ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿದೆ, ಈಗಲೂ ಆಗುತ್ತಲೇ ಇದೆ. ಅದರಲ್ಲೂ ಕಂಗನಾ ರಣಾವತ್ ಅಂತೂ ಈ ಬಗ್ಗೆ ಉಗ್ರ ಅಭಿಯಾನವನ್ನೇ ಪ್ರಾರಂಭಿಸಿಬಿಟ್ಟಿದ್ದಾರೆ. ಕಂಗನಾಗೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯದ ಕುರಿತು ನೆಟ್ಟಿಗರಿಂದ ಬೆಂಬಲ ಸಿಕ್ಕಿದ್ದು ಅವರೆಲ್ಲಾ ನೆಪೋಟಿಸಂ ವಿರುದ್ಧ ಹರಿಹಾಯ್ದಿದ್ದಾರೆ.
ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ಮಕ್ಕಳ ಜನ್ಮ ಜಾಲಾಡಿಬಿಟ್ಟಿದ್ದಾರೆ ನೆಟ್ಟಿಗರು. ಆಲಿಯಾ ಭಟ್, ಸೋನಂ ಕಪೂರ್, ಸೋನಾಕ್ಷಿ ಸಿನ್ಹಾ, ಟೈಗರ್ ಶ್ರಾಫ್ ಸೇರಿದಂತೆ ಹಲವು ಸ್ಟಾರ್ ಮಕ್ಕಳ ವಿರುದ್ಧ ತಿರುಗಿಬಿದ್ದಿರುವ ನೆಟ್ಟಿಗರು, ಅವಕಾಶ ಸಿಕ್ಕಾಗಲೆಲ್ಲಾ ಅವರನ್ನೆಲ್ಲಾ ಬಯ್ಯುತ್ತಲೇ ಇರುತ್ತಾರೆ.
ಇದನ್ನೂ ಓದಿ: ದರ್ಶನ್ ಜತೆ ತರುಣ್ ಸುಧೀರ್ ಮತ್ತೊಂದು ಸಿನಿಮಾ; ವರಮಹಾಲಕ್ಷ್ಮೀ ಹಬ್ಬದಂದೇ ನಡೆಯಿತು ಸ್ಕ್ರಿಪ್ಟ್ ಪೂಜೆ
ಬಾಲಿವುಡ್ಗೆ ಹೋಲಿಸಿದರೆ, ಈ ತರಹದ್ದೊಂದು ಚರ್ಚೆ ಬೇರೆ ಭಾಷೆಗಳಲ್ಲಿ ಇಲ್ಲ. ಆದರೂ, ಬೇರೆ ಭಾಷೆಗಳಲ್ಲಿನ ಸ್ಟಾರ್ ಮಕ್ಕಳು ಆಗಾಗ ಈ ಬಗ್ಗೆ ಪ್ರಶ್ನೆ ಎದುರಿಸುತ್ತಲೇ ಇರುತ್ತಾರೆ ಮತ್ತು ಸ್ವಜನಪಕ್ಷಪಾತದ ಕುರಿತಾಗಿ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಈಗ ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ಸಹ ಈ ವಿಷಯವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಒಂದು ವಿಷಯವನ್ನು ನಾನು ಒಪ್ಪಿಕೊಳ್ಳಲೇಬೇಕು. ಬೇರೆಯವರಿಗೆ ಹೋಲಿಸಿದರೆ, ನನಗೆ ಚಿತ್ರರಂಗಕ್ಕೆ ಬಹಳ ಸುಲಭವಾಗಿ ಎಂಟ್ರಿ ಸಿಕ್ಕಿತು. ಇದಕ್ಕೆ ನನ್ನ ಹಾಸನ್ ಎಂಬ ನನ್ನ ಸರ್ನೇಮ್ ಕಾರಣ ಇರಬಹುದು. ಚಿತ್ರರಂಗಕ್ಕೆ ಎಂಟ್ರಿ ಸುಲಭವಾದರೂ, ಆ ನಂತರ ಇಲ್ಲಿ ನಾವೇ ಹೋರಾಟ ಮಾಡಬೇಕು. ಆಗ ಯಾವುದೇ ಸರ್ನೇಮ್ ಸಹ ನಮ್ಮ ಸಹಾಯಕ್ಕೆ ಬರುವುದಿಲ್ಲ’ ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪ್ಲಾಸ್ಮಾ ದಾನಿಗಳಿಗೆ ವಿಜಯ್ ದೇವರಕೊಂಡ ಕಡೆಯಿಂದ ಸರ್ಪ್ರೈಸ್!
‘ನಾನು ಮೂಲತಃ ಸ್ಲೋ ಲರ್ನರ್. ಎಲ್ಲಾ ವಿಷಯಗಳನ್ನು ಬಹಳ ನಿಧಾನಕ್ಕೆ ಕಲಿಯುತ್ತೀನಿ. ಚಿತ್ರರಂಗವನ್ನು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದರೂ, ಇಲ್ಲಿಯ ರೀತಿ-ನೀತಿಗಳು ನನಗೆ ಬಹಳ ಹೊಸದಾಗಿದ್ದವು. ಹಾಗಾಗಿ ಎಂಟ್ರಿ ಈಸಿಯಾದರೂ, ಆ ನಂತರ ಸಾಕಷ್ಟು ಹೋರಾಟ ಮಾಡಬೇಕಾಯಿತು. ಹಾಗೆ ನೋಡಿದರೆ, ನನ್ನ ಪ್ರಯಾಣವೇನೂ ಅಷ್ಟು ಸುಲಭವಾಗಿರಲಿಲ್ಲ’ ಎಂದು ಶ್ರುತಿ ಅಭಿಪ್ರಾಯಪಟ್ಟಿದ್ದಾರೆ.
ಶ್ರುತಿ ಹಾಸನ್ ಅಭಿನಯದ ‘ಯಾರಾ’ ಎಂಬ ಹೊಸ ಚಿತ್ರ ಓಟಿಟಿಯಲ್ಲಿ ಬಿಡುಗಡೆತಾಗಿದ್ದು, ಈ ಚಿತ್ರದಲ್ಲಿ ಅಮಿತಾ ಸಾಧ್, ವಿದ್ಯುತ್ ಜಾಮ್ವಾಲ್ ಮುಂತಾದವರು ನಟಿಸಿದ್ದಾರೆ ಇನ್ನು. ರಾಷ್ಟ್ರ ಪ್ರಶಸ್ತಿ ವಿಜೇತ ತಿಗ್ಮಾನ್ಶು ದುಲಿಯಾ ನಿರ್ದೇಶನ ಮಾಡಿದ್ದಾರೆ.
ಜಗತ್ತಿನ ಬೆಸ್ಟ್ ಮುಖ್ಯಮಂತ್ರಿ … ಉದ್ಧವ್ ಠಾಕ್ರೆಗೆ ಟಾಂಗ್ ನೀಡಿದ ಟೀಮ್ ಕಂಗನಾ