ಬಾಲಿವುಡ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಪೊಲೀಸ್ ವರದಿ ಪ್ರಕಾರ ಆತ್ಮಹತ್ಯೆ ಎಂದು ಸಾಬೀತಾದರೂ, ಆ ಆತ್ಮಹತ್ಯೆಗೆ ಕಾರಣವಾಗಿದ್ದೇನು ಎಂಬುದಕ್ಕೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಮತ್ತೆ ಕೆಲವರು ಬಾಲಿವುಡ್ನಲ್ಲಿನ ವ್ಯವಸ್ಥೆಯೇ ಯುವ ಪ್ರತಿಭೆಗಳಿಗೆ ಮಗ್ಗುಲು ಮುಳ್ಳಾಗಿದೆ ಎಂದೂ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಬುಲ್ಬುಲ್ ಸಿನಿಮಾ ವಿಮರ್ಶೆ ಬರೆದ ವಿರಾಟ್ ಕೊಹ್ಲಿ!
‘ಸುಶಾಂತ್ ಆತ್ಮಹತ್ಯೆಗೂ ಮುನ್ನ ಪಾರ್ಟಿ ಮಾಡಿದ್ದ. ಅಂಥ ವ್ಯಕ್ತಿ ಒಮ್ಮಿಂದೊಮ್ಮೆ ಆತ್ಮಹತ್ಯೆ ಅನ್ನೋ ನಿರ್ಧಾರ ಏತಕ್ಕೆ ಮಾಡುತ್ತಾನೆ’ ಎಂದು ಬಾಲಿವುಡ್ನ ಹಿರಿಯ ನಟ ಶೇಖರ್ ಸುಮನ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ‘ಸುಶಾಂತ್ ಆತ್ಮಹತ್ಯೆ ಹಿಂದೆ, ಬಾಲಿವುಡ್ನ ಬಹುದೊಡ್ಡ ಮಾಫಿಯಾ ಕೈವಾಡವಿದೆ. ಆತನ ಸಾವಿಗೆ ಕೆಲವೊಂದಿಷ್ಟು ಮಂದಿ ಫೇಕ್ ಕಣ್ಣೀರು ಸುರಿಸುತ್ತಿದ್ದಾರೆ. ಆ ಒಂದು ಸಮೂಹ, ಪ್ರತಿಭಾನ್ವಿತ ಯುವ ಕಲಾವಿದರನ್ನು ತುಳಿಯುವ ಕೆಲಸ ಮಾಡುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ: ಸಂತ್ರಸ್ತರಿಗಾಗಿ ಮಿಡಿದ ಈ ನಟರಿಗೆ ‘ಭಾರತ ರತ್ನ’ ಸಿಗಲಿ: ಅಭಿಯಾನ ಶುರು
ಇನ್ನು ಈಗಾಗಲೇ ಆತ್ಮಹತ್ಯೆ ಎಂದು ವರದಿ ಬಂದರೂ, ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಶೇಖರ್, ‘ಸುಶಾಂತ್ ಸಿಂಗ್ ನೇಣಿಗೆ ಬಳಸಿದ ಬಟ್ಟೆ, ಕುತ್ತಿಗೆ ಮೇಲಿನ ಮಾರ್ಕ್ ಬೇರೆ ಏನೋ ನಡೆದಿದೆ ಎಂದು ತೋರಿಸುತ್ತದೆ. ನಾನು ಆ ವಿಚಾರದಲ್ಲಿ ಪರಿಣಿತನಲ್ಲದಿದ್ದರೂ, ಈ ಪ್ರಕರಣವನ್ನು ಸಿಬಿಐನವರು ವಹಿಸಿಕೊಳ್ಳಬೇಕೆಂದು ನಾನು ಕೋರಿಕೊಳ್ಳುತ್ತೇನೆ’ ಎಂದು ಸಹನಟನ ಬಗ್ಗೆ ಮೌನಮುರಿದಿದ್ದಾರೆ ಶೇಖರ್.
ಇದನ್ನೂ ಓದಿ: ನಟಿ ಮಹಿರಾ ಜತೆ ಶೋಯಿಬ್ ಮಲಿಕ್ ಫ್ಲರ್ಟ್, ಸಾನಿಯಾ ಗರಂ!
ಇನ್ನು ಸುಶಾಂತ್ ಕುಟುಂಬದ ಆಪ್ತರೂ ಸಹ ಸಾವಿನ ಬಗ್ಗೆ ಬೇರೆ ಬೇರೆ ಮಾಹಿತಿ ನೀಡುತ್ತಿದ್ದಾರೆ. ‘ಸುಶಾಂತ್ ಸಿನಿಮಾ ಕರಿಯರ್ ಹಾಳು ಮಾಡಬೇಕೆಂಬ ಉದ್ದೇಶದಿಂದ ಅವರಿಗೆ ಪರೋಕ್ಷವಾಗಿ ಕಿರುಕುಳ ನೀಡಲಾಗುತ್ತಿತ್ತು. ಅವರ ಇಮೇಜ್ಗೆ ದಕ್ಕೆ ತರುವ ಕೆಲಸ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ ಅವರ ಬೆಳವಣಿಗೆ ಸಹಿಸಲಾಗದೇ, ವೃತ್ತಿಜೀವನ ಹಾಳು ಮಾಡಲು ಸಂಚು ರೂಪಿಸಲಾಗಿತ್ತು ಎಂದು ಸುಶಾಂತ್ ಆಪ್ತರ ಮಾತುಗಳನ್ನು ತನಿಖಾ ತಂಡ ಮಾಹಿತಿ ಕಲೆಹಾಕಿದೆ. (ಏಜೆನ್ಸೀಸ್)
ಸುಶಾಂತ್ ಕರಿಯರ್ಗೆ ಮಸಿ ಬಳಿಯುವ ಹುನ್ನಾರ!; ತನಿಖೆಯಲ್ಲಿ ಬಯಲಾಯ್ತು ಅಸಲಿ ಕಥೆ