More

    ತಾಯ್ನಾಡಿಗೆ ಹೊರಟ ಭಾರತೀಯರನ್ನು ವಿಚಾರಣೆಗೆ ಕರೆದೊಯ್ದ ತಾಲಿಬಾನ್​!

    ನವದೆಹಲಿ/ಕಾಬುಲ್​: ಅಫ್ಘಾನಿಸ್ತಾನದಲ್ಲಿ ಇಂದು ಬೆಳಿಗ್ಗೆ 150 ಜನ ಭಾರತೀಯ ನಾಗರೀಕರನ್ನು ತಾಲಿಬಾನ್​ ಉಗ್ರರು ವಶಪಡಿಸಿಕೊಂಡಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ, ತಾಲಿಬಾನಿಗಳು ಈ ಭಾರತೀಯರನ್ನು ಪ್ರಶ್ನೆ ಮಾಡುವುದಕ್ಕಾಗಿ ಕರೆದೊಯ್ದಿದ್ದರು ಅಷ್ಟೆ. ಇದೀಗ ಇವರೆಲ್ಲಾ ಭಾರತಕ್ಕೆ ತೆರಳಲು ವಿಮಾನ ನಿಲ್ದಾಣ ತಲುಪಿದ್ದಾರೆ ಎನ್ನಲಾಗಿದೆ.

    ಕಾಬುಲ್​ನ ವಿಮಾನ ನಿಲ್ದಾಣದ ಹೊರಗೆ ಭಾರತೀಯ ವಿಮಾನಗಳಿಗಾಗಿ ಕಾಯುತ್ತಿದ್ದ ಭಾರತೀಯರನ್ನು ತಾಲಿಬಾನಿಗಳು ಹತ್ತಿರದ ಪೊಲೀಸ್​ ಠಾಣೆಗೆ ಒಯ್ದರು. ಅಲ್ಲಿ ಅವರನ್ನು ವಿಚಾರಣೆ ನಡೆಸಿ, ಪ್ರಯಾಣಕ್ಕೆ ಅಗತ್ಯ ದಾಖಲೆಗಳಿವೆಯೇ ಎಂದು ಪರಿಶೀಲಿಸಿ ಕಳುಹಿಸಿದರು ಎಂದು ಸುದ್ದಿಮೂಲಗಳು ತಿಳಿಸಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

    ಇದನ್ನೂ ಓದಿ: ಮತ್ತೆ ಕರಾಳತೆಯ ಭೀತಿ: ತಾಲಿಬಾನ್​ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!

    ಈ ಮುನ್ನ, ಇಂದು ಬೆಳಿಗ್ಗೆಯೇ 85 ಭಾರತೀಯರನ್ನೊಳಗೊಂಡ ಭಾರತೀಯ ವಾಯುಪಡೆಯ ವಿಮಾನ ಕಾಬುಲ್​ನಿಂದ ಸುರಕ್ಷಿತವಾಗಿ ಹೊರಟ ವರದಿ ಬಂದಿತ್ತು. ತಾಲಿಬಾನ್​ ಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ತೆರವುಗೊಳಿಸಲು ಭಾರತ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    VIDEO| ಚಿನ್ನವನ್ನು ಹೇಗೆ ಮುಚ್ಚಿಟ್ಟುಕೊಂಡು ತಂದಿದ್ದಾರೆ… ಇಲ್ಲಿ ನೋಡಿ!

    Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts