More

    ಪ್ರಣಬ್​ ಮುಖರ್ಜಿ ನಿಧನಕ್ಕೆ ಕ್ರೀಡಾ ವಲಯದ ಕಂಬನಿ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಭಾರತೀಯ ಕ್ರೀಡಾ ವಲಯ ಕಂಬನಿ ಮಿಡಿದಿದೆ. ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಅನಿಲ್​ ಕುಂಬ್ಳೆ, ವಿವಿಎಸ್​ ಲಕ್ಷ್ಮಣ್​, ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ, ಒಲಿಂಪಿಕ್ಸ್​ ಪದಕ ವಿಜೇತರಾದ ಸುಶೀಲ್​ ಕುಮಾರ್​, ಯೋಗೇಶ್ವರ್​ ದತ್, ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಸಹಿತ ಕ್ರೀಡಾ ತಾರೆಯರು ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

    ‘ಪ್ರಣಬ್​ ಮುಖರ್ಜಿ ಅವರ ಆತ್ಮಕ್ಕೆ ಸದ್ಗತಿ ಸಿಗಲಿ’ ಎಂದು ಅನಿಲ್​ ಕುಂಬ್ಳೆ ಮತ್ತು ವಿವಿಎಸ್​ ಲಕ್ಷ್ಮಣ್​, ಐಪಿಎಲ್​ಗಾಗಿ ಯುಎಇಯಲ್ಲಿರುವ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಅವರು ಟ್ವೀಟಿಸಿದ್ದಾರೆ. ಪ್ರಣಬ್​ ಮುಖರ್ಜಿ ಅವರು ಎಲ್ಲರಿಂದಲೂ ಗೌರವ ಮತ್ತು ಪ್ರೀತಿ ಪಡೆಯುತ್ತಿದ್ದಂಥ ನಾಯಕರಾಗಿದ್ದರು. ಅವರು ನೀಡಿರುವ ಕೊಡುಗೆಯನ್ನು ದೇಶ ಎಂದೆಂದಿಗೂ ನೆನಪಿಟ್ಟುಕೊಳ್ಳಲಿದೆ ಎಂದು ಸಂಸದರೂ ಆಗಿರುವ ಮಾಜಿ ಬ್ಯಾಟ್ಸ್​ಮನ್​ ಗೌತಮ್​ ಗಂಭೀರ್​ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್​ ​ಮುಖರ್ಜಿ ನಿಧನ

    ಪ್ರಣಬ್​ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು ಎಂದು ಸೈನಾ ನೆಹ್ವಾಲ್​ ಬರೆದುಕೊಂಡಿದ್ದಾರೆ. ಹಾಕಿ ಆಟಗಾರ ಯುವರಾಜ್​ ವಾಲ್ಮೀಕಿ, ಕುಸ್ತಿಪಟು ಗೀತಾ ಪೋಗಟ್​, ಕ್ರಿಕೆಟಿಗರಾದ ಇಶಾಂತ್​ ಶರ್ಮ, ಅಜಿಂಕ್ಯ ರಹಾನೆ, ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ಮತ್ತಿತರರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts