More

    ಸದ್ಯ ಬಾಲಿವುಡ್​ನಲ್ಲಿ ಯಾರೂ ಮಾಡದ ಸಾಹಸಕ್ಕೆ ಕೈ ಹಾಕಿದ ಸಲ್ಮಾನ್​ ಖಾನ್​!

    ಕರೊನಾ ಲಾಕ್​ಡೌನ್​ನಿಂದಾಗಿ ಕಳೆದ ಮೂರು ತಿಂಗಳ ಕಾಲ ಇಡೀ ದೇಶವೇ ಸ್ಥಬ್ಧವಾಗಿತ್ತು. ಇತ್ತೀಚೆಗಷ್ಟೇ ಒಂದಷ್ಟು ಕ್ಷೇತ್ರಗಳಿಗೆ ಸಡಿಲಿಕೆ ನೀಡಿ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಹೋಗುವಂತೆ ಆದೇಶಿಸಿತ್ತು. ಆ ನೀತಿ ಸಿನಿಮಾ ಕ್ಷೇತ್ರಕ್ಕೂ ಅನ್ವಯವಾಗಿತ್ತು. ಸೀಮಿತ ಜನರನ್ನು ಬಳಸಿಕೊಂಡು ಪೋಸ್ಟ್ ಪ್ರೊಡಕ್ಷನ್​ ಕೆಲಸಗಳನ್ನು ಮಾಡಿಕೊಳ್ಳುವಂತೆ ಹೇಳಿತ್ತು. ಇದೀಗ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅದೆಲ್ಲವನ್ನು ಬಿಟ್ಟು ನೇರವಾಗಿ ಸಿನಿಮಾ ಶೂಟಿಂಗ್​ಗೆ ಇಳಿಯಲು ಸಜ್ಜಾಗಿದ್ದಾರೆ!

    ಇದನ್ನೂ ಓದಿ: ಕ್ಯೂನಲ್ಲಿ ಶ್ರೇಯಸ್; ಈ ಚಿತ್ರಕ್ಕೂ ನಾಗಶೇಖರ್ ನಿರ್ದೇಶನ

    ಹೌದು, ಪ್ರಭುದೇವ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ರಾಧೆ; ಯುವರ್​ ಮೋಸ್ಟ್ ವಾಂಟೆಡ್ ಭಾಯಿ’ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡೊಂದರ ಶೂಟಿಂಗ್​ ಮತ್ತು ಕೆಲ ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಅದನ್ನು ಶೂಟ್​ ಮಾಡಿಕೊಳ್ಳಲು ಚಿತ್ರತಂಡ ಸಿದ್ಧತೆ ನಡೆಸಿದ್ದು, ಇನ್ನು ಕೆಲದಿನಗಳಲ್ಲಿ ಸಲ್ಮಾನ್​ ಸೆಟ್​ಗೆ ಆಗಮಿಸಲಿದ್ದಾರೆ. ಈ ಮೊದಲು ಈ ಹಾಡಿನ ಚಿತ್ರೀಕರಣಕ್ಕೆ ಅಜರ್​ಬೈಜಾನ್​ ದೇಶವನ್ನು ಆಯ್ದುಕೊಳ್ಳಲಾಗಿತ್ತು. ಇದೀಗ ಅದರ ಬದಲು ಮುಂಬೈನಲ್ಲಿಯೇ ಸೆಟ್​ ನಿರ್ಮಾಣ ಮಾಡಿ ಶೂಟಿಂಗ್​ ಮಾಡಿಕೊಳ್ಳಲಿದ್ದಾರೆ.

    ಇದನ್ನೂ ಓದಿ: PHOTO GALLERY: ನೆನಪಿನ ಪುಟಗಳಿಂದ; ಚಿರು- ಮೇಘನಾ ರಾಜ್​ ಮದುವೆಯ ಕ್ಷಣಗಳು..

    ದಿಶಾ ಪಟಾಣಿ ಸಹ ಈ ಹಾಡಿನಲ್ಲಿ ಇರಲಿದ್ದು, ಸೀಮಿತ ಕಾರ್ಮಿಕರು ಮತ್ತು ಟೆಕ್ನಿಷಿಯನ್ಸ್​ಗಳಷ್ಟೇ ಸೆಟ್​ನಲ್ಲಿ ಇರಲಿದ್ದು, ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ರಂಜಾನ್​ ಹಬ್ಬದ ಹಿನ್ನೆಲೆಯಲ್ಲಿ ಈ ಸಿನಿಮಾ ತೆರೆಕಂಡಿರಬೇಕಿತ್ತು. (ಏಜೆನ್ಸೀಸ್​)

    ಮೊದಲ ಬಾರಿ ಒಂದಾಗಲಿದ್ದಾರೆ ರಣವೀರ್- ಕತ್ರಿನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts