ಜೈಪುರ: ರೈಲ್ವೆ ನಿಲ್ದಾಣದಲ್ಲಿ ಕುಳಿತು ರೈಲಿಗೆ ಕಾಯುವಾಗ ಒಂದು ಕಪ್ ಟೀ ಇದ್ದರೆ ಅದರ ಮಜಾನೇ ಬೇರೆ. ಮನೆಯಲ್ಲಿ ಮಾಡುವಷ್ಟು ರುಚಿ ಇಲ್ಲದಿದ್ದರೂ, ಪ್ಲಾಸ್ಟಿಕ್ ಕಪ್ನಲ್ಲಿ ಸಿಗುವ ಆ ಟೀ ಬಗ್ಗೆ ಬೇರೆಯದ್ದೇ ಆದ ಪ್ರೀತಿ ಪ್ರಯಾಣಿಕರಿಗಿದೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಪ್ಲಾಸ್ಟಿಕ್ ಕಪ್ನಲ್ಲಿ ಟೀ ಕುಡಿಯುವದಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇದನ್ನೂ ಓದಿ: ಡಿವೋರ್ಸ್ ಕೇಸ್ ಹಾಕಿದವರೇ ವಾದ ಮಂಡಿಸಲು ಅವಕಾಶವಿದೆಯೆ?
ರೈಲ್ವೆ ನಿಲ್ದಾಣದ ಟೀ ಶಾಪ್ಗಳಲ್ಲಿ ಪ್ಲಾಸ್ಟಿಕ್ ಕಪ್ ಬದಲಾಗಿ ಮಣ್ಣಿನ ಲೋಟದಲ್ಲಿ ಟೀ ಮಾರಾಟ ಮಾಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಭಾನುವಾರದಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಧಿಗವಾರ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಈಗಾಗಲೇ ದೇಶದ 400 ರೈಲ್ವೆ ನಿಲ್ದಾಣದಲ್ಲಿ ಮಣ್ಣಿನ ಲೋಟದಲ್ಲಿ ಟೀ ಮಾರಾಟ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ರೈಲ್ವೆ ನಿಲ್ದಾಣವೂ ಪ್ಲಾಸ್ಟಿಕ್ ಮುಕ್ತವಾಗಲಿದೆ. ಎಲ್ಲ ನಿಲ್ದಾಣದಲ್ಲಿಯೂ ಮಣ್ಣಿನ ಲೋಟದಲ್ಲಿಯೇ ಟೀ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ವಿದ್ಯುತ್ ಕಂಬದ ಮೇಲೆ ಕಾದು ಕುಳಿತಿದ್ದ ಜವರಾಯ! ಓರ್ವ ಲೈನ್ ಮ್ಯಾನ್ ಸಾವು, ಇನ್ನೋರ್ವ ಗಂಭೀರ