More

    ಬಹುಕೋಟಿ ಹಗರಣ; ಜಮ್ಮು-ಕಾಶ್ಮೀರ ಮಾಜಿ ರಾಜ್ಯಪಾಲರಿಗೆ ಸಿಬಿಐ ನೋಟಿಸ್​

    ನವದೆಹಲಿ: ಇತ್ತಿಚಿಗೆ ಪುಲ್ವಾಮಾ ದಾಳಿ ಕುರಿತು ಹೇಳಿಕೆ ನಿಡಿದ ಸುದ್ದಿಯಲ್ಲಿದ್ದ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್​ಗೆ ಸಿಬಿಐ ನೋಟಿಸ್​ ಜಾರಿ ಮಾಡಿದೆ.

    ಜಮ್ಮು-ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.

    ಬಹುಕೋಟಿ ಹಗರಣ

    ಕಳೆದ ವರ್ಷ ಏಪ್ರಿಲ್​ನಲ್ಲಿ ಮಲ್ಲಿಕ್​ ಕಿರು ಹೈಡ್ರೋ ಎಲೆಕ್ಟ್ರಿಕ್​ ಪವರ್​ ಪ್ರಾಜೆಕ್ಟ್​ ಹಾಗೂ ಸರ್ಕಾರಿ ನೌಕರರಿಗೆ ವಿಮಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಕುರಿತು ಮಲಿಕ್​ ಆರೋಪಿಸಿದ್ದರು.

    ಇದನ್ನೂ ಓದಿ: ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರ್ಪಡೆಯಾದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್​

    ಮಲಿಕ್​ ಅವರು ಮಾಡಿರುವ ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಮತ್ತು ಸಾಕ್ಷ್ಯಾಧಾರಗಳಿದ್ದಲ್ಲಿ ಒದಗಿಸುವಂತೆ ಕೇಳಲಾಗಿದೆ. ಇತ್ತೀಚಿಗೆ ಖಾಸಗಿ ಸು್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಲಿಕ್​ ಭ್ರಷ್ಟಾಚಾರದ ವಿರುದ್ದ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೇ ಒಲವಿಲ್ಲ ಎಂದು ಆರೋಪಿಸಿದ್ದರು.

    ನಾನು ಸತ್ಯದ ಪರ ನಿಲ್ಲುತ್ತೇನೆ

    ಈ ಕುರಿತು ಪ್ರತಿಕ್ರಿಯಿಸಿರುವ ಮಲಿಕ್​ ನನಗೆ ಯಾವುದೇ ನೋಟಿಸ್​ ನೀಡಿಲ್ಲ. ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ತಿಳಿಸಲಾಗಿದೆ. ಏಪ್ರಿಲ್​ 28ರಂದು ದೆಹಲಿಯಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ಧಾರೆ.

    ನಾನು ಸತ್ಯವನ್ನು ಹೇಳುವ ಮೂಲಕ ಕೆಲವರ ಪಾಪವನ್ನು ಬಯಲಿಗೆಳೆದಿದ್ದೇನೆ. ಬಹುಶಃ ಅದಕ್ಕಾಗಿಯೇ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ನಾನು ರೈತನ ಮಗನಾಗಿದ್ದು ಸತ್ಯದ ಪರ ನಿಲ್ಲುತ್ತೇನೆ ಎಂದು ಸತ್ಯಪಾಲ್​ ಮಲಿಕ್​ ಹೇಳಿದ್ದಾರೆ.

    https://twitter.com/Satyapalmalik_/status/1649417728518660098?ref_src=twsrc%5Etfw%7Ctwcamp%5Etweetembed%7Ctwterm%5E1649417728518660098%7Ctwgr%5Eb2e93c02065dd992ed5689ea48273b3e1991c4f5%7Ctwcon%5Es1_&ref_url=https%3A%2F%2Fwww.deccanherald.com%2Fnational%2Fsatya-pal-malik-who-made-allegations-against-modi-summoned-by-cbi-in-insurance-scam-case-1211779.html

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts