ಗುಜರಾತ್: ಚೆನ್ನಾಗಿ ಓದು ಎಂದು ಮಕ್ಕಳಿಗೆ ಮನೆಯಲ್ಲಿ ಬುದ್ಧಿ ಹೇಳುವುದು, ಬಯ್ಯುವುದೆಲ್ಲ ಹೊಸದೇನಲ್ಲ. ಆದರೆ ಈ ಘಟನೆ ಹಾಗೆ ಹೇಳುವುದಕ್ಕೂ ಪೋಷಕರು ಹಿಂಜರಿಯುವಂತೆ ಮಾಡುವ ಹಾಗಿದೆ. ಅಪ್ಪ-ಅಮ್ಮ ಹಾಗೂ ಅಜ್ಜಿ ‘ಓದು ಓದು’ ಅಂತ ಬೈದರು ಎಂದು ಬೇಜಾರಾದ ಈ ಹುಡುಗ ಒಂದಿಡೀ ವಾರ ಅವರನ್ನೆಲ್ಲ ಟೆನ್ಷನ್ನಲ್ಲಿ ಇರುವಂಥ ಕಿತಾಪತಿ ಮಾಡಿದ್ದಾನೆ.
ಗುಜರಾತ್ನ ವಡೋದರದಲ್ಲಿನ ಈ ಎಸ್ಎಸ್ಎಲ್ಸಿ ವಿದ್ಯಾರ್ಥಿ ಮನೆಯವರ ಮೇಲೆ ಬೇಸರ ಮಾಡಿಕೊಂಡವನೇ ಸೀದಾ ಗೋವಾಗೆ ಹೋಗಿ ಕ್ಲಬ್-ಪಬ್ಗಳಲ್ಲಿ ಎಂಜಾಯ್ ಮಾಡಿದ್ದಾನೆ. ಕಳೆದ ವಾರ ಹೇಳದೆ ಕೇಳದೆ ಮನೆಯಿಂದ ಹೊರಟಿದ್ದ ಈತ ಮೊದಲಿಗೆ ವಡೋದರದಿಂದ ಗೋವಾಗೆ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಪಡೆಯಲು ಮುಂದಾಗಿದ್ದ. ಆದರೆ ಆಧಾರ್ ಕಾರ್ಡ್ ಇರದ ಕಾರಣ ಅದು ಸಾಧ್ಯವಾಗಿರಲಿಲ್ಲ. ಬಳಿಕ ಅಲ್ಲಿಂದ ಪುಣೆಗೆ ಬಸ್ನಲ್ಲಿ ತೆರಳಿದ ಈತ, ನಂತರ ಇನ್ನೊಂದು ಬಸ್ನಲ್ಲಿ ಗೋವಾ ತಲುಪಿದ್ದ.
ಇದನ್ನೂ ಓದಿ: ‘ಸೆಕ್ಸ್ಪರ್ಟ್’ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ…
ಗೋವಾದಲ್ಲಿ ಸಿಕ್ಕ ಸಿಕ್ಕ ಪಬ್-ಕ್ಲಬ್ಗಳಿಗೆ ತೆರಳಿ ಮನಸೋ ಇಚ್ಛೆ ಎಂಜಾಯ್ ಮಾಡಿದ ಈತ, ಇನ್ನೇನು ಮನೆಯಿಂದ ತಂದಿದ್ದ ಹಣವೆಲ್ಲ ಖಾಲಿಯಾಗಿಬಿಡುತ್ತದೆ ಎನ್ನುವಾಗಲೇ ಅಲ್ಲಿಂದ ವಾಪಸ್ ಹೊರಟಿದ್ದು. ಇತ್ತ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ಕೊಟ್ಟ ತಂದೆ-ತಾಯಿಗೆ ಮತ್ತೊಂದು ಶಾಕ್ ಕಾದಿತ್ತು. ಏಕೆಂದರೆ ಮನೆಯಲ್ಲಿಟ್ಟಿದ್ದ 1.5 ಲಕ್ಷ ರೂ. ಕಾಣೆಯಾಗಿತ್ತು. ಅಷ್ಟರಲ್ಲಾಗಲೇ ಹುಡುಗ ಪುಣೆಗೆ ಮರಳಿದ್ದ.
ಮೊಬೈಲ್ಫೋನ್ ಜಾಡು ಹಿಡಿದು ಹುಡುಕಲೆತ್ನಿಸಿದ್ದ ಪೊಲೀಸರಿಗೆ ಅದು ಸಾಧ್ಯವಾಗಿರಲಿಲ್ಲ. ಏಕೆಂದರೆ ಇವನು ಮೊಬೈಲ್ಫೋನ್ ಸ್ವಿಚ್ಡ್ ಆಫ್ ಮಾಡಿಟ್ಟುಕೊಂಡಿದ್ದ. ಡಿ. 25ರಂದು ಪುಣೆಯಲ್ಲಿ ಈತ ಫೋನ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಟ್ರೇಸ್ ಮಾಡಿದ್ದ ಪೊಲೀಸರು ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಪುಣೆ ಪೊಲೀಸರು ಈ ಪೋರನನ್ನು ಪತ್ತೆ ಮಾಡಿ, ಡಿ. 26ರಂದು ವಡೋದರ ಪೊಲೀಸರಿಗೆ ಒಪ್ಪಿಸಿದ ಮೇಲೆ ನಾಪತ್ತೆ ಪ್ರಕರಣ ಸುಖಾಂತಗೊಂಡಿದೆ. (ಏಜೆನ್ಸೀಸ್)
ಇದನ್ನೂ ಓದಿ: ವರ್ಷಾಂತ್ಯದ ರಾತ್ರಿ ಇಲ್ಲೆಲ್ಲ ಹೋಗಲೇಬೇಡಿ; ಹೋದರೆ ಅಷ್ಟೇ..
ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್: ಕೊರಗಿ ಕೊರಗಿ ಆತ್ಮಹತ್ಯೆಗೆ ಶರಣಾದ ಹುಡುಗ..!