More

    ಹೊಸ ಚಿತ್ರದ ಸಿದ್ಧತೆಯಲ್ಲಿ ಕೆ. ಮಂಜು ಮಗ ಶ್ರೇಯಸ್​

    ಬೆಂಗಳೂರು: ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್​​, ಇತ್ತೀಚೆಗಷ್ಟೇ ಹೊಸದಾಗಿ ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಯಾಕೆ? ಏನು? ಎಂಬ ರಹಸ್ಯಗಳನ್ನು ಬಚ್ಚಿಟ್ಟಿದ್ದ ಅವರು, ಹೊಸ ಫೋಟೋಗಳ ಕುರಿತು ಕೊನೆಗೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಸಿನಿಘಮಾ ಕಿರುಚಿತ್ರೋತ್ಸವ – ಚಾಮುಂಡೇಶ್ವರಿ ಸ್ಟುಡಿಯೋಕ್ಕೆ 5 ದಶಕದ ಸಂಭ್ರಮ

    ಪ್ರಮುಖವಾಗಿ ಈ ಫೋಟೋಶೂಟ್​ ಮಾಡಿಸಿದ್ದು ಹೊಸ ಚಿತ್ರಕ್ಕಾಗಿ ಮತ್ತು ಈ ಚಿತ್ರ ಮಾರ್ಚ್​ ಕೊನೆಗೆ ಅಥವಾ ಏಪ್ರಿಲ್​ನಲ್ಲಿ ಶುರುವಾಗಲಿದೆ. ಇದೊಂದು ರೊಮ್ಯಾಂಟಿಕ್​ ಕಾಮಿಡಿ ಚಿತ್ರವಾಗಿದ್ದು, ಕಥೆ ಓಕೆ ಆಗಿದೆ. ಆದರೆ, ನಿರ್ದೇಶಕರ್ಯರು ಎಂಬುದು ಇನ್ನೂ ಪಕ್ಕಾ ಆಗಿಲ್ಲವಂತೆ. ನೃತ್ಯ ನಿರ್ದೇಶಕ ಇಮ್ರಾನ್​ ಸರ್ದಾರಿಯಾ ಅವರ ನೇತೃತ್ವದಲ್ಲಿ ಈ ಚಿತ್ರ ತಯಾರಾಗುತ್ತಿದೆಯಂತೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಶ್ರೇಯಸ್​, ‘ನಾನು ‘ವಿಷ್ಣುಪ್ರಿಯ’ ಮಾಡುವಾಗಲೇ ಈ ಕಥೆ ಕೇಳಿ ಇಷ್ಟಪಟ್ಟಿದ್ದೆ. ಇದೊಂದು ರಾಮಕಾಮ್​ ಆಗಿದ್ದು, ಬಹಳ ಸ್ಟೈಲಿಶ್​ ಆಗಿರುತ್ತದೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಯಾವುದೇ ಸಂದೇಶವಿಲ್ಲ. ಸದ್ಯಕ್ಕೆ ಕೆಲಸಗಳು ನಡೆಯುತ್ತಿದ್ದು, ನಿರ್ದೇಶಕರ ಆಯ್ಕೆ ಆಗಿಲ್ಲ’ ಎನ್ನುತ್ತಾರೆ ಶ್ರೇಯಸ್​.

    ಇನ್ನು, ಅದಕ್ಕೂ ಮುನ್ನ ಒಂದು ಚಿತ್ರದಲ್ಲಿ ಅವರು ನಟಿಸುವ ಸಾಧ್ಯತೆ ಇದ್ದು, ಇದು ಸಹ ‘ವಿಷ್ಣುಪ್ರಿಯ’ ತರಹ ದ್ವಿಭಾಷಾ ಚಿತ್ರವಂತೆ. ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: 2021ರ ಮೊದಲ ಚಿತ್ರವಾಗಿ ‘ರಾಜತಂತ್ರ’

    ಈ ಮಧ್ಯೆ, ‘ವಿಷ್ಣುಪ್ರಿಯ’ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಚಿತ್ರಮಂದರಿಗಳಲ್ಲಿ ಶೇ 100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕ ನಂತರವಷ್ಟೇ ಬಿಡುಗಡೆ ಮಾಡಲಾಗುತ್ತದಂತೆ. ಈ ಚಿತ್ರದಲ್ಲಿ ಶ್ರೇಯಸ್​ಗೆ ಪ್ರಿಯಾ ವಾರಿಯರ್​ ನಾಯಕಿಯಾಗಿ ನಟಿಸಿದ್ದು, ಮಲಯಾಳಂನ ಜನಪ್ರಿಯ ನಿರ್ದೇಶಕ ವಿ.ಕೆ. ಪ್ರಕಾಶ್​ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    ಬಿಕಿನಿ ತೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ; ತಾಯಿ ಭೈರವಿ ನಗ್ನಳಾಗಿ ಬಂದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts