More

    ಸದ್ಯದಲ್ಲೇ ಹೊಸ ಸಾಹಸಕ್ಕೆ ಕೈ ಹಾಕಲಿದ್ದಾರಂತೆ ತರುಣ್​!

    ಬೆಂಗಳೂರು: ವಿಜಯ್​ ರಾಘವೇಂದ್ರ ಅಭಿನಯದ ‘ಖುಷಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ‘ಲವ್​ ಗುರು’ ಖ್ಯಾತಿಯ ತರುಣ್. ಆ ನಂತರ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದ ಅವರು, ಆ ನಂತರ ಸುಧೀರ್ಘ ಗ್ಯಾಪ್​ ತೆಗೆದುಕೊಂಡಿದ್ದರು. ಆ ನಂತರ ಮತ್ತೆ ಬಂದ ಅವರು, ಐದು ವರ್ಷಗಳಿಂದ ಚಿತ್ರಂಗದಿಂದ ನಾಪತ್ತೆಯಾಗಿದ್ದರು.

    ಇದನ್ನೂ ಓದಿ: ಅಪ್ಪನ ಪಕ್ಷಕ್ಕೂ ನನಗೂ ಸಂಬಂಧವಿಲ್ಲ … ಕಡ್ಡಿ ತುಂಡು ಮಾಡಿದ ವಿಜಯ್

    ಕೋಮಲ್​ ಜತೆಗೆ ನಟಿಸಿದ ‘ಗೋವಾ’ ಚಿತ್ರವೇ ಕೊನೆ. ಆ ನಂತರ ತರುಣ್​ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ಅವರು ‘ಲವ್​ ಗುರು’ ಎಂಬ ವಿಡಿಯೋ ಸಾಂಗ್​ ಮೂಲಕ ಮತ್ತೆ ವಾಪಸ್ಸಾಗಿದ್ದಾರೆ.

    ಈ ಐದು ವರ್ಷಗಳ ಕಾಲ ತಾನೇನು ಮಾಡಿದೆ ಎಂದು ವಿವರಿಸುವ ತರುಣ್​, ‘ಮೊದಲಿನಿಂದ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ, ಸುಮ್ಮನೆ ನಿರ್ದೇಶನಕ್ಕೆ ಇಳಿಯುವುದಕ್ಕೆ ಇಷ್ಟವಿರಲಿಲ್ಲ. ಈ ನಿಟ್ಟಿನಲ್ಲಿ ತುಂಬಾ ಕಲಿಯಬೇಕು ಎಂದನಿಸಿ ವಿದೇಶದ ಪ್ರತಿಷ್ಠಿತ ಇನ್​​ಸ್ಟಿಟ್ಯೂಟ್​ನಲ್ಲಿ ಎರಡು ವರ್ಷದ ಕೋರ್ಸ್​ ಮಾಡಿದೆ. ಆ ನಂತರ ಒಂದು ಕಥೆ ಮಾಡಿ, ಸುಮಾರು ಒಂದು ತಾಸಿನ ಶೋರೀಲ್​ ಮಾಡಿದೆ’ ಎನ್ನುತ್ತಾರೆ ತರುಣ್​.

    ಈ ಶೋರೀಲ್​ ಮಾಡುವ ಸಂದರ್ಭದಲ್ಲಿ ನಮ್ಮಲ್ಲಿ ಬಹಳಷ್ಟು ಟೂಲ್ಸ್​ ಇಲ್ಲ ಎಂಬ ವಿಷಯ ಅವರ ಗಮನಕ್ಕೆ ಬಂತಂತೆ. ‘ಬಹಳಷ್ಟು ಟೂಲ್ಸ್​ ನಮ್ಮಲ್ಲಿ ಇರದಿರುವುದರಿಂದ ಕೆಲವೊಂದು ಶಾಟ್​ಗಳನ್ನು ತೆರೆಯ ಮೇಲೆ ತರುವುದು ಬಹಳ ಕಷ್ಟವಾಗುತಿತ್ತು. ಇದರಿಂದ ಸಮಯ ಮತ್ತು ಹಣ ಎರಡೂ ಖರ್ಚಾಗುತಿತ್ತು. ಸಿನಿಮಾ ಮಾಡುವ ಸಂದರ್ಭದಲ್ಲಿ ಇಂತಹ ಸಮಸ್ಯೆಗಳಾಗಬಾರದು ಎಂದು ಅವರು ಟೂಲ್ಸ್​ ಸಂಗ್ರಹಿಸುವ ಕೆಲಸ ಮಾಡಿದೆ. ಕೊನೆಗೆ ಒಂದು ಚಿತ್ರ ಮಾಡುವಷ್ಟು ವಿಶ್ವಾಸ ನನ್ನಲ್ಲಿ ಬಂತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಬಂತು’ ಎನ್ನುತ್ತಾರೆ ತರುಣ್​.
    ಇದನ್ನೂ ಓದಿ: ಕ್ರಿಸ್​ಮಸ್​ ಅಥವಾ ಸಂಕ್ರಾಂತಿಗೆ ‘ಪೊಗರು’ ಅಬ್ಬರ

    ಇದೀಗ ಚಿತ್ರ ನಿರ್ದೇಶನಕ್ಕೆ ಕೈಹಾಕುವುದಕ್ಕೆ ಸಿದ್ಧತೆ ನಡೆಸಿರುವ ಅವರು. ‘ಇಷ್ಟು ದಿನಗಳಲ್ಲಿ ನಾಲ್ಕೈದು ಸ್ಕ್ರಿಪ್ಟ್​ಗಳನ್ನು ಮಾಡಿಟ್ಟುಕೊಂಡಿದ್ದೇನೆ. ಅದರಲ್ಲಿ ನನಗಾಗಿ ಬರೆದುಕೊಂಡ ಕಥೆಗಳೂ ಇವೆ. ಬೇರೆಯವರಿಗೆ ಮಾಡಿದ ಕಥೆಗಳೂ ಇವೆ. ಸದ್ಯದಲ್ಲೇ ಅದರಲ್ಲಿ ಒಂದನ್ನು ಫೈನಲ್​ ಮಾಡಿ ನಿರ್ದೇಶನಕ್ಕೆ ಕೈಹಾಕುತ್ತೇನೆ. ಇಷ್ಟು ವರ್ಷಗಳ ಗ್ಯಾಪ್​ ಆಯಿತು. ಇನ್ನು ಮುಂದೆ ಈ ತರಹದ ಗ್ಯಾಪ್​ ಕೊಡುವುದಿಲ್ಲ. ತೆರೆಯ ಹಿಂದೆ ಅಥವಾ ಮುಂದೆ, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ಮನರಂಜಿಸುವ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ.

    ನಮ್ಮಪ್ಪ ನನಗಾಗಿ ಒಂದು ಸಿನಿಮಾನೂ ಮಾಡ್ಲಿಲ್ಲ: ಅಭಿಷೇಕ್​ ಬಚ್ಚನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts