ಪಟನಾ: ದೇಶಾದ್ಯಂತ ಕರೊನಾ ಸೋಂಕು ಹರಡುತ್ತಿರುವ ತಬ್ಲಿಘಿ ಜಮಾತ್ ಸದಸ್ಯರನ್ನು ಭಯೋತ್ಪಾದಕರಂತೆ ಕಾಣಬೇಕು….
ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದವರು ಬಿಹಾರ ಮುಜಫ್ಫರ್ನಗರದ ಎರಡು ಬಾರಿಯ ಬಿಜೆಪಿ ಸಂಸದ ಅಜಯ್ ನಿಷಾದ್.
ಜಮಾತ್ನಲ್ಲಿ ಪಾಲ್ಗೊಂಡು ಸೋಂಕು ವ್ಯಾಪಿಸಲು ಕಾರಣವಾಗಿರುವ ಎಲ್ಲರನ್ನೂ ಭಯೋತ್ಪಾದಕರಂತೆ ಉಪಚರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಗೆ ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೇ ಕಾರಣರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ; ಭಾರತದ ವೈದ್ಯಕೀಯ ರಾಯಭಾರ, 90ಕ್ಕೂ ಅಧಿಕ ರಾಷ್ಟ್ರಗಳಿಗೆ ನೆರವು
ಮದ್ರಸಾಗಳಲ್ಲಿ ಸೂಕ್ತ ಶಿಕ್ಷಣ ದೊರೆಯುತ್ತಿಲ್ಲ. ಈ ಕಾರಣಕ್ಕಾಗಿಯೇ ಯಾವುದರ ಅರಿವೂ ಇಲ್ಲದೇ ವೈರಸ್ ಹರಡಲು ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕರೊನಾ ಸೋಂಕಿತರಿಲ್ಲದೇ, ಹಸಿರು ವಲಯದಲ್ಲಿದ್ದ ಮುಜಫ್ಫರ್ನಗರ ಕ್ಷೇತ್ರದಲ್ಲಿ ಒಂದೊಂದಾಗಿ ಪ್ರಕರಣಗಳು ಕಾಣಿಸಿಕೊಳ್ಳತೊಡಗಿವೆ. ಈ ಕಾರಣದಿಂದಾಗಿ ಅಜಯ್ ನಿಶಾದ್ ತಬ್ಲಿಘಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ; ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..!
ಮದ್ರಸಾಗಳಲ್ಲಿ ಪಂಕ್ಚರ್ ಹಾಕುವುದನ್ನಷ್ಟೇ ಅವರಿಗೆ ಹೇಳಿಕೊಡಲಾಗುತ್ತದೆ ಎಂದು ಟೀಕಿಸಿರುವ ನಿಷಾದ್, ಮುಗ್ಧ ಮಕ್ಕಳಿಗೆ ಮೂಲಭೂತವಾದವನ್ನಷ್ಟೇ ಬೋಧಿಸಲಾಗುತ್ತದೆ. ಅವರಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತಿಲ್ಲ. ಜಮಾತ್ನಲ್ಲಿ ಪಾಲ್ಗೊಂಡವರು ದೇಶದ ಸಂಕಷ್ಟದ ಸ್ಥಿತಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಜಯ್ ನಿಷಾದ್ ಎರಡನೇ ಬಾರಿ ಬಜೆಪಿ ಲೋಕಸಭಾ ಸದಸ್ಯರಾಗಿದ್ದು, ಕೇಂದ್ರದ ಮಾಜಿ ಸಚಿವರಾಗಿದ್ದ ಜಯ್ ನಾರಾಯಣ್ ಪ್ರಸಾದ್ ಅವರ ಪುತ್ರ.