More

    ಕರೊನಾ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಮುರಿದ ಸ್ವಾಬ್​ ಸ್ಟಿಕ್! ಇದು ಬಹಳ ನೋವಿನ ಕಥೆ

    ಕರೀಂನಗರ : ಕೋವಿಡ್​ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಹಾಕಿದ ಸ್ವಾಬ್​ ಸ್ಟಿಕ್​ ಮುರಿದು ಸಿಕ್ಕಿಹಾಕಿಕೊಂಡು ಹಿಂಸೆ ನೀಡಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿಯವರಿಗೆ ಕೋವಿಡ್​ ಪರೀಕ್ಷೆ ಆಯೋಜಿಸಿ ಮೊದಲು ತಾವೇ ಪರೀಕ್ಷೆ ಮಾಡಿಸಿಕೊಂಡು ಮಾದರಿಯಾಗಲು ಹೊರಟ ಸರ್​ಪಂಚ್ ಒಬ್ಬರು, ಹೀಗೆ ನರಕಯಾತನೆ ಅನುಭವಿಸಿದ್ದಾರೆ.

    ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದಲ್ಲಿರುವ ವೆಂಕಟರೋಪಲ್ಲಿ ಪಂಚಾಯಿತಿಯ ಅಧ್ಯಕ್ಷ ಜುವಾಜಿ ಶೇಖರ್​ ಅವರು, ಶುಕ್ತವಾರದಂದು ಹಳ್ಳಿಯಲ್ಲಿ ಕರೊನಾ ರಾಪಿಡ್​ ಆ್ಯಂಟಿಜನ್ ಟೆಸ್ಟ್​ ಶಿಬಿರವನ್ನು ಆಯೋಜಿಸಿದ್ದರು. ಸ್ಥಳೀಯ ಗೋಪಾಲ್​ರಾವ್​ಪೇಟ್​ನ ಪ್ರಾಥಮಿಕ ಆರೋಗ್ಯ ಕೇಂದ್ರದವರು ಇದನ್ನು ವ್ಯವಸ್ಥೆ ಮಾಡಿದ್ದರು.

    ಇದನ್ನೂ ಓದಿ: ಹೆಂಡತಿ ಇಲ್ಲದ ಸಮಯದಲ್ಲಿ ಮಗಳನ್ನು ರೇಪ್ ಮಾಡಿ ಗರ್ಭಿಣಿ ಮಾಡಿದ… ಆಸ್ಪತ್ರೆಯಲ್ಲಿ ಬಯಲಾಯಿತು ರಹಸ್ಯ!

    ಕೇಂದ್ರದ ಸಿಬ್ಬಂದಿ ಶೇಖರ್​ ಅವರ ಮೂಗಿಗೆ ಸ್ವಾಬ್ ಸ್ಟಿಕ್​ ಹಾಕಿದಾಗ ಅದು ಮೂಗಿನೊಳಗೇ ಮುರಿದುಹೋಯಿತು. ತದನಂತರ ನರ್ಸ್​ ಮತ್ತು ವೈದ್ಯರು ಏನೂ ಮಾಡಲು ಸಾಧ್ಯವಾಗದಾಗ ಅವರನ್ನು ಕರೀಂನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಮೂಗಿನಿಂದ ಜಾರಿ ಗಂಟಲಲ್ಲಿ ಸಿಲುಕಿಕೊಂಡಿದ್ದ ಆ ಕಡ್ಡಿಯನ್ನು ಅಲ್ಲಿನ ವೈದ್ಯರು ಎಂಡೋಸ್ಕೋಪಿ ಮಾಡಿ ತೆಗೆದರು ಎನ್ನಲಾಗಿದೆ.

    ಅಷ್ಟೂ ಹೊತ್ತು ಭಾರೀ ನೋವು ಅನುಭವಿಸಿದ ಶೇಖರ್​ ಅವರು, ಚೇತರಿಸಿಕೊಂಡ ಮೇಲೆ, ಗ್ರಾಮದ ಕೇಂದ್ರದಲ್ಲಿರುವ ವೈದ್ಯಕೀಯ ಸಿಬ್ಬಂದಿ ಅಗತ್ಯ ಕೌಶಲ್ಯ ಮತ್ತು ತರಬೇತಿ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಮಗಳಿಗೆ ಹೇರ್​ಕಟ್​ ಮಾಡಿದ ಮಾಜಿ ಮಿಸ್​ ಯೂನಿವರ್ಸ್​!

    ಕರೊನಾ ಔಷಧಿ, ಅಗತ್ಯವಸ್ತುಗಳ ಮೇಲೆ ಜಿಎಸ್​ಟಿ ಕಡಿತ; ಯಾವುದಕ್ಕೆ ಎಷ್ಟೆಷ್ಟು ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts