ಲಖಿಂಪುರಖೇರಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ ಮೂವರು ಗೆಳೆಯರನ್ನು ಕಾಡು ಆನೆಗಳ ಹಿಂಡು ಬೆನ್ನಟ್ಟಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದಿದೆ.
ಈ ಕುರಿತಾದ ವೀಡಿಯೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೂವರು ಗೆಳೆಯರು ನೇಪಾಳಕ್ಕೆ ತೆರಳುತ್ತಿದ್ದ ವೇಳೆ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ಆನೆಯ ಹಿಂಡಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿ ಅವುಗಳನ್ನು ಅಡ್ಡಗಟ್ಟಿದ್ದಾರೆ.
#UP के लखीमपुर खीरी जिले में #टस्कर हाथियों के झुंड के साथ सेल्फी लेना युवकों को को काफ़ी महंगा पड़ा 🙅 हाथियों के झुंड ने दौड़ाया,यूवको ने दौड़कर बमुश्किल हाथियों से बचाई अपनी जान 😢#वायरल_वीडियो पलिया तहसील के दुधवा टाइगर रिजर्व के पलिया गौरीफंटा मार्ग का है pic.twitter.com/P49c2v1lUo
— Dr.Ahtesham Siddiqui (@AhteshamFIN) July 4, 2023
ಈ ವೇಳೆ ಆನೆಗಳು ಸಿಟ್ಟಿಗೆದ್ದಿದ್ದು, ಮೂವರನ್ನು ಬೆನ್ನಟ್ಟಿವೆ. ಮೂವರು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಒಬ್ಬ ವ್ಯಕ್ತಿ ಎಡವಿ ರಸ್ತೆಯ ಮೇಲೆ ಬಿದ್ದಿದ್ದಾನೆ. ಆದರೆ ಮತ್ತೇ ಚೇತರಿಸಿಕೊಂಡು ಓಡಲು ಪ್ರಾರಂಭಿಸಿದ್ದು, ಎದುರಿಗೆ ನಿಂತಿದ್ದ ದಾರಿಹೋಕರೊಬ್ಬರು ಈ ಘಟನೆಯನ್ನು ತಮ್ಮ ಸ್ಮಾರ್ಟ್ಫೋನ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)