More

    VIDEO: ಸೌರವ್​ ಗಂಗೂಲಿ ನಾಯಕತ್ವದಡಿ ಕೆಕೆಆರ್​ ಕಳಪೆ ನಿರ್ವಹಣೆ ನೀಡಲು ಕಾರಣ ಗೊತ್ತೆ..!

    ಕೋಲ್ಕತ: ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ, ತಮ್ಮ ನಾಯಕತ್ವದ ಮೂಲಕ ರಾಷ್ಟ್ರೀಯ ತಂಡದಲ್ಲಿ ಹೊಸ ಕ್ರಾಂತಿ ಮೂಡಿಸಿದ ಆಟಗಾರ. ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ ಗಂಗೂಲಿ, ನಾಯಕತ್ವದ ವಿಷಯದಲ್ಲಿ ಇತರರಿಗೆ ಸ್ಫೂರ್ತಿಯಾಗಿದ್ದರು. ಆದರೆ, ಗಂಗೂಲಿ ನಾಯಕತ್ವದ ಜಾದೂ ಐಪಿಎಲ್​ನಲ್ಲಿ ನಡೆಯಲಿಲ್ಲ. ಆರಂಭಿಕ ಮೂರು ಆವೃತ್ತಿಗಳಲ್ಲಿ ತವರು ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡ ಮುನ್ನಡೆಸಿದ್ದ ಗಂಗೂಲಿಗೆ ಯಶಸ್ಸು ಅನ್ನೋದು ಸಿಗಲೇ ಇಲ್ಲ. ಬಾಲಿವುಡ್​ ನಟ ಶಾರೂಕ್​ ಖಾನ್​ ಒಡೆತನ ಕೆಕೆಆರ್​ ಗಂಗೂಲಿ ನಾಯಕತ್ವದಲ್ಲಿ ವೈಫಲ್ಯ ಅನುಭವಿಸಿದ್ದೇ ಜಾಸ್ತಿ. ತಂಡದ ವೈಫಲ್ಯಕ್ಕೆ ದಾದಾ ಇದೀಗ ಉತ್ತರ ನೀಡಿದ್ದಾರೆ.

    ಇದನ್ನೂ ಓದಿ: ಟಾಮ್ ಮೂಡಿ ಬೆಸ್ಟ್ ಟಿ20 ತಂಡಕ್ಕೆ ರೋಹಿತ್ ಶರ್ಮ ನಾಯಕ..!

    VIDEO: ಸೌರವ್​ ಗಂಗೂಲಿ ನಾಯಕತ್ವದಡಿ ಕೆಕೆಆರ್​ ಕಳಪೆ ನಿರ್ವಹಣೆ ನೀಡಲು ಕಾರಣ ಗೊತ್ತೆ..!ಐಪಿಎಲ್​ ಉದ್ಘಾಟನಾ ಆವೃತ್ತಿ 2008 ರಿಂದ 2010ರವರೆಗೂ ಗಂಗೂಲಿ ಕೆಕೆಆರ್​ ನಾಯಕರಾಗಿದ್ದರು. ತಂಡದ ವೈಫಲ್ಯದಿಂದ ಬೇಸತ್ತ ತಂಡದ ಮಾಲೀಕ ಶಾರೂಖ್​ ಖಾನ್​ ಸೌರವ್​ ಗಂಗೂಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದರು. ಜತೆಗೆ ತಂಡವನ್ನು ದಾದಾ ತೊರೆದರು. ಸ್ಥಳೀಯ ಯೂಟ್ಯೂಬ್​ ಚಾನೆಲ್​ಗೆ ಸಂದರ್ಶನ ನೀಡಿರುವ ಗಂಗೂಲಿ, 4ನೇ ಆವೃತ್ತಿಯ ವೇಳೆ ಗಂಭೀರ್​ ಸಂದರ್ಶನವೊಂದನ್ನು ನೋಡಿದ್ದೆ, ನನಗೆ ತಂಡದ ಸಂಪೂರ್ಣ ಜವಾಬ್ದಾರಿ ನೀಡುವುದಾಗಿ ಶಾರೂಖ್​ ಹೇಳಿದ್ದಾರೆ ಎಂದರು. ಇದೇ ಥರದ ಭರವಸೆಯನ್ನು 2008ರಲ್ಲೂ ನನಗೆ ನೀಡಲಾಗಿತ್ತು. ಆದರೆ, ಸಾಧ್ಯವಾಗಿಲ್ಲ. ಮುಂಬೈ, ಸಿಎಸ್​ಕೆ ತಂಡಗಳಲ್ಲಿ ಅಂಥ ವ್ಯವಸ್ಥೆ ಇಲ್ಲ. ತಂಡದ ಆಯ್ಕೆಯನ್ನು ನಾಯಕನಿಗೆ ವಹಿಸಲಾಗುತ್ತದೆ ಎಂದು ಗಂಗೂಲಿ ಶಾರೂಖ್​ ಮೇಲಿನ ಅಸಮಾಧಾನವನ್ನು ಹೊರಹಾಕಿದರು.

    ಇದನ್ನೂ ಓದಿ: ವಿಂಬಲ್ಡನ್​ ರದ್ದುಗೊಂಡರೂ ಟೆನಿಸ್​ ಆಟಗಾರರಿಗೆ ಸಿಗಲಿದೆ ಬಹುಮಾನ!

    2011ರಲ್ಲಿ ಸೌರವ್​ ಗಂಗೂಲಿ ಅವರನ್ನು ಕೈ ಬಿಟ್ಟು 11.04 ಕೋಟಿ ರೂಪಾಯಿಗೆ ಗೌತಮ್​ ಗಂಭೀರ್​ ಅವರನ್ನು ಕೊಂಡುಕೊಳ್ಳಲಾಯಿತು. ಬಳಿಕ ಮುಂದಿನ 7 ಆವೃತ್ತಿಗಳಿಗೆ ಗಂಭೀರ್​ ಕೆಕೆಆರ್​ ತಂಡ ಮುನ್ನಡೆಸಿದರು. 2011ರಲ್ಲಿ ಕೆಕೆಆರ್​ ವಿಫಲರಾದರೂ 2012 ಹಾಗೂ 2014ರಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿತು. 2018ರಲ್ಲಿ ಗಂಭೀರ್​ ಕೈಬಿಟ್ಟು 7.4 ಕೋಟಿ ರೂಪಾಯಿಗೆ ದಿನೇಶ್​ ಕಾರ್ತಿಕ್​ ಅವರನ್ನು ಕೊಂಡುಕೊಂಡು ನಾಯಕತ್ವ ನೀಡಲಾಗಿದೆ. ಗಂಗೂಲಿ ನಾಯಕತ್ವದಲ್ಲಿ ಕೆಕೆಆರ್​ 27 ಪಂದ್ಯಗಳಲ್ಲಿ 13ರಲ್ಲಿ ಗೆಲುವು ಸಾಧಿಸಿದರೆ, ಗಂಭೀರ್​ ನಾಯಕತ್ವದಲ್ಲಿ 69 ಗೆಲುವು ಕಂಡಿತ್ತು. ಇದೀಗ ದಿನೇಶ್​ ಕಾರ್ತಿಕ್​​ ನಾಯಕತ್ವದಲ್ಲಿ ಇದುವರೆಗೂ ಆಡಿರುವ 30 ಪಂದ್ಯಗಳಲ್ಲಿ 15ರಲ್ಲಿ ಜಯ ದಾಖಲಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts