ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿವೆ. ಸಿಬಿಐ, ಇ.ಡಿ. ಮತ್ತು ಎನ್ಸಿಬಿಗಳು ಕೇಸ್ ತನಿಖೆ ನಡೆಸುತ್ತಿವೆ. ಸುಶಾಂತ್ ಸಿಂಗ್ ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದೇ ಹೇಳಲಾಗಿತ್ತು.
ಆದರೆ ಇದೀಗ ಏಮ್ಸ್ ವೈದ್ಯ ಡಾ. ಸುಧೀರ್ ಗುಪ್ತಾ ಅವರು ಸುಶಾಂತ್ರನ್ನು ಯಾರೂ ಹತ್ಯೆ ಮಾಡಿಲ್ಲ. ಅವರದ್ದು ಆತ್ಮಹತ್ಯೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸುಶಾಂತ್ ಸಿಂಗ್ ಅವರ ಒಳ ಅಂಗಗಳ ಪೋಸ್ಟ್ ಮಾರ್ಟಮ್ ರಿಪೋರ್ಟ್ನಿಂದ ಅವರದ್ದು ಆತ್ಮಹತ್ಯೆ ಎಂಬುದು ಸಾಬೀತಾಗಿದೆ. ಕೊಲೆ ಅಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಕೊಡಲು ಮುಂದಾದ ಗಂಡನ ಕೊಲ್ಲಲು ಪ್ರಿಯಕರನಿಗೆ ಸುಪಾರಿ: ಇದು ಖ್ಯಾತ ಕ್ರೀಡಾಪಟುವಿನ ದುರಂತ ಕತೆ!
ಏಮ್ಸ್ ವೈದ್ಯರ ತಂಡ, ಸುಶಾಂತ್ ಸಿಂಗ್ ಪೋಸ್ಟ್ ಮಾರ್ಟಮ್ ಮತ್ತು ಅವರ ಬಳಿ ಲಭ್ಯವಿದ್ದ ಶೇ.20ರಷ್ಟು ಒಳಅಂಗಗಳ ವರದಿಗಳನ್ನು ಮರು ಮೌಲ್ಯಮಾಪನ ಮಾಡುತ್ತಿತ್ತು. ವಿಧಿವಿಜ್ಞಾನ ಸಂಸ್ಥೆಗಳು ಲ್ಯಾಪ್ಟಾಪ್, ಎರಡು ಹಾರ್ಡ್ ಡಿಸ್ಕ್, ಕ್ಯಾನನ್ ಕ್ಯಾಮರಾ ಮತ್ತು ಎರಡು ಮೊಬೈಲ್ಗಳನ್ನು ಪರೀಕ್ಷೆ ಮಾಡಿವೆ.
ಏಮ್ಸ್ ವೈದ್ಯರು ಸುಶಾಂತ್ ಸಿಂಗ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ. ಇದು ಕೊಲೆ ಎನ್ನಲು ಕಾರಣವಿಲ್ಲ ಎಂದು ಉಲ್ಲೇಖವಾದ ವರದಿಯನ್ನು ಸೆಪ್ಟೆಂಬರ್ 29ರಂದೇ ಸಿಬಿಐಗೆ ಸಲ್ಲಿಸಿವೆ. ಇದೀಗ ವೈದ್ಯ ಡಾ. ಸುಧೀರ್ ಗುಪ್ತಾ ಅಧಿಕೃತವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
VIDEO| ವಿಶ್ವದಲ್ಲೇ ಅತಿ ಉದ್ದದ ಅಟಲ್ ಸುರಂಗ ಮಾರ್ಗದ ವಿಶೇಷತೆಗಳು ಹೀಗಿವೆ..!