ನವದೆಹಲಿ: ಯೆಸ್ ಬ್ಯಾಂಕ್ ಆರ್ಥಿಕವಾಗಿ ದಿವಾಳಿಯಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಅದರ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಬ್ಯಾಂಕ್ನ ಸುಪರ್ದಿಗೆ ತೆಗೆದುಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ)ಕ್ಕೆ ಯೆಸ್ ಬ್ಯಾಂಕ್ನ ಮೇಲೆ ಹೂಡಿಕೆ ಮಾಡುವಂತೆ ಆರ್ಬಿಐ ತಿಳಿಸಿದೆ. ಹಾಗಾಗಿ ಯೆಸ್ ಬ್ಯಾಂಕ್ನ ಗ್ರಾಹಕರು ಹೆದರುವ ಅವಶ್ಯಕತೆ ಇಲ್ಲ ಎಂದು ಎಸ್ಬಿಐನ ಮುಖ್ಯಸ್ಥ ರಜನೀಶ್ ಕುಮಾರ್ ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ರಜನೀಶ್ ಕುಮಾರ್, “ಎಸ್ಬಿಐ ಹೆಜ್ಜೆ ಇಟ್ಟಿದೆ ಎಂದರೆ ಅಲ್ಲಿ ಗ್ರಾಹಕರು ಹೆದರುವ ಅವಶ್ಯಕತೆ ಇರುವುದಿಲ್ಲ. ಯೆಸ್ ಬ್ಯಾಂಕ್ನ ಆಡಳಿತ ವ್ಯವಸ್ಥೆಯನ್ನು ನಾವು ಸುಧಾರಿಸುತ್ತೇವೆ. ಗ್ರಾಹಕರು ಹೆದರಬೇಡಿ.” ಎಂದು ಹೇಳಿದ್ದಾರೆ.
ಆರ್ಬಿಐ ತಮಗೆ ಯೆಸ್ ಬ್ಯಾಂಕ್ನ ಮೇಲೆ 10,000 ಕೋಟಿ ಹಣವನ್ನು ಹೂಡಿಕೆ ಮಾಡಲು ಹೇಳಿದೆ. ಆದರೆ ಯೆಸ್ ಬ್ಯಾಂಕ್ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕನಿಷ್ಠ 20ರಿಂದ 22 ಸಾವಿರ ಕೋಟಿ ಹಣದ ಅಗತ್ಯತೆ ಇದೆ. ಅದಕ್ಕೆ ಹೂಡಿಕೆ ಮಾಡಲು ಅನೇಕ ಹೂಡಿಕೆದಾರರು ಸಿದ್ಧರಾಗಿದ್ದಾರೆ. ನಾವು, ಆರ್ಬಿಐ ಮತ್ತು ಸರ್ಕಾರ ಮೂವರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆರ್ಬಿಐ ಜತೆ ನಿಕಟ ಸಂಬಂಧ ಹೊಂದಿರುವ ನಾವು ಸಮಸ್ಯೆಯನ್ನು ಬಗೆಹರಿಸುತ್ತೇವೆ. ಇನ್ನು ಒಂದು ವಾರದಲ್ಲಿ ಹಣ ಮರುಪಡೆಯುವಿಕೆಯ ಮೇಲಿರುವ ನಿರ್ಬಂಧವನ್ನು ತೆಗೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಗ್ರಾಹಕರೇ ಎಚ್ಚರ, ಮಾ.16ರ ನಂತರ ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು!