More

    ತಬ್ಲಿಘಿಗಳನ್ನು ಭಯೋತ್ಪಾದಕರಂತೆ ಕಾಣಬೇಕು ಎಂದಿದ್ಯಾರು?

    ಪಟನಾ: ದೇಶಾದ್ಯಂತ ಕರೊನಾ ಸೋಂಕು ಹರಡುತ್ತಿರುವ ತಬ್ಲಿಘಿ ಜಮಾತ್​ ಸದಸ್ಯರನ್ನು ಭಯೋತ್ಪಾದಕರಂತೆ ಕಾಣಬೇಕು….
    ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದವರು ಬಿಹಾರ ಮುಜಫ್ಫರ್​ನಗರದ ಎರಡು ಬಾರಿಯ ಬಿಜೆಪಿ ಸಂಸದ ಅಜಯ್​ ನಿಷಾದ್​.

    ಜಮಾತ್​ನಲ್ಲಿ ಪಾಲ್ಗೊಂಡು ಸೋಂಕು ವ್ಯಾಪಿಸಲು ಕಾರಣವಾಗಿರುವ ಎಲ್ಲರನ್ನೂ ಭಯೋತ್ಪಾದಕರಂತೆ ಉಪಚರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಗೆ ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೇ ಕಾರಣರಾಗಿದ್ದಾರೆ ಎಂದು ಟೀಕಿಸಿದ್ದಾರೆ.

    ಇದನ್ನೂ ಓದಿ; ಭಾರತದ ವೈದ್ಯಕೀಯ ರಾಯಭಾರ, 90ಕ್ಕೂ ಅಧಿಕ ರಾಷ್ಟ್ರಗಳಿಗೆ ನೆರವು

    ಮದ್ರಸಾಗಳಲ್ಲಿ ಸೂಕ್ತ ಶಿಕ್ಷಣ ದೊರೆಯುತ್ತಿಲ್ಲ. ಈ ಕಾರಣಕ್ಕಾಗಿಯೇ ಯಾವುದರ ಅರಿವೂ ಇಲ್ಲದೇ ವೈರಸ್​ ಹರಡಲು ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾವುದೇ ಕರೊನಾ ಸೋಂಕಿತರಿಲ್ಲದೇ, ಹಸಿರು ವಲಯದಲ್ಲಿದ್ದ ಮುಜಫ್ಫರ್​ನಗರ ಕ್ಷೇತ್ರದಲ್ಲಿ ಒಂದೊಂದಾಗಿ ಪ್ರಕರಣಗಳು ಕಾಣಿಸಿಕೊಳ್ಳತೊಡಗಿವೆ. ಈ ಕಾರಣದಿಂದಾಗಿ ಅಜಯ್​ ನಿಶಾದ್​ ತಬ್ಲಿಘಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಇದನ್ನೂ ಓದಿ; ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..! 

    ಮದ್ರಸಾಗಳಲ್ಲಿ ಪಂಕ್ಚರ್​ ಹಾಕುವುದನ್ನಷ್ಟೇ ಅವರಿಗೆ ಹೇಳಿಕೊಡಲಾಗುತ್ತದೆ ಎಂದು ಟೀಕಿಸಿರುವ ನಿಷಾದ್​, ಮುಗ್ಧ ಮಕ್ಕಳಿಗೆ ಮೂಲಭೂತವಾದವನ್ನಷ್ಟೇ ಬೋಧಿಸಲಾಗುತ್ತದೆ. ಅವರಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತಿಲ್ಲ. ಜಮಾತ್​ನಲ್ಲಿ ಪಾಲ್ಗೊಂಡವರು ದೇಶದ ಸಂಕಷ್ಟದ ಸ್ಥಿತಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಅಜಯ್​ ನಿಷಾದ್​ ಎರಡನೇ ಬಾರಿ ಬಜೆಪಿ ಲೋಕಸಭಾ ಸದಸ್ಯರಾಗಿದ್ದು, ಕೇಂದ್ರದ ಮಾಜಿ ಸಚಿವರಾಗಿದ್ದ ಜಯ್​ ನಾರಾಯಣ್​ ಪ್ರಸಾದ್​ ಅವರ ಪುತ್ರ.

    ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್​ಗಳಿಂದ ಕನ್ನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts