ಚೆನ್ನೈ: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಪ್ರಯುಕ್ತ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರಾಜ್ಯದ ಜನರಿಗೆ ಭರ್ಜರಿ ಘೋಷಣೆಗಳನ್ನು ಮಾಡಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗಿಗಳು, ಆದಾಯ ತೆರಿಗೆ ಪಾವತಿದಾರರು ಹೊರತುಪಡಿಸಿ ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ಈ ಸೌಲಭ್ಯ ಸಿಗಲಿದೆ ಎಂದು ಸರ್ಕಾರದ ವತಿಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಇದನ್ನೂ ಓದಿ: ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಚುಂಬಿಸಿದ ಆಮೀರ್ ಖಾನ್; ವಿಡಿಯೋ ವೈರಲ್
“ಕಲೈಘರ್ ಮಗಳಿರ್ ಉರಿಮೈ ತಿಟ್ಟಂ” ಯೋಜನೆಯಡಿ ಮಾಸಿಕವಾಗಿ ನೀಡುವ ಸಾವಿರ ರೂಪಾಯಿ ಹಣವನ್ನು ಐದು ದಿನಗಳ ಮುಂಚೆಯೇ ಅಂದರೆ ಜನವರಿ 10 ರಂದು ಪಲಾನುಭವಿಗಳ ಖಾತೆಗೆ ಸರ್ಕಾರ ನೇರವಾಗಿ ಪಾವತಿ ಮಾಡಲಿದೆ. ಇದರಿಂದ 1.15 ಕೋಟಿ ಮಹಿಳೆಯರಿಗೆ ಅನುಕೂಲವಾಗಲಿದೆ. ಪಡಿತರ ಕಿಟ್ನಲ್ಲಿ ಕಬ್ಬು, ತಲಾ ಒಂದು ಕೆಜಿ ಅಕ್ಕಿ, ಸಕ್ಕರೆ, ಒಂದು ಗಿಫ್ಟ್ ಹ್ಯಾಂಪರ್, ಒಂದು ಧೋತಿ ಮತ್ತು ಸೀರೆಯನ್ನು ಕೊಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೊಂಗಲ್ ಹಬ್ಬದ ವಿಶೇಷತೆ ?
ವರ್ಷದ ಮೊದಲ ದೊಡ್ಡ ಹಬ್ಬವಾದ ಪೊಂಗಲ್ ಅಥವಾ ಥೈ ಪೊಂಗಲ್ ತಮಿಳುನಾಡು ರಾಜ್ಯದಲ್ಲಿ ಪ್ರತಿವರ್ಷ ಜನವರಿ ಮಧ್ಯದಲ್ಲಿ ಆಚರಿಸಲಾಗುವ ನಾಲ್ಕು ದಿನಗಳ ಸುಗ್ಗಿಯ ಹಬ್ಬವಾಗಿದೆ ಮತ್ತು ಈ ಹಬ್ಬವು ಮಕರ ಸಂಕ್ರಾಂತಿಯೊಂದಿಗೆ ಸೇರಿಕೊಳ್ಳುತ್ತದೆ. ರೈತರು ಮತ್ತು ಇತರ ಜನರು ಒಟ್ಟಾಗಿ ಸಮೃದ್ಧವಾದ ಸುಗ್ಗಿಯನ್ನು ಆಚರಿಸುತ್ತಾರೆ ಮತ್ತು ಪೊಂಗಲ್ ಹಬ್ಬದ ಈ ನಾಲ್ಕು ದಿನಗಳ ವಿವಿಧ ಆಚರಣೆಗಳನ್ನು ಅನುಸರಿಸುವ ಮೂಲಕ ದೇವರಿಗೆ ಪ್ರಾರ್ಥನೆಯನ್ನು ಅರ್ಪಿಸುತ್ತಾರೆ.