ಗೆ ಮಾತನಾಡಿರುವ ಜಾತವ್ ನನ್ನ ಸ್ನೇಹಿತ ಯಾದವ್ ಇರದಿದ್ದರೆ ನಾನು ಖಂಡಿತ ಬದುಕುತ್ತಿರಲಿಲ್ಲ. ಮೊಸಳೆ ಸುಮಾರು 6 ಅಡಿ ಇತ್ತು. ಬಹಳ ಆಳದವರೆಗೆ ಎಳೆದೊಯ್ಯಿತು. ಬಳಿಕ ನನ್ನ ಸ್ನೇಹಿತ ನೆರವಿಗೆ ಧಾವಿಸಿದ ಎಂದು ಹೇಳಿಕೊಂಡಿದ್ದಾರೆ.
ಭೂಪಾಲ್ನಲ್ಲಿ ಕಳೆದ ಒಂಬತ್ತು ವರ್ಷದಲ್ಲಿ 3ನೇ ಬಾರಿ ನಡೆದ ಮೊಸಳೆ ದಾಳಿ ಇದಾಗಿದೆ. 2011ರಲ್ಲಿ 17 ವರ್ಷದ ಸಂಜಯ್ ಸಿಂಗ್ ಎಂಬ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿ ಕೊಂದು ತಿಂದಿತ್ತು. ಈ ವೇಳೆ ಸಂಜಯ್ ಸಿಂಗ್ ಸ್ನೇಹಿತನೊಂದಿಗೆ ಆಟವಾಡುತ್ತಿದ್ದ. 2014ರ ಸೆಪ್ಟೆಂಬರ್ನಲ್ಲಿ ಮೀನು ಹಿಡಿಯುತ್ತಿದ್ದ 46 ವರ್ಷದ ವ್ಯಕ್ತಿಯ ಮೇಲೆ ಮೊಸಳೆ ದಾಳಿ ಮಾಡಿತ್ತು. (ಏಜೆನ್ಸಿಸ್)
ಡ್ಯಾಂಗಳಲ್ಲಿ ನೀರಿಗಿಳಿಯೋ ಮುನ್ನ ಈ ವಿಡಿಯೋ ನೋಡಿ
ಆತಂಕಕಾರಿ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿರುವ ಕಲಿಯಾಸೋಟ್ ಅಣೆಕಟ್ಟಿನಲ್ಲಿ ನಡೆದಿದೆ. 30 ವರ್ಷದ ಅಮಿತ್ ಜಾತವ್ ಎಂಬವರು ಸ್ನೇಹಿತನ ಜತೆ ಈಜುವಾಗ ಮೊಸಳೆ ಎಳೆದಾಡಿ ಬಲ ತೊಡೆಯ ಭಾಗವನ್ನು ಗಾಯಗೊಳಿಸಿದೆ. ಮೊಸಳೆ ದಾಳಿಯನ್ನು ಮನಗಂಡ ಸ್ನೇಹಿತ ಗಜೇಂದ್ರ ಯಾದವ್, ಸೆಲ್ಫಿ ಸ್ಟಿಕ್ನಿಂದ ಮೊಸಳೆಯನ್ನು ದೂರಷ್ಟು ತಳ್ಳಿ ಅಮಿತ್ ಜಾತವ್ ಪ್ರಾಣವನ್ನು ಉಳಿಸಿದ್ದಾರೆ#Swimming #Crocodile #CrocodileAttack #Friend #Rescue #BhopalDam
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜೂನ್ 11, 2020
ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿದೆ ಉತ್ತರ