ನವದೆಹಲಿ: ಲೋಕಸಭಾ ಚುನಾವಣೆ 2024ರ ಪ್ರಚಾರಕ್ಕಾಗಿ ಸದ್ಯ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಜಾಮೀನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಇದೀಗ ಸುಪ್ರೀಂ ಕೋರ್ಟ್ ಆಲಿಸುತ್ತಿದ್ದು, ಶೀಘ್ರವೇ ತೀರ್ಪನ್ನು ನೀಡಲು ಸಜ್ಜಾಗಿದೆ. ಪ್ರಸ್ತುತ ಅವರು ಸಿಎಂ ಆಗಿರುವ ಕಾರಣ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು ನೀಡಬೇಕಾಗುತ್ತದೆ. ಚುನಾವಣೆ ಸಮೀಪದಲ್ಲಿರುವ ಕಾರಣ ಅವರು ಸಹ ಪ್ರಚಾರ ಕೈಗೊಳ್ಳಬೇಕಿದೆ ಎಂದು ಇಡಿಗೆ ಸುಪ್ರೀಂ ತಿಳಿಸಿದೆ ಎಂದು ವರದಿಯಾಗಿದೆ.
ಚುನಾವಣಾ ಪ್ರಚಾರಕ್ಕಾಗಿ ದೆಹಲಿ ಸಿಎಂ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ಆಲಿಸುವ ಮುನ್ನವೇ ಇಡಿಗೆ ಮಾಹಿತಿ ನೀಡಿದ್ದ ಸುಪ್ರೀಂ, ಎಎಪಿ ಮುಖ್ಯಸ್ಥರಿಗೆ ನಾವು ಜಾಮೀನು ನೀಡಬಹುದು ಅಥವಾ ನೀಡದೇ ಇರಬಹುದು. ಆದರೆ ನಾವು ನಿಮಗೆ ಮುಕ್ತವಾಗಿರಬೇಕು. ಹಾಗಾಗಿ ಎರಡೂ ಕಡೆಯವರು ಹಾಜರಾಗಿರಬೇಕು. ಇದರಲ್ಲಿ ಆಶ್ಚರ್ಯಪಡಬಾರದು. ಮಧ್ಯಂತರ ಜಾಮೀನನ್ನು ಪರಿಗಣಿಸಲು ನ್ಯಾಯಾಲಯ ಮುಕ್ತವಾಗಿದೆ. ವಿಚಾರಣೆಗೆ ನೀವು ಸಹ ಸಿದ್ಧರಾಗಿರಿ ಎಂದು ಕಳೆದ ವಾರವೇ ತಿಳಿಸಿತ್ತು ಎಂದು ವರದಿಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ……….
ಈತನ ಮುಂದೆ ವಿರಾಟ್, ರೋಹಿತ್ ಏನೇನೂ ಅಲ್ಲ! ಮಾಜಿ ಸ್ಟಾರ್ ಕ್ರಿಕೆಟಿಗನ ಸ್ಪೋಟಕ ಹೇಳಿಕೆ ವೈರಲ್