More

    ಅನ್ಯ ಧರ್ಮದ ಪ್ರಾರ್ಥನೆ ಓದುವಂತೆ ಶಾಲಾ ಮಕ್ಕಳಿಗೆ ಒತ್ತಾಯ: ಪ್ರಾಂಶುಪಾಲನಿಗೆ ಮನಬಂದಂತೆ ಥಳಿಸಿದ ಜನ

    ಪುಣೆ: ಮಕ್ಕಳಿಗೆ ಕ್ರೈಸ್ತ ಧರ್ಮದ ಪ್ರಾರ್ಥನೆಗಳನ್ನು ಓದಲು ಒತ್ತಾಯ ಮಾಡುತ್ತಿದ್ದ ಎಂಬ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲನಿಗೆ ಥಳಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಡಿ.ವಾಯ್​. ಪಾಟೀಲ್​ ಶಾಲೆಯ ಪ್ರಾಂಶುಪಾಲನಾಗಿರುವ ಅಲೆಕ್ಸಾಂಡರ್ ಮೇಲೆ ಹಲ್ಲೆ ನಡೆಸಲಾಗಿದ್ದು​, ಮಕ್ಕಳಿಗೆ ಬಲವಂತವಾಗಿ ಕ್ರಿಶ್ಚಿಯನ್ ಪ್ರಾರ್ಥನೆ ಓದುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ ನಂತರ ಈ ಘಟನೆ ನಡೆದಿದೆ.

    ಇದನ್ನೂ ಓದಿ: ಸದನದಲ್ಲಿ ಕೋಲಾಹಲ ಎಬ್ಬಿಸಿದ ಮಂಡ್ಯ ಚಾಲಕನ ಆತ್ಮಹತ್ಯೆ ಯತ್ನ ಕೇಸ್​: ಸರ್ಕಾರಕ್ಕೆ ಎಚ್​ಡಿಕೆ, ಬೊಮ್ಮಾಯಿ ಚಾಟಿ

    ಹಲವಾರು ಪೋಷಕರು, ಹಿಂದೂ ಹಬ್ಬಗಳಿಗೆ ವಿದ್ಯಾರ್ಥಿಗಳಿಗೆ ರಜೆ ನೀಡಿಲ್ಲ ಮತ್ತು ಕ್ರಿಶ್ಚಿಯನ್​​ ಸಂಬಂಧಿತ ಪ್ರಾರ್ಥನೆಯನ್ನು ಓದುವಂತೆ ಮಕ್ಕಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಹಲವು ಹಿಂದೂ ಕಾರ್ಯಕರ್ತರು, ಹುಡುಗಿಯರ ವಾಶ್ ರೂಂನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ಆದರೆ ಶಾಲೆಯ ಆಡಳಿತ ಮಂಡಳಿ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ಪ್ರಾಂಶುಪಾಲನನ್ನು ಅಮಾನತುಗೊಳಿಸಿ ರಜೆ ಮೇಲೆ ಕಳುಹಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts