ಬೆಂಗಳೂರು: ಕ್ರೀಡಾ ಅಭಿಮಾನಿಗಳ ಪಾಲಿಗೆ ಹಬ್ಬವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಟೂರ್ನಿ ಆರಂಭಕ್ಕೆ ಇನ್ನು 5 ದಿನಗಳಷ್ಟೇ ಬಾಕಿ ಇದೆ. ಪ್ರಸಕ್ತ ಆವೃತ್ತಿಯ ಕಡೆಗೆ ಹೆಚ್ಚು ಜನರನ್ನು ಸೆಳೆಯಲು ಸ್ಟಾರ್ ಸ್ಪೋರ್ಟ್ಸ್, ಟಾಟಾ ಐಪಿಎಲ್ ಟ್ರೋಫಿ ಟೂರ್ ಅನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಂದು ಆಯೋಜಿಸಿದೆ.
ಸ್ಟಾರ್ಸ್ಪೋರ್ಟ್ಸ್ ಸಾರಥ್ಯ
ಐಪಿಎಲ್ 16ನೇ ಆವೃತ್ತಿಯ ಅಧಿಕೃತ ಟೆಲಿವಿಷನ್ ಪ್ರಸಾರ ಹಕ್ಕನ್ನು ಸ್ಟಾರ್ಸ್ಪೋರ್ಟ್ಸ್ ವಾಹಿನಿ ಪಡೆದುಕೊಂಡಿದೆ. ಇಂಗ್ಲಿಷ್ ಹಾಗೂ ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಗುಜರಾತಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಐಪಿಎಲ್ 16ನೇ ಆವೃತ್ತಿಯನ್ನು ಸ್ಟಾರ್ಸ್ಪೋರ್ಟ್ಸ್ ಪ್ರಸ್ತುತಪಡಿಸುತ್ತಿದೆ. ಕರೊನಾ ಮಹಾಮಾರಿಯಿಂದ ಕಳೆಗುಂದಿದ್ದ ಐಪಿಎಲ್ ಟೂರ್ನಿಗೆ ಹೆಚ್ಚು ಉತ್ಸಾಹವನ್ನು ತುಂಬಲು ಈ ಬಾರಿ ಸ್ಟಾರ್ಸ್ಪೋರ್ಟ್ಸ್ ಟಾಟಾ ಐಪಿಎಲ್ ಟ್ರೋಫಿ ಟೂರ್ ಪ್ರಸ್ತುತಪಡಿಸಿದ್ದು, ಅದರ ಸಾರಥ್ಯವನ್ನು ವಹಿಸಿದೆ.
ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಐಪಿಎಲ್ ಟ್ರೋಫಿಯನ್ನು ವಿವಿಧ ಪ್ರದೇಶಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದ್ದು, ಕ್ರೀಡಾಭಿಮಾನಿಗಳು ನೇರವಾಗಿ ಟ್ರೋಫಿಯನ್ನು ಕಣ್ತುಂಬಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಗರದ ಆಯ್ದ ಭಾಗಗಳಲ್ಲಿ ಐಪಿಎಲ್ ಟ್ರೋಫಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಎಲ್ಲೆಲ್ಲಿ ಇರಿಸಲಾಗುತ್ತದೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಸುಂಟರಗಾಳಿಗೆ 25 ಮಂದಿ ಬಲಿ: ತುರ್ತು ನೆರವು ಘೋಷಿಸಿದ ಅಧ್ಯಕ್ಷ ಜೋ ಬೈಡೆನ್
* ಬೆಳಗ್ಗೆ 5.30ರಿಂದ 11 ಗಂಟೆಯರೆಗೆ ಹೊಸಕೆರೆಹಳ್ಳಿಯ ನೈಸ್ ಟೋಲ್ ಗೇಟ್ ಬಳಿ ಟ್ರೋಫಿಯನ್ನು ಪ್ರದರ್ಶನಕ್ಕೆ ಇಡಲಾಗುವುದು.
* ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಜಯನಗರದ ಮೈಯಾಸ್ ಬಳಿ ಪ್ರದರ್ಶಿಸಲಾಗುವುದು.
* ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೋರಮಂಗಲದ ಫೋರಮ್ ನೆಕ್ಸಸ್ ಮಾಲ್ ಟ್ರೋಫಿ ಪ್ರದರ್ಶನ.
* ರಾತ್ರಿ 9 ರಿಂದ 11 ಗಂಟೆಯವರೆಗೆ ನಗರದ ವಿಶೇಷ ಸ್ಥಳದಲ್ಲಿ ಟ್ರೋಫಿಯನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.
ಮುಂಬೈನಲ್ಲಿ ಶುರುವಾದ ಟ್ರೋಫಿ ಟೂರ್ ಬಳಿಕ ವಿಶಾಖಪಟ್ಟಣಂ ಮತ್ತು ಚೆನ್ನೈನಲ್ಲಿ ಯಶಸ್ವಿಯಾಗಿ ಮುಗಿಸಿ ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ಇಂದು ಇಡೀ ದಿನ ನಗರದಲ್ಲಿ ಟ್ರೋಫಿ ಪ್ರದರ್ಶನವಾಗಲಿದ್ದು, ಕ್ರೀಡಾಭಿಮಾನಿಗಳ ಪಾಲಿಗೆ ಹಬ್ಬವಾಗಿದೆ. ಇನ್ನು ಐಪಿಎಲ್ ಹಬ್ಬಕ್ಕೆ ಐದೇ ದಿನ ಬಾಕಿ ಇದ್ದು, ಈ ಬಾರಿಯು ಈ ಸಲ ಕಪ್ ನಮ್ದೆ ಎಂಬ ಆರ್ಸಿಬಿ ಅಭಿಮಾನಿಗಳ ಸದ್ದು ಜೋರಾಗಿದೆ. ಈಗಾಗಲೇ ಆರ್ಸಿಬಿ ತಂಡ ಹೊಸ ಭರವಸೆಯೊಂದಿಗೆ ಅಭ್ಯಾಸ ಶುರುವಿಟ್ಟುಕೊಂಡಿದೆ.
ಇದನ್ನೂ ಓದಿ: ನಂಗೇನು ನಾಚಿಕೆ ಇಲ್ಲ! ಮೋದಿ ಕುರಿತ ಹಳೇ ಟ್ವೀಟ್ ವೈರಲ್, ಸಮರ್ಥನೆ ನೀಡಿದ ಖುಷ್ಬೂ ಸುಂದರ್
ಎಂಜಾಯ್ ಮಾಡಿ ಓಡು ಗುರು ಎಂದ ಕೊಹ್ಲಿ
ಟ್ರೋಫಿ ಪ್ರದರ್ಶನಕ್ಕೂ ಮುನ್ನ ಇಂದು ಬೆಳಗ್ಗೆ ಹೊಸಕೆರೆಹಳ್ಳಿ ಟೋಲ್ ಬಳಿ 18ಕೆ ಮ್ಯಾರಥಾನ್ಗೆ ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಚಾಲನೆ ನೀಡಿದರು. 18, 10 ಮತ್ತು 5 ಕಿ.ಮೀ ಓಟದ ಮ್ಯಾರಥಾನ್ ಆಗಿದೆ. ಚಾಲನೆ ನೀಡಿ ಕನ್ನಡದಲ್ಲೇ ಮಾತು ಆರಂಭಿಸಿದ ಕೊಹ್ಲಿ ಎಂಜಾಯ್ ಮಾಡಿ ಓಡು ಗುರು ಎಂದರು. ಈ ವೇಳೆ ನೆರೆದಿದ್ದ ಅಭಿಮಾನಿಗಳಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ಮ್ಯಾರಥಾನ್ಗೆ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರಿರುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ ಎಂದರು. ನೆಚ್ಚಿನ ಕ್ರಿಕೆಟಿಗನನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಮಂದಿ ಅಲ್ಲಿ ನೆರೆದಿದ್ದರು.
ಇಂದು ಆರ್ಸಿಬಿ ಅಭಿಮಾನಿಗಳಿಗೆ ಹಬ್ಬ
ಐಪಿಎಲ್ ಆರಂಭಕ್ಕೆ ಇನ್ನೂ ಐದು ದಿನಗಳಿದ್ದರೂ, ಆರ್ಸಿಬಿ ಅಭಿಮಾನಿಗಳಿಗೆ ಇಂದೇ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 4ರಿಂದ 10 ಗಂಟೆಯವರೆಗೆ ಅಭಿಮಾನಿಗಳ ಸಮ್ಮುಖದಲ್ಲಿ ‘ಆರ್ಸಿಬಿ ಅನ್ಬಾಕ್ಸ್’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಜತೆಗೆ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಭಾಗವಹಿಸಲಿದ್ದಾರೆ. ಎಬಿಡಿ ಅವರ 17 ಮತ್ತು ಗೇಲ್ರ 333 ನಂ. ಜೆರ್ಸಿಯನ್ನು ಆರ್ಸಿಬಿ ತಂಡದಿಂದ ನಿವೃತ್ತಿಗೊಳಿಸಲಾಗುತ್ತಿದೆ. ಆರ್ಸಿಬಿ ಮಹಿಳಾ ತಂಡದ ಸದಸ್ಯರೂ ಸಮಾರಂಭದಲ್ಲಿ ಭಾಗವಹಿಸಲಿದ್ದು, ಇದರ ಟಿಕೆಟ್ಗಳು ಈಗಾಗಲೆ ಬಹುತೇಕ ಮಾರಾಟವಾಗಿವೆ. ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮವೂ ಇರಲಿದೆ. ಆರ್ಸಿಬಿ ಯುಟ್ಯೂಬ್ ಚಾನಲ್ನಲ್ಲಿ ಸಮಾರಂಭ ನೇರಪ್ರಸಾರವನ್ನೂ ಕಾಣಲಿದೆ.
ಅಪಘಾತದಲ್ಲಿ ಎಸ್ಐ, ಪೇದೆ ಸಾವು ಪ್ರಕರಣ: ಪರಿಹಾರ ಕೊಡದ ಸರ್ಕಾರ, ಸಹೋದ್ಯೋಗಿಗಳಿಂದಲೇ ನೆರವು
ನವ್ಯಾ ನಾಯರ್ ಮುಂದೆಯೇ 10 ಮಹಿಳೆಯರ ಜತೆ ಮಲಗಿದ್ದೆ ಎಂದಿದ್ದ ಖ್ಯಾತ ನಟನ ದಾಂಪತ್ಯದಲ್ಲಿ ಬಿರುಗಾಳಿ!
ತುಂಬಿದ ಮಾಲ್ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!