More

    ಪಂದ್ಯಾಟಕ್ಕೆ ಪ್ರೋತ್ಸಾಹ ಸಂತಸದಾಯಕ : ಡಾ.ಜೆರಾಲ್ಡ್ ಡಿಸೋಜಾ

    ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಪ್ರಥಮ ಬಾರಿ ಆಯೋಜಿಸಲಾದ ಅಂತರ್ ಕಾಲೇಜು ಪುರುಷರ ಥ್ರೋಬಾಲ್ ಪಂದ್ಯಾಟ ಬುಧವಾರ ಉದ್ಘಾಟನೆಗೊಂಡಿತು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಡಿಸೋಜಾ ಮಾತನಾಡಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ಪುರುಷರಿಗೆ ಥ್ರೋಬಾಲ್ ಪಂದ್ಯಾಟ ಈ ವರೆಗೆ ನಡೆದಿರಲಿಲ್ಲ. ಈ ಬಾರಿ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕ ಪ್ರವೀಣ್ ಕೂಡಮರ ಅವರ ಒತ್ತಾಸೆಯಂತೆ ಪಂದ್ಯಾಟ ನಡೆಯುತ್ತಿದೆ. ಈ ಪಂದ್ಯಾಟಕ್ಕೆ ಉಪ್ಪಿನಂಗಡಿಯಂತಹ ಗ್ರಾಮೀಣ ಕಾಲೇಜಿನ ಕ್ರೀಡಾಂಗಣವನ್ನು ಸನ್ನದ್ಧಗೊಳಿಸಿ ಪ್ರೋತ್ಸಾಹ ನೀಡಿರುವುದು ಸಂತಸದಾಯಕ ವಿದ್ಯಮಾನ ಎಂದರು.

    ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಸುಡುವ ಬಿಸಿಲನ್ನು ಲೆಕ್ಕಿಸದೆ ಪಂದ್ಯಾಟಕ್ಕೆ ಆಗಮಿಸಿದ ಕ್ರೀಡಾಪಟುಗಳ ಉತ್ಸಾಹವನ್ನು ಕೊಂಡಾಡಿದರು.

    ಕಾಲೇಜಿನ ಪ್ರಭಾರ ಪ್ರಾಂಶುಪಾಲ ರವಿರಾಜ್, ದೈಹಿಕ ಶಿಕ್ಷಣ ನಿರ್ದೇಶಕರಾದ ಸೇಸಪ್ಪ ಗೌಡ, ದಯಾನಂದ್ ಉಪಸ್ಥಿತರಿದ್ದರು.
    ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಶ್ರಫ್ ಬಸ್ತಿಕಾರ್, ಡಾ.ರಾಜಾರಾಮ ಕೆ.ಬಿ., ಅರ್ತಿಲ ಕೃಷ್ಣ ರಾವ್, ಶಾಂಭವಿ ರೈ, ಪಾಲಕರ ಸಂಘದ ಅಧ್ಯಕ್ಷೆ ಸವಿತಾ ಹರೀಶ್, ಕಾಲೇಜಿನ ಉಪನ್ಯಾಸಕರಾದ ನಂದೀಶ್ ವೈಡಿ, ಪ್ರೊ.ಹುಚ್ಚೇಗೌಡ, ದಶರಥ್, ಬಾಲಾಜಿ, ದೈಹಿಕ ಶಿಕ್ಷಣ ಶಿಕ್ಷಕ ವಿಜೇತ್ ಜೈನ್ ಮತ್ತಿತರರು ಭಾಗವಹಿಸಿದ್ದರು.

    ಅಂತಿಮ ಬಿಕಾಂ ವಿದ್ಯಾರ್ಥಿನಿ ಅನುಷಾ ನಿರೂಪಿಸಿ, ಪ್ರವೀಣ್ ಕೂಡಮರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts