ಚಂಡೀಗಢ: ಅತ್ಯಂತ ಭಯಾನಕ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ಮೂರು ತಿಂಗಳ ಮಗುವನ್ನು ಜೀವಂತಾಗಿ ಹೂತುಹಾಕಿದ ಘಟನೆ ಚಂಡೀಗಢದಲ್ಲಿ ನಡೆದಿದೆ.
ಮಗುವಿನ ತಾಯಿಯ ಮೇಲೆ ಇರುವ ಕೌಟುಂಬಿಕ ಕಲಹದಿಂದಾಗಿ ಆಕೆಗೆ ಬುದ್ಧಿಕಲಿಸಲು ಇಂಥದ್ದೊಂದು ಭೀಕರ ಕೃತ್ಯ ಎಸಗಿದ್ದಾಳೆ ಸುಖ್ದೀಪ್ ಎಂಬ ಮಹಿಳೆ. ಅಮೀರ್ ಖಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಕಳೆದುಕೊಂಡಿರುವ ನತದೃಷ್ಟ ತಾಯಿಯ ಹೆಸರು ಅಮನ್ದೀಪ್ ಕೌರ್.
ಅಮನ್ದೀಪ್ ಅವರಿಗೆ ಬ್ಯಾಂಕ್ನಲ್ಲಿ ಕೆಲಸವಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಆರು ತಿಂಗಳ ಶಿಶುವನ್ನು ಪಕ್ಕದ ಮನೆಯಲ್ಲಿ ಬಿಟ್ಟುಹೋಗಿದ್ದರು. ಆದರೆ ಅವರು ವಾಪಸ್ ಬಂದಾಗ ಮಗು ನಾಪತ್ತೆಯಾಗಿತ್ತು. ಪಕ್ಕದ ಮನೆಯವರನ್ನು ಕೇಳಿದಾಗ ಇಲ್ಲೇ ಆಡುತ್ತಿದ್ದ ಮಗು ಕಾಣೆಯಾಗಿದೆ ಎಂದು ಹೇಳಿದರು.
ಅಮನ್ದೀಪ್ ಅವರು ಎಲ್ಲೆಡೆ ಮಗುವನ್ನು ಹುಡುಕಿದರೂ ಅದು ಸಿಗಲಿಲ್ಲ. ನಂತರ ಮಗುವನ್ನು ಹುಡುಕಾಡುತ್ತಿರುವಾಗ ಸಮೀಪದ ಮಹಿಳೆಯೊಬ್ಬರು ಶೌಚಗೃಹದ ಸೆಪ್ಟಿಕ್ ಟ್ಯಾಂಕ್ ಬಳಿ ಶಿಶುವೊಂದರ ಕಾಲುಗಳಂತೆ ಕಂಡಿರುವ ವಸ್ತುವನ್ನು ತಾವು ನೋಡಿದ್ದು, ಸಮೀಪ ಹೋಗಲು ಭಯವಾಗಿ ಹೋಗಲಿಲ್ಲ ಎಂದು ಹೇಳಿದರು.
ನಂತರ ಅಮನ್ದೀಪ್ ಅವರು ಅಲ್ಲಿಗೆ ಹೋಗಿ ಆ ಜಾಗವನ್ನು ಅಗೆದು ನೋಡಿದಾಗ ಅಲ್ಲಿ ಅವರ ಮಗು ಜೀವಂತ ಸಮಾಧಿಯಾಗಿತ್ತು. ನಂತರ ಕೂಡಲೇ ಪೊಲೀಸರಿಗೆ ದೂರು ನೀಡಿದ ಅವರು, ಸುಖ್ದೀಪ್ ಈ ಕೆಲಸ ಮಾಡಿರುವುದಾಗಿ ಸಂದೇಹದಿಂದ ಆಕೆಯ ಮೇಲೆ ದೂರು ದಾಖಲಿಸಿದರು.
ನಂತರ ಸುಖ್ದೀಪ್ಳನ್ನು ಪೊಲೀಸರು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟ ಆಕೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಮನ್ದೀಪ್ಗೆ ಬುದ್ಧಿ ಕಲಿಸಲು ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ,. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಚ್ಎಂಟಿಗೆ ಬೇಕಾಗಿದ್ದಾರೆ ಪ್ರತಿಭಾನ್ವಿತರು: ವಿವಿಧ ಹುದ್ದೆಗಳಿಗೆ ಆಹ್ವಾನ- ಬೆಂಗಳೂರಿನಲ್ಲಿ ಕೆಲಸ
ರಾಜ್ಯದಲ್ಲಿ ನಾಳೆಯಿಂದ ಲಾಕ್ಡೌನ್ ಆಗೋದು ನಿಜನಾ? ಸಚಿವ ಸುಧಾಕರ್ ಏನು ಹೇಳಿದ್ರು ಕೇಳಿ…
ರಸ್ತೆಯಲ್ಲಿ ನಿಂತು ಹಾಯ್ ಚೆನ್ನಾಗಿದ್ಯಾ ಎನ್ನುವಷ್ಟರಲ್ಲಿಯೇ ಫೋನ್ ಗಾಯಬ್! ಖತರ್ನಾಕ್ ಖದೀಮರು ಅಂದರ್
ಪತ್ನಿಯ ವಾಟ್ಸ್ಆ್ಯಪ್ನಲ್ಲಿ ಪ್ರಿಯಕರನ ಮೆಸೇಜ್ ನೋಡಿ ದಂಗಾಗಿದ್ದೇನೆ- ವಿಚ್ಛೇದನಕ್ಕೆ ಇದು ಆಧಾರವಾಗಬಹುದಾ?