More

    ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡ ಸಲ್ಮಾನ್​ ಖಾನ್​…

    ತೆರೆಮೇಲೆ ಸೂಪರ್​​ಸ್ಟಾರ್ ಆಗಿರುವ ಬಾಲಿವುಡ್​ ನಟ ಸಲ್ಮಾನ್​ ಖಾನ್​ ತೆರೆ ಹಿಂದೆಯೂ ಸೂಪರ್​ಸ್ಟಾರ್. ಬಿಯಿಂಗ್​ ಹ್ಯೂಮನ್​ ಸಂಸ್ಥೆ ಮೂಲಕ ಈಗಾಗಲೇ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು, ಇದೀಗ ಇನ್ನೊಂದು ಮಹತ್ತರವಾದ ಕೆಲಸಕ್ಕೆ ಕೈ ಹಾಕಿದ್ದಾರೆ.

    ಇದನ್ನೂ ಓದಿ: ಶೂಟಿಂಗ್​ನಲ್ಲಿ ಭಾಗಿಯಾದ ನಟಿ ಹರಿಪ್ರಿಯಾ; ಆದ್ರೆ, ಇದು ಸಿನಿಮಾ ಅಲ್ಲ!

    ಕೆಲ ವರ್ಷಗಳ ಹಿಂದಷ್ಟೇ ಕೊಲ್ಲಾಪುರ ಜಿಲ್ಲೆಯ ಕಿದ್ರಾಪುರ ಗ್ರಾಮವನ್ನು ಸಲ್ಮಾನ್​ ದತ್ತು ಪಡೆದುಕೊಂಡಿದ್ದರು. ಆದರೆ, ಕಳೆದ ವರ್ಷ ಆ ಗ್ರಾಮ ನೆರೆಹಾವಳಿಯಿಂದ ಅಕ್ಷರಶಃ ನೀರಾಗಿತ್ತು. ಮನೆ ಕಳೆದುಕೊಂಡು ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿದ್ದವು. ಆವತ್ತೇ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದರು. ಆವತ್ತು ಕೊಟ್ಟ ಮಾತಿನಂತೆ ಸಲ್ಮಾನ್​ ಖಾನ್ ಮೊದಲ ಹಂತವಾಗಿ 70 ಮನೆಗಳನ್ನು ನಿರ್ಮಾಣ ಮಾಡಿ ಕೊಡುವ ಜವಾಬ್ದಾರಿ ಹೊತ್ತಿದ್ದಾರೆ.

    ಇತ್ತೀಚೆಗಷ್ಟೇ ಆ ಗ್ರಾಮದಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದ್ದು, ಸರ್ಕಾರದ ಗಮನಕ್ಕೂ ತರಲಾಗಿತ್ತು. ಇದೀಗ ಪ್ರತಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 95ಸಾವಿರ ಅನುದಾನ ಬಿಡುಗಡೆಯಾಗಿದ್ದು, ಇನ್ನುಳಿದ ಮೊತ್ತವನ್ನು ಸಲ್ಮಾನ್​ ಖಾನ್​ ಅವರ ಬಿಯಿಂಗ್​ ಹ್ಯೂಮನ್​ ಸಂಸ್ಥೆ ಭರಿಸಲಿದೆ.

    ಇದನ್ನೂ ಓದಿ: `ರ‍್ಯಾಂಬೋ’ ನಿರ್ದೇಶಕ ಚೇಂಜ್ … ಸಿದ್ಧಾರ್ಥ್ ಬದಲು ರೋಹಿತ್​

    ಪ್ರತಿ ಮನೆಯೂ 250 ಚದರ ಅಡಿಯಲ್ಲಿ ಸಿದ್ಧವಾಗಲಿದ್ದು, ಸಲ್ಮಾನ್​ ಖಾನ್​ ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಡಿ ಗ್ರಾಮದ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ. (ಏಜೆನ್ಸೀಸ್​)

    ನಾಗಾರ್ಜುನ ಜನ್ಮದಿನಕ್ಕೆ ‘ಕಾಡುನಾಯಿ’ ಕಡೆಯಿಂದ ಬಂತು ವಿಶೇಷ ಉಡುಗೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts