ಕರೊನಾ ಲಾಕ್ಡೌನ್ನಿಂದಾಗಿ ಕಳೆದ ಮೂರು ತಿಂಗಳ ಕಾಲ ಇಡೀ ದೇಶವೇ ಸ್ಥಬ್ಧವಾಗಿತ್ತು. ಇತ್ತೀಚೆಗಷ್ಟೇ ಒಂದಷ್ಟು ಕ್ಷೇತ್ರಗಳಿಗೆ ಸಡಿಲಿಕೆ ನೀಡಿ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಹೋಗುವಂತೆ ಆದೇಶಿಸಿತ್ತು. ಆ ನೀತಿ ಸಿನಿಮಾ ಕ್ಷೇತ್ರಕ್ಕೂ ಅನ್ವಯವಾಗಿತ್ತು. ಸೀಮಿತ ಜನರನ್ನು ಬಳಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳುವಂತೆ ಹೇಳಿತ್ತು. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅದೆಲ್ಲವನ್ನು ಬಿಟ್ಟು ನೇರವಾಗಿ ಸಿನಿಮಾ ಶೂಟಿಂಗ್ಗೆ ಇಳಿಯಲು ಸಜ್ಜಾಗಿದ್ದಾರೆ!
ಇದನ್ನೂ ಓದಿ: ಕ್ಯೂನಲ್ಲಿ ಶ್ರೇಯಸ್; ಈ ಚಿತ್ರಕ್ಕೂ ನಾಗಶೇಖರ್ ನಿರ್ದೇಶನ
ಹೌದು, ಪ್ರಭುದೇವ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯಿ’ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡೊಂದರ ಶೂಟಿಂಗ್ ಮತ್ತು ಕೆಲ ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಅದನ್ನು ಶೂಟ್ ಮಾಡಿಕೊಳ್ಳಲು ಚಿತ್ರತಂಡ ಸಿದ್ಧತೆ ನಡೆಸಿದ್ದು, ಇನ್ನು ಕೆಲದಿನಗಳಲ್ಲಿ ಸಲ್ಮಾನ್ ಸೆಟ್ಗೆ ಆಗಮಿಸಲಿದ್ದಾರೆ. ಈ ಮೊದಲು ಈ ಹಾಡಿನ ಚಿತ್ರೀಕರಣಕ್ಕೆ ಅಜರ್ಬೈಜಾನ್ ದೇಶವನ್ನು ಆಯ್ದುಕೊಳ್ಳಲಾಗಿತ್ತು. ಇದೀಗ ಅದರ ಬದಲು ಮುಂಬೈನಲ್ಲಿಯೇ ಸೆಟ್ ನಿರ್ಮಾಣ ಮಾಡಿ ಶೂಟಿಂಗ್ ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: PHOTO GALLERY: ನೆನಪಿನ ಪುಟಗಳಿಂದ; ಚಿರು- ಮೇಘನಾ ರಾಜ್ ಮದುವೆಯ ಕ್ಷಣಗಳು..
ದಿಶಾ ಪಟಾಣಿ ಸಹ ಈ ಹಾಡಿನಲ್ಲಿ ಇರಲಿದ್ದು, ಸೀಮಿತ ಕಾರ್ಮಿಕರು ಮತ್ತು ಟೆಕ್ನಿಷಿಯನ್ಸ್ಗಳಷ್ಟೇ ಸೆಟ್ನಲ್ಲಿ ಇರಲಿದ್ದು, ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಈ ಸಿನಿಮಾ ತೆರೆಕಂಡಿರಬೇಕಿತ್ತು. (ಏಜೆನ್ಸೀಸ್)