More

    ಸುಶಾಂತ್​ ಕರಿಯರ್​ಗೆ ಮಸಿ ಬಳಿಯುವ ಹುನ್ನಾರ!; ತನಿಖೆಯಲ್ಲಿ ಬಯಲಾಯ್ತು ಅಸಲಿ ಕಥೆ

    ಸುಶಾಂತ್​ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಪೊಲೀಸ್​ ವರದಿ ಪ್ರಕಾರ ಆತ್ಮಹತ್ಯೆ ಎಂದು ಸಾಬೀತಾದರೂ, ಆ ಆತ್ಮಹತ್ಯೆಗೆ ಕಾರಣವಾಗಿದ್ದೇನು ಎಂಬುದಕ್ಕೆ ಪೊಲೀಸ್​ ಇಲಾಖೆ ತನಿಖೆ ನಡೆಸುತ್ತಿದೆ. ಇದೀಗ ಆ ವರದಿಯ ಅನುಸಾರ ಒಂದಷ್ಟು ಬಹುಮುಖ್ಯ ಮಾಹಿತಿಯನ್ನು ತನಿಖಾ ತಂಡ ಹೊರಹಾಕಿದೆ
    ಸುಶಾಂತ್​ ಸಿನಿಮಾ ಕರಿಯರ್​ ಹಾಳು ಮಾಡಬೇಕೆಂಬ ಉದ್ದೇಶದಿಂದ ಅವರಿಗೆ ಪರೋಕ್ಷವಾಗಿ ಕಿರುಕುಳ ನೀಡಲಾಗುತ್ತಿತ್ತು. ಅವರ ಇಮೇಜ್​ಗೆ ದಕ್ಕೆ ತರುವ ಕೆಲಸ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ ಅವರ ಬೆಳವಣಿಗೆ ಸಹಿಸಲಾಗದೇ, ವೃತ್ತಿಜೀವನ ಹಾಳು ಮಾಡಲು ಸಂಚು ರೂಪಿಸಲಾಗಿತ್ತು ಎಂದು ತನಿಖಾ ತಂಡ ಮಾಹಿತಿ ಸಂಗ್ರಹಿಸಿದೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

    ಸುಶಾಂತ್​ ಆತ್ಮಹತ್ಯೆ ಹಿನ್ನೆಲೆಯಲ್ಲಿ ಈವರೆಗೂ 27ಕ್ಕೂ ಅಧಿಕ ಮಂದಿಯನ್ನು ಪೊಲೀಸ್​ ತಂಡ ವಿಚಾರಣೆ ಮಾಡಿದೆ. ಅದರಲ್ಲಿ ಸ್ನೇಹಿತರು, ಕುಟುಂಬಸ್ಥರು ಮತ್ತು ಸಿನಿಮಾಮಂದಿಯೂ ಒಳಗೊಂಡಿದ್ದಾರೆ. ‘ಕಳೆದ ಕೆಲ ತಿಂಗಳಿಂದ ಸುಶಾಂತ್​ ತೀವ್ರ ಒತ್ತಡಕ್ಕೆ ಒಳಗಾಗಿದ್ದ. ಆತನ ಮೇಲೆ ಯಾರೋ ಒತ್ತಡ ಹೇರಿದಂತೆ ಕಾಣುತ್ತಿತ್ತು. ಬೇಕು ಅಂತಲೇ ಅವನನ್ನೇ ಟಾರ್ಗೆಟ್​ ಮಾಡಿ, ಅವನ ಬೆಳವಣಿಗೆಯನ್ನು ಹಾಳು ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿರಬೇಕು ಎಂದು ಸುಶಾಂತ್​ ಆಪ್ತ ಸ್ನೇಹಿತರು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರಂತೆ.

    ಇದನ್ನೂ ಓದಿ: ಸುಶಾಂತ್​, ಟಿಕ್​ಟಾಕ್​ ಸ್ಟಾರ್​ ಸಿಯಾ ಆತ್ಮಹತ್ಯೆಗೂ ಸಂಬಂಧವಿದೆಯಾ? ಪೊಲೀಸರಿಗೇಕೆ ಸಂಶಯ?

    ಅಷ್ಟೇ ಅಲ್ಲ ಸುಶಾಂತ್​ ವಿರುದ್ಧ ಒಂದಷ್ಟು ನೆಗೆಟಿವ್​ ಸುದ್ದಿಗಳು ಹೊರಬಿದ್ದಿದ್ದು, ಅದರಿಂದಲೂ ತೀರ ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಮೊನ್ನೆಯಷ್ಟೇ ಯಶ್​ ರಾಜ್​ ಫಿಲಂಸ್​ನ ಕಾಸ್ಟಿಂಗ್​ ಡೈರೆಕ್ಟರ್ ಶಾನೂ ಶರ್ಮಾ ಅವರನ್ನು ವಿಚಾರಣೆ ಮಾಡಲಾಗಿದ್ದು, ಅವರಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ. (ಏಜೆನ್ಸೀಸ್​)

    ಕಲರ್​ನಲ್ಲಿ ಮಂತ್ರಾಲಯ ಮಹಾತ್ಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts