More

    ಆದಾಯ ಡಬಲ್​ ಮಾಡ್ತೀವಿ ಅಂದ್ರು, ಮಾಡಿದ್ದೇ ಬೇರೆ: ಬಿಜೆಪಿಗೆ ವಿಪಕ್ಷ ನಾಯಕನ​ ಟಾಂಗ್​

    ಲಖನೌ: ಭಾರತೀಯ ಜನತಾ ಪಕ್ಷ(ಬಿಜೆಪಿ) ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಬದಲಿಗೆ ಬೆಲೆ ಏರಿಕೆಯನ್ನು ದುಪ್ಪಟ್ಟುಗೊಳಿಸಿದೆ ಎಂದು ಸಮಾಜವಾದಿ ಪಾರ್ಟಿ(ಎಸ್​​ಪಿ) ಮುಖ್ಯಸ್ಥ ಅಖಿಲೇಶ್​ ಯಾದವ್​ ವ್ಯಂಗ್ಯ ಮಾಡಿದ್ದಾರೆ.

    ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದ ಲಖನೌನಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, “ಬಿಜೆಪಿಯ ಕಮಲವು ಸುಳ್ಳು ಮತ್ತು ಮೋಸದ ಕೊಚ್ಚೆಯಲ್ಲಿ ಬೆಳೆಯುತ್ತದೆ” ಎಂದು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ‘ರೆಬೆಲ್’ ನಡೆಯಿಂದಾಗಿ ಬಿಜೆಪಿಯಲ್ಲಿ ‘ಏಕಾಂಗಿ’ಯಾದ ಮಾಜಿ ಶಾಸಕ ಸುರೇಶ್​ಗೌಡ

    ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯನ್ನು ಮರೆತುಬಿಟ್ಟಿದೆ ಎಂದ ಯಾದವ್​, ರೈತರಿಗೆ ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಲಖೀಂಪುರ್​ನ ಮಂಡಿಯಲ್ಲಿ ಒಬ್ಬ ರೈತ ತನ್ನ ಭತ್ತದ ಬೆಳೆಯನ್ನು ಸುಟ್ಟುಹಾಕಿದ. ತಮಗೆ ಸಿಗಬೇಕಾದ ಬೆಲೆ ಸಿಗುತ್ತದಾ ಎಂದು ರೈತರು ತಿಳಿಯಬಯಸಿದ್ದಾರೆ. ಆದರೆ ಅವರಿಗೆ ಉತ್ತರ ಕೊಡುವವರು ಯಾರೂ ಇಲ್ಲ” ಎಂದರು.

    ಮುಂಬೈ ಡ್ರಗ್ಸ್​ ಕೇಸ್​: ‘ನನ್ನನ್ನು ಟಾರ್ಗೆಟ್​ ಮಾಡ್ತಿದಾರೆ, ಬೆದರಿಕೆ ಹಾಕ್ತಿದಾರೆ’ ಎಂದ ಎನ್​ಸಿಬಿ ಅಧಿಕಾರಿ

    ಪ್ರತಿ ಬಾರಿ ವಿಮಾನ ನಿಲ್ದಾಣದಲ್ಲಿ ಹಿಂಸೆ! ಪ್ರಧಾನಿ ಮೋದಿಗೆ ಹಿರಿಯ ನಟಿಯ ದೂರು

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts