More

    ‘ಎಲ್ಲಿದ್ದೆ ಇಲ್ಲಿ ತನಕ’ ನಿರ್ದೇಶಕರ ಹೊಸ ಚಿತ್ರದಲ್ಲಿ ಶಿವರಾಜಕುಮಾರ್​

    ಬೆಂಗಳೂರು: ಶಿವರಾಜಕುಮಾರ್​ ಅಭಿನಯದ ‘ವೇದ’ ಬಿಡುಗಡೆಯಾದ ಮೇಲೆ ಸುಮ್ಮನೆ ಕೂತಿಲ್ಲ. ತಮ್ಮ ತಂಡವನ್ನು ಕಟ್ಟಿಕೊಂಡು ಊರೂರು ಸುತ್ತಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಚಿತ್ರವನ್ನು ಆದಷ್ಟೂ ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

    ಇದನ್ನೂ ಓದಿ: ಅಂತಹ ಮೈಂಡ್​ಲೆಸ್​ ಚಿತ್ರ ನೋಡುವುದಿಲ್ಲ … ‘ಕೆಜಿಎಫ್​ 2’ ಬಗ್ಗೆ ಕಿಶೋರ್​ ಮಾತು

    ಈ ಮಧ್ಯೆ, ಅವರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಅವರ ಹಲವು ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಶಿವಾರ್ಜುನ್​, ಈಗಾಗಲೇ ಚಿರು ಸರ್ಜಾ ಅಭಿನಯದ ‘ಶಿವಾರ್ಜುನ’ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ನಿರ್ಮಾಣದ ಹೊಸ ಚಿತ್ರದಲ್ಲಿ ಶಿವರಾಜಕುಮಾರ್​ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಶಿವಾರ್ಜುನ್​ ಪತ್ನಿ ಮಂಜುಳಾ ನಿರ್ಮಿಸುತ್ತಿರುವ ಈ ಚಿತ್ರವನ್ನು ತೇಜಸ್ವಿ ಕೆ. ನಾಗ್​ ನಿರ್ದೇಶನ ಮಾಡುತ್ತಿದ್ದಾರೆ. ತೇಜಸ್ವಿ ಈ ಹಿಂದೆ ಸೃಜನ್ ಲೋಕೇಶ್ ಅಭಿನಯದ ‘ಎಲ್ಲಿದೆ ಇಲ್ಲಿ ತನಕ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ತೇಜಸ್​ ಮಾಡಿಕೊಂಡಿರುವ ಕಥೆಯನ್ನು ಕೇಳಿ, ಶಿವಣ್ಣ ಒಪ್ಪಿಕೊಂಡಿದ್ದಾರೆ. ಇದವರೆಗೂ ಮಾಡಿರದ ಒಂದು ವಿಭಿನ್ನ ಪಾತ್ರದಲ್ಲಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಚಿತ್ರ ಇದೇ ವರ್ಷ ಪ್ರಾರಂಭವಾಗಲಿದ್ದು, ಶೀರ್ಷಿಕೆ ಮತ್ತು ಇನ್ನಿತರ ವಿಷಯಗಳು ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಲಿದೆಯಂತೆ,

    ಇದನ್ನೂ ಓದಿ: ನಾನು ಸಿನಿಮಾ ನೋಡೋದನ್ನು ತಡೆಯೋಕೆ ನೀವ್ಯಾರು? ಆಶಾ ಪರೇಖ್​ ಪ್ರಶ್ನೆ

    ಅಂದಹಾಗೆ, ಶಿವಣ್ಣ ಅಭಿನಯದ ‘ಕರಟಕ ದಮನಕ’ ಮತ್ತು ‘ಘೋಸ್ಟ್​’ ಚಿತ್ರಗಳು ಅರ್ಧ ಮುಗಿದಿದ್ದು, ಈ ಚಿತ್ರಗಳು ಮುಗಿಯುತ್ತಿದ್ದಂತೆಯೇ ’45’ ಮತ್ತು ‘ಅಶ್ವತ್ಥಾಮ’ ಚಿತ್ರಗಳು ಶುರುವಾಗಲಿದೆಯಂತೆ. ಆ ಚಿತ್ರಗಳು ಮುಗಿದ ಮೇಲೆ, ಶಿವಾರ್ಜುನ್​ ನಿರ್ಮಾಣದ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.

    ‘ವಾರಿಸು’ ವರ್ಸಸ್ ‘ತುನಿವು’; ಅತೀ ಹೆಚ್ಚು ವೀಕ್ಷಣೆ ಯಾವ ಟ್ರೈಲರ್​ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts