More

    ಇಳಕಲ್ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಸಾವು

    ತಾವರಗೇರಾ: ಪಟ್ಟಣದ ಒಂದೇ ಕುಟುಂಬದ ಮೂವರು ಭಾನುವಾರ ರಾತ್ರಿ ಇಳಕಲ್ ಬಳಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಿಜಯಪುರದ ಹತ್ತಿರ ದೇವಸ್ಥಾನಕ್ಕೆ ಹೋಗಿ ವಾಪಸಾಗುವಾಗ ರಾಷ್ಟ್ರೀಯ ಹೆದ್ದಾರಿ 50ರ ಇಳಕಲ್ ಬಳಿ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಸೇತುವೆಗೆ ಡಿಕ್ಕಿ ಹೊಡೆದಿದೆ.

    ಇದನ್ನೂ ಓದಿ: ತಡರಾತ್ರಿ ಕಾರು ಅಪಘಾತ: ಕಾಂಗ್ರೆಸ್​ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್​ ಚಿಂಚನಸೂರ್​ಗೆ ಗಾಯ

    ಮೃತರು ಪಟ್ಟಣದ ಕಿಡದೂರ ನಾಯಕ ಕುಟುಂಬದವರು. ಅಪಘಾತದಲ್ಲಿ ಶಾಮೀದಸಾಬ್ ಕಿಡದೂರನಾಯಕ (65) ಮೌಲಾಸಾಬ್ ಕಿಡದೂರನಾಯಕ (60) ಮತ್ತು ಇಮಾಮ್‌ಬಿ ಕಿಡದೂರನಾಯಕ (60) ಮೃತಪಟ್ಟಿದ್ದಾರೆ. ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts